Latest

ಪ್ರಚಾರ ವಿವಾದಕ್ಕೆ ರಚಿತಾ ರಾಮ್ ಗಟ್ಟಿ ಪ್ರತಿಕ್ರಿಯೆ: ತಪ್ಪು ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ!

ಬೆಂಗಳೂರು: ‘ಸಂಜು ವೆಡ್ಸ್ ಗೀತಾ-2’ ಸಿನಿಮಾ ತಂಡ ಮತ್ತು ನಟಿ ರಚಿತಾ ರಾಮ್ ನಡುವಿನ ವೈಮನಸ್ಸು ಬಹಿರಂಗಗೊಂಡಿದ್ದು, ಸಾಮಾಜಿಕ ಮಾಧ್ಯಮಗಳಿಂದ ಹಿಡಿದು ಫಿಲ್ಮ್ ಚೇಂಬರ್‌ ತನಕ ಈ ವಿಚಾರ ಎಳೆದೊಯ್ಯಲಾಗಿದೆ. ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೆ ಚಿತ್ರತಂಡಕ್ಕೆ ಅಸಹಕಾರ ತೋರಿದ್ದಾರನ್ನೋ ಎಂಬ ಆಕ್ಷೇಪದ ಮಧ್ಯೆ ಇದೀಗ ರಚಿತಾ ರಾಮ್ ಸ್ಪಷ್ಟನೆ ನೀಡಿ, ನಿರ್ದೇಶಕರ ಮೇಲೆವೇ ಆರೋಪ ಹಾಕಿದ್ದಾರೆ.

ರಚಿತಾ ರಾಮ್ ಅವರು ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದು, “ನಾನು ಯಾರ ಮೇಲೂ ತಪ್ಪು ಮಾಡಿಲ್ಲ, ನನ್ನ ಅನುಪಸ್ಥಿತಿಯನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಬಲಾತ್ಕಾರವಾಗಿ ಬಳಸಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ,” ಎಂದು ಹೇಳಿದ್ದಾರೆ.

“ಸಂಜು ವೆಡ್ಸ್ ಗೀತಾ-2” ಚಿತ್ರವು ಮೊದಲ ಬಾರಿಗೆ ಜನವರಿ 17ರಂದು ಬಿಡುಗಡೆಯಾಗಿದ್ದಾಗ, ತಾವು ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೆನೆಂದು ರಚಿತಾ ನೆನಪಿಸಿದ್ದಾರೆ. “ಆಗ ನನ್ನ ಕೆಲಸವನ್ನು ತಂಡ ಮೆಚ್ಚಿತ್ತು. ಆದರೆ ಈಗ ನನ್ನ ಹಿಂದೆ ಸುಳ್ಳು ಆರೋಪಗಳು ಕೇಳಿಬರುತ್ತಿವೆ. ಏನಿದು ನಾಟಕ?” ಎಂದು ಪ್ರಶ್ನಿಸಿದ್ದಾರೆ.

ಈಗ ತಾವು ಮತ್ತೊಂದು ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿರುವುದಾಗಿ ತಿಳಿಸಿರುವ ಅವರು, “ಇದೀಗ ಈ ಚಿತ್ರ ಮತ್ತೊಮ್ಮೆ ರಿಲೀಸ್ ಆಗುತ್ತಿದೆ. ನಾನು ಈಗಾಗಲೇ ಡೇಟ್ಸ್ ಕೊಟ್ಟಿರುವ ಸ್ಥಿತಿಯಲ್ಲಿ, ಮತ್ತೊಮ್ಮೆ ಪ್ರಚಾರಕ್ಕೆ ಬರಲು ಹೇಗೆ ಸಾಧ್ಯ? ಅದನ್ನು ಅರ್ಥ ಮಾಡಿಕೊಳ್ಳಬೇಕು.” ಎಂಬ ಮಾತುಗಳಿಂದ ತಮ್ಮ ಅಸಮಾಧಾನವನ್ನು ತೋಡಿದ್ದಾರೆ.

ಅಷ್ಟೇ ಅಲ್ಲ, “ಇದೇ ಸಂಜು ವೆಡ್ಸ್ ಗೀತಾ ತಂಡ, ಹಿಂದೆಯೊಮ್ಮೆ ನಾನು ಮಹಿಳಾ ನಿರ್ಮಾಪಕಿ ನಿರ್ಮಿಸುತ್ತಿದ್ದ ಸಿನಿಮಾ ಪ್ರಚಾರಕ್ಕೆ ಕಾಲ್ ಮಾಡಿದ್ದಾಗ, ಶೂಟಿಂಗ್ ಇದೆಂದು ನಿರಾಕರಿಸಿತ್ತು. ಆಗ ಆ ನಿರ್ಮಾಪಕರ ದುಡ್ಡು ದುಡ್ಡಲ್ಲವೇ? ಅವರ ಸಂಕಷ್ಟ ನಿಮಗೆ ಗೋಚರಿಸಲಿಲ್ಲವೇಕೆ?” ಎಂದು ಪ್ರಶ್ನಿಸಿ, ಜವಾಬ್ದಾರಿ ಬದಲಾವಣೆಗೆ ಎದ್ದು ಬಂದಿದ್ದಾರೆ.

