Latest

ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿ ಹಲ್ಲೆ ಮಾಡಿದ ರೌಡಿಶೀಟರ್ ನನ್ನು ಬಂಧಿಸಿ, ಜೈಲಿಗಟ್ಟಿದ ರಾಮನಗರ ಪೊಲೀಸರು

ಉತ್ತರ ಕನ್ನಡ/ ರಾಮನಗರ: ಸರಾಯಿ ಕೊಡಿಸದ ಕಾರಣ ಸ್ನೇಹಿತ ಬೈಕ್‌ ಜೊತೆ ಪರಾರಿಯಾಗಿದ್ದ ಜೊಯಿಡಾದ ಪ್ರವೀಣ ಸುಧೀರ್‌’ರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಬಂಧನದ ವೇಳೆಯೂ ಪ್ರವೀಣ ಸುಧೀ‌ರ್ ಸಾಕಷ್ಟು ರಂಪಾಟ ನಡೆಸಿದ್ದು, ಬಂಧನಕ್ಕೆ ತೆರಳಿದವರಿಗೆ ಬೆದರಿಕೆ ಒಡ್ಡಿದ ಬಗ್ಗೆಯೂ ಪ್ರಕರಣ ದಾಖಲಾಗಿದೆ.

ರಾಮನಗರದ ಪ್ರವೀಣ ಸುಧೀರ್ ಅವರು ಮಾರ್ಚ 9ರ ರಾತ್ರಿ ಶುಭಂ ಉತ್ತರೆ ಎಂಬಾತರ ಬಳಿ `ಸರಾಯಿ ಕುಡಿಸು’ ಎಂದು ಕಾಡಿಸಿದ್ದರು. ಸರಾಯಿ ಕೊಡಿಸದ ಕಾರಣ ಶುಭಂ ಅವರ ಮನೆಗೆ ನುಗ್ಗಿ ಕೂಗಾಡಿದ್ದರು. ಶುಭಂ ಅವರ ತಾಯಿ ಬಳಿ `ನಿನ್ನ ಮಗನಿಗಾಗಿ ನಾನು ಸಾಕಷ್ಟು ದುಡ್ಡು ಖರ್ಚು ಮಾಡಿದ್ದೇನೆ’ ಎಂದಿದ್ದರು. ಇದಕ್ಕೆ ವಿರೋಧವ್ಯಕ್ತಪಡಿಸಿದ ಶುಭಂ ಅವರ ಕೆನ್ನೆಗೆ ಬಾರಿಸಿದ್ದರು. ಹೊಡೆದಾಟ ತಡೆಯಲು ಆಗಮಿಸಿದ ಶುಭಂ ಅವರ ಸಹೋದರಿ ಸಾಕ್ಷಿ ಅವರ ಮೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದರು. ಕೊನೆಗೆ ಮನೆ ಅಂಗಳದಲ್ಲಿದ್ದ ಬೈಕನ್ನು ಅಪಹರಿಸಿಕೊಂಡು ಹೋಗಿದ್ದರು.ಹೋಗವ ಮುನ್ನ `ನನ್ನ ವಿರುದ್ಧ ಸಾಕಷ್ಟು ದೂರುಗಳಿವೆ. ಪೊಲೀಸರಿಂದ ಸಹ ಏನೂ ಮಾಡಲಾಗುವುದಿಲ್ಲ’ ಎಂದು ಹೇಳಿ ಬೆದರಿಸಿದ್ದರು. ಶುಭಂ ಪತ್ತಾರ್ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ ತನಿಖೆ ನಡೆಸಿದ ಪೊಲೀಸರು ಪ್ರವೀಣ ಸುಧೀರ್ ವಿಚಾರಣೆಗೆ ತೆರಳಿದ್ದರು. ಜೊಯಿಡಾ ರಾಮಲಿಂಗಗಲ್ಲಿಯಲ್ಲಿದ್ದ ಪ್ರವೀಣ ಸುಧೀರ್ ನೋಟಿಸ್ಸು ಸ್ವೀಕರಿಸಲು ಸಹ ಬಾಗಿಲು ತೆರೆದಿರಲಿಲ್ಲ. ಅಲ್ಲಿನ ಬೀಟ್ ಸಿಬ್ಬಂದಿ ರಾಜು ಚಲವಾದಿ ಅವರನ್ನು ಆ ವೇಳೆ ಪ್ರವೀಣ ಸುಧೀರ್ ನಿಂದಿಸಿದ್ದರು.
ಅದಾದ ನಂತರ ಮಾರ್ಚ 31ರಂದು ಪೊಲೀಸ್‌ ಸಿಬ್ಬಂದಿ ಸಿಬ್ಬಂದಿ ರಾಜು ಚಲವಾದಿ, ಸದಾಶಿವ ಮಠಪತಿ ಅವರ ಜೊತೆ ಪಿಎಸ್‌ಐ ಬಸವರಾಜ ಮಬನೂರು ಸಹ ಪ್ರವೀಣ ಅವರ ಬಂಧನಕ್ಕೆ ತೆರಳಿದ್ದರು. ಆಗಲೂ, ಪ್ರವೀಣ ಸುಧೀರ್ ಮನೆ ಬಾಗಿಲು ತೆರೆಯದೇ ಪ್ರತಿರೋಧವ್ಯಕ್ತಪಡಿಸಿದರು.
ಅದಾಗಿಯೂ, ಪೊಲೀಸರು ಪ್ರವೀಣ ಸುಧೀರರನ್ನು ವಶಕ್ಕೆ ಪಡೆದರು. ರಾಮಲಿಂಗೇಶ್ವರ ದೇವಸ್ಥಾನ ಎದುರು ನಡೆದುಬರುವಾಗ `ನಮ್ಮ ಏರಿಯಾ ಬೀಟಿಗೆ ಈ ಹೊಲೆಯರನ್ನು ನೇಮಿಸಿದ್ದಾರೆ. ನನ್ನನ್ನು ಮುಟ್ಟಬೇಡ’ ಎಂದು ಪ್ರವೀಣ ಸುಧೀರ್ ಕೂಗಾಡಿದರು. ರಾಜು ಚಲವಾದಿ ಅವರ ಜಾತಿಯನ್ನು ಹಿಯಾಳಿಸಿದರು. ರಾಜು ಚಲವಾದಿ ಅವರು ಕೈ ಹಿಡಿಯಲು ಯತ್ನಿಸಿದಾಗ ಬಲಗೈ ತಿರುಚಿದರು. ಸದಾಶಿವ ಮಠಪತಿ ಅವರ ಎದೆಗೆ ತಿವಿದು ನೋವುಂಟು ಮಾಡಿದರು
ಪೊಲೀಸ್‌ ಠಾಣೆಗೆ ಬಂದ ನಂತರವೂ ಅಲ್ಲಿ ಪ್ರವೀಣ ಸುಧೀ‌ರ್ ಕೂಗಾಡಿದರು. ರಾಮನಗರದಲ್ಲಿ ಹೇಗೆ ಡ್ಯೂಟಿ ಮಾಡುತ್ತೀರಿ? ನೋಡುತ್ತೇನೆ’ ಎನ್ನುತ್ತ ಬೆದರಿಸಿದ್ದಾನೆ.ಎಂತಹ ಬೆದರಿಕೆಗೂ ಬಗ್ಗದ ಪೋಲಿಸರು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

