Latest

ನೆಲಮಂಗಲದಲ್ಲಿ ರೇಣುಕಾಸ್ವಾಮಿ ಕೇಸ್ ಶೈಲಿಯ ಹಲ್ಲೆ: ಯುವಕನ ಮೇಲೆ ಮಾರಣಾಂತಿಕ ದಾಳಿ, ಆರೋಪಿಗಳು ನಾಲ್ವರು ಬಂಧನ

ನೆಲಮಂಗಲ (ಜುಲೈ 7): ರಾಜ್ಯದಾದ್ಯಂತ ಸಾಕಷ್ಟು ಚರ್ಚೆ ಗೊಂಡಿದ್ದ ನಟ ದರ್ಶನ್ ಸಂಬಂಧಿತ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ನೆರಳೇ ಇನ್ನೊಂದು ಹೃದಯ ವಿದ್ರಾವಕ ಘಟನೆ ಇದೀಗ ನೆಲಮಂಗಲದಲ್ಲಿ ಬೆಳಕಿಗೆ ಬಂದಿದೆ. ಈ ಬಾರಿ ಕೂಡಾ ಘಟನೆ ದರ್ಶನ್ ಕೇಸ್ ಗೆ ಹೋಲಿಕೆ ಮಾಡಬಹುದಾದ ರೀತಿಯಲ್ಲಿ ನಡೆದಿದೆ. ಘಟನೆಯು ಅಷ್ಟರಲ್ಲೇ ಅಸಹ್ಯತೆಯ ಗಡಿಗಳನ್ನು ದಾಟಿದೆ.

ವೈಯಕ್ತಿಕ ವೈಮನಸ್ಯಕ್ಕೆ ಯುವಕನ ಮೇಲೆ ಪಶುಸ್ವರೂಪಿ ಹಲ್ಲೆ

ಕುಶಾಲ್ ಎಂಬ ಯುವಕನ ಮೇಲೆ 8 ರಿಂದ 10 ಮಂದಿ ಯುವಕರ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಘಟನೆ ಹಿಂದೆ ಹುಡುಗಿ ವಿಚಾರ ಕಾರಣವಾಗಿದೆ. ಕುಶಾಲ್ ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಒಬ್ಬ ಯುವತಿಯೊಂದಿಗೆ ಪ್ರೀತಿ ಸಂಬಂಧ ಹೊಂದಿದ್ದ. ಆದರೆ ಕೆಲ ತಿಂಗಳ ಹಿಂದೆ ಸಂಬಂಧ ಮುರಿದು ಬಿದ್ದಿತು. ಬಳಿಕ ಯುವತಿಗೆ ಮತ್ತೊಬ್ಬ ಯುವಕನ ಪರಿಚಯವಾಗಿತ್ತು. ಈ ಸಂಬಂಧವನ್ನು ಸಹಿಸದ ಕುಶಾಲ್, ಆಕೆಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ.

ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ಯುವತಿ ತನ್ನ ಗೆಳೆಯರು ಹಾಗೂ ಸ್ನೇಹಿತರೊಂದಿಗೆ ಸೇರಿ ಕುಶಾಲ್ ವಿರುದ್ಧ ಹಲ್ಲೆ ಯೋಜನೆ ಹಾಕಿದ್ದರು. “ಮಾತಾಡೋಣ” ಎಂಬ ನೆಪದಲ್ಲಿ ಕರೆಸಿ, ಕಾರಿನಲ್ಲಿ ಕುಶಾಲನ್ನು ಕಿಡ್ನಾಪ್ ಮಾಡಿ, ದೂರದ ಕಾಡು ಪ್ರದೇಶವೊಂದಕ್ಕೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿಯೇ ಅವನ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ ನಿರ್ದಯ ಹಲ್ಲೆ ನಡೆಸಲಾಗಿದೆ.

ದರ್ಶನ್ ಕೇಸ್ ಉಲ್ಲೇಖಿಸಿ ಹಲ್ಲೆ: ವಿಡಿಯೋ ಮಾಡಿ ಬೆದರಿಕೆ

ಹಲ್ಲೆ ಸಮಯದಲ್ಲಿ ದುಷ್ಕರ್ಮಿಗಳು ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ, “ಇದು ಕೂಡ ಆ ಕೇಸ್‌ಗೂ ಹೋಲಿಕೆಯಾಗುತ್ತದೆ” ಎಂದು ಹೇಳಿರುವುದು ಧೃಡವಾಗಿದ್ದು, ‘ಎ1 ಹೇಮಂತ್, ಎ2 ನಾನು’ ಎಂಬ ರೀತಿಯಲ್ಲಿ ವಿಡಿಯೋ ಮಾಡಿದ್ದಾರೆ. ಹಲ್ಲೆಯ ಚಿತ್ರಣವನ್ನು ಮೊಬೈಲ್‌ನಲ್ಲಿ ಧ್ವನಿಮುದ್ರಣ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಬೆದರಿಕೆಯನ್ನು ನೀಡಲಾಗಿದೆ. ಮರ್ಮಾಂಗದ ಮೇಲೆ ದಾಳಿ ಮಾಡಿ ಯುವಕನನ್ನು ಮಾನಸಿಕ ಹಾಗೂ ಶಾರೀರಿಕವಾಗಿ ದ್ವಂಸಗೊಳಿಸಲಾಗಿದೆ.