ರಚಿತಾ ರಾಮ್ ತಮ್ಮ ಪ್ರತಿಕ್ರಿಯೆಯಲ್ಲಿ ಮತ್ತೊಂದು ಮುಖ್ಯ ವಿಚಾರ ಪ್ರಸ್ತಾಪಿಸಿದ್ದು, “ಪ್ರಚಾರಕ್ಕೆ ನಾನಿಲ್ಲದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ನಾನು ಚಿತ್ರದ ಕುರಿತಾಗಿ ಪೋಸ್ಟ್ ಮತ್ತು ಸ್ಟೋರಿ ಹಾಕಿದ್ದೆ. ಆದರೆ ತಂಡದ ಪ್ಲ್ಯಾನಿಂಗ್‌ನಲ್ಲಿ ಸ್ಪಷ್ಟತೆಯ ಕೊರತೆ ಇತ್ತು. ಪ್ರತಿದಿನ ಬದಲಾಗುವ ಶೆಡ್ಯೂಲ್, ಮುಂದೂಡುವ ಕಾರ್ಯಕ್ರಮಗಳು ನನಗೆ ಅಸೌಕರ್ಯ ತಂದವು,” ಎಂದಿದ್ದಾರೆ.

ಅಂತಿಮವಾಗಿ, “ನಾನು ತಪ್ಪು ಮಾಡದೇ ಇರುವಾಗ ಕ್ಷಮೆ ಕೇಳಲು ಏಕೆ? ನಾನು ಅಭಿಮಾನಿಗಳಿಗೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಅವರೇನು ತಪ್ಪು ಆಗಿದೆಯೆಂದು ಭಾವಿಸಿದರೆ, ಅವರಿಗೆ ಮಾತ್ರ ಕ್ಷಮೆ ಕೇಳುತ್ತೇನೆ. ಆದರೆ ಬೇರೆ ಯಾರಿಗೆಲೂ ಅಲ್ಲ,” ಎಂದು ರಚಿತಾ ರಾಮ್ ಗಟ್ಟಿ ನಿಲುವು ಪ್ರಕಟಿಸಿದ್ದಾರೆ.

ಈ ಮೂಲಕ ರಚಿತಾ ರಾಮ್ ತಮ್ಮ ಮಾತಿನಲ್ಲಿ ಸ್ಪಷ್ಟತೆ, ಆತ್ಮವಿಶ್ವಾಸ ಮತ್ತು ನೈತಿಕ ಹಕ್ಕನ್ನು ಬಳಸಿಕೊಂಡು ನಿರ್ದೇಶಕ ಮತ್ತು ಚಿತ್ರತಂಡದ ವಿರುದ್ಧ ಗುಡುಗಿದ್ದಾರೆ. ಈ ವಿವಾದದಲ್ಲಿ ಇನ್ನೇನು ಬೆಳವಣಿಗೆಗಳು ನಡೆಯುತ್ತವೆ ಎಂಬುದು ಮುಂದೆ ಗೊತ್ತಾಗಬೇಕಿದೆ.

nazeer ahamad

Recent Posts

ಮದರಸಾದಿಂದ 24 ಮಕ್ಕಳು ಪರಾರಿ! ತುಮಕೂರಿನಲ್ಲಿ ಬಯಲಾಯ್ತು ಅಮಾನವೀಯ ಹಿಂಸೆ

ತುಮಕೂರು ಜಿಲ್ಲೆಯ ಮದರಸಾವೊಂದರಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಅಮಾನವೀಯ ದೌರ್ಜನ್ಯ ಮತ್ತು ಬಾಲಕಾರ್ಮಿಕ ಶೋಷಣೆ ನಡೆಸಲಾಗುತ್ತಿದ್ದ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ…

2 hours ago

ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಲಂಚ ಬೇಡಿಕೆ: ಸಿಪಿಐ ಲೋಕಾಯುಕ್ತ ಬಲೆಗೆ

ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…

17 hours ago

ಕರ್ಕಶ ಶಬ್ದದ ಬೈಕ್ ವಿಚಾರಕ್ಕೆ ಪೊಲೀಸರ ಮೇಲೆಯೇ ವಿದ್ಯಾರ್ಥಿಗಳ ಹಲ್ಲೆ

ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್‌ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…

24 hours ago

ಕ್ಯಾಂಟಿನ್‌ನಲ್ಲಿ ವೇಶ್ಯಾವಾಟಿಕೆ ದಂಧೆ: ಬೆಳ್ತಂಗಡಿಯಲ್ಲಿ ಪೊಲೀಸರ ದಾಳಿ, ಮೂವರು ಬಂಧನ

ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…

24 hours ago

ಒಂದು ವರ್ಷದ ನಿರೀಕ್ಷೆಗೆ ತೆರೆ: ಭಟ್