nazeer ahamad

Recent Posts

ಮುಖ್ಯಮಂತ್ರಿಗಳ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…

10 hours ago

ಬಸ್‌ನಲ್ಲಿ ಅಸಭ್ಯವಾಗಿ ಯುತಿಯ ಮೈ ಮುಟ್ಟಿ ಕಿರುಕುಳ; ಧೈರ್ಯವಾಗಿ ವಿಡಿಯೋ ಮಾಡಿದ ಯುವತಿ, ಆರೋಪಿಯನ್ನು ಕೆಳಗಿಳಿಸಿದ ಕಂಡಕ್ಟರ್!

ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…

10 hours ago

₹65 ಸಾವಿರ ಸಂಬಳದ ಮುಖ್ಯೋಪಾಧ್ಯಾಯರಿಗೆ ಶಾಲೆಗೆ ಬರಲು ಸಮಯವಿಲ್ಲ; ₹4,500ಕ್ಕೆ ಯುವತಿಯನ್ನು ನೇಮಿಸಿ ಪಾಠ ಮಾಡಿಸಿದ ‘ಸರ್ಕಾರಿ ಶಾಲೆ’ ವಂಚನೆ!

ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…

10 hours ago

ಇನ್‌ಸ್ಟಾಗ್ರಾಮ್ ಕ್ಯೂಟ್ ಕಪಲ್ ಕಥೆಗೆ ಬಿಗ್ ಟ್ವಿಸ್ಟ್: ಕೋಟ್ಯಾಧಿಪತಿ ಪತ್ನಿ ಕಂಡಕ್ಟರ್ ಜೊತೆ ಪರಾರಿ ಆರೋಪ!

ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…

10 hours ago

ಟೊರೊಂಟೊದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: 7 ತಿಂಗಳ ಬಳಿಕ ಆಪ್ತ ವ್ಯಕ್ತಿ ಅರೆಸ್ಟ್‌!

ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…

1 day ago

ಇನ್‌ಸ್ಟಾಗ್ರಾಂ ಪ್ರೇಮಿಗಾಗಿ 6 ತಿಂಗಳ ಕಂದಮ್ಮನನ್ನೇ ಕೊಲ್ಲಿಸಿದ ತಾಯಿ! ಮೀರಾಟ್‌ನಲ್ಲಿ ಬೆಚ್ಚಿಬೀಳಿಸಿದ ಘಟನೆ

ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…

1 day ago