ಆರೋಪಿಗಳು ಬಂಧನ: ಪೋಲಿಸ್ ತನಿಖೆ ಆರಂಭ

ಘಟನೆ ಸಂಬಂಧವಾಗಿ ನೆಲಮಂಗಲದ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತಿದ್ದು, ಹೇಮಂತ್, ಯಶ್ವಂತ್, ಶಿವಶಂಕರ್ ಹಾಗೂ ಶಶಾಂಕ್ ಗೌಡ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಕೆಲ ಆರೋಪಿಗಳು ಪಲಾಯನದಲ್ಲಿರುವ ಶಂಕೆ ಇದೆ. ಪೊಲೀಸರು ತನಿಖೆಯನ್ನು ಗಂಭೀರವಾಗಿ ಮುಂದುವರೆಸಿದ್ದು, ಘಟನೆಯ ಹಿಂದಿನ ನಿಖರ ಕಾರಣವನ್ನು ತಿಳಿದುಕೊಳ್ಳಲು ಮುಂದಾಗಿದ್ದಾರೆ.

nazeer ahamad

Recent Posts

ಭಟ್ಕಳ ಘಟನೆಗೆ ಹೊಸ ತಿರುವು: ಯುವತಿಯ ದೂರಿನ ಮೇರೆಗೆ ಮುಸ್ಲಿಂ ಯುವಕ ಬಂಧನ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಮಹಿಳಾ ಸಹೋದ್ಯೋಗಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಕಾರಿನಲ್ಲಿ ಕರೆದೊಯ್ದ ಆರೋಪದ ಹಿನ್ನೆಲೆಯಲ್ಲಿ…

1 hour ago

ಅಧಿಕಾರಿಗೆ ಚಪ್ಪಲಿ ಏಟು: 20 ವರ್ಷವಾದರೂ ಭೂ ಪರಿಹಾರ ನೀಡದ ಬಾಗಲಕೋಟೆ ಅಧಿಕಾರಿಗಳಿಗೆ ಲೋಕಾಯುಕ್ತ ಸಮನ್ಸ್

ಬಾಗಲಕೋಟೆ: ಸುಮಾರು 20 ವರ್ಷಗಳ ಹಿಂದೆ ಭೂಸ್ವಾಧೀನಪಡಿಸಿಕೊಂಡ ಜಮೀನಿಗೆ ಇನ್ನೂ ಪರಿಹಾರ ನೀಡದೇ ರೈತನನ್ನು ಅಲೆದಾಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ…

9 hours ago

ಸಾರ್ವಜನಿಕರ ದೂರುಗಳ ಬೆನ್ನಲ್ಲೇ ದಾಸನಪುರ ಗ್ರಾಮ ಪಂಚಾಯಿತಿ ಪಿಡಿಓ ಉಷಾ ಅಮಾನತು

ಬೆಂಗಳೂರು: ಅಧಿಕೃತ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ…

10 hours ago

ರೈತರ ಹಣ ಗುಳುಂ: ತೊಂಡೇಭಾವಿ ಹಾಲು ಡೇರಿಯಲ್ಲಿ ₹2.33 ಲಕ್ಷ ಹಣ ದುರುಪಯೋಗ.!

ಗೌರಿಬಿದನೂರು: ತೊಂಡೇಭಾವಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರೈತರ ಹಣ ದುರುಪಯೋಗವಾಗಿರುವ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಗ್ರಾಮಸ್ಥರು ಹಾಗೂ…

10 hours ago

₹50 ಸಾವಿರ ಲಂಚ ಸ್ವೀಕರಿಸುವಾಗ ಪಿಎಸ್‌ಐ, ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ

ಕಲಬುರಗಿ: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದ್ದು, ಕಲಬುರಗಿ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಪೊಲೀಸ್…

10 hours ago

4ನೇ ತರಗತಿ ಓದಿದ ಮೆಕ್ಯಾನಿಕ್‌ನ ಅದ್ಭುತ ಸಾಧನೆ: ಮಾರುತಿ 800 ಅನ್ನು ಲ್ಯಾಂಬೋರ್ಗಿನಿಯನ್ನಾಗಿ ಮಾಡಿದ ಕನ್ನಡಿಗ!

ಈ ಕಾಲದಲ್ಲಿ ಪ್ರತಿಭೆ ಮತ್ತು ಕ್ರಿಯೇಟಿವಿಟಿಗೆ ಯಾವುದೇ ವಿದ್ಯಾರ್ಹತೆ ಅಥವಾ ದೊಡ್ಡ ಹುದ್ದೆಗಳ ಅಗತ್ಯವಿಲ್ಲ ಎಂಬುದನ್ನು ಹಾಸನ ಜಿಲ್ಲೆಯ ಅರಸೀಕೆರೆಯ…

10 hours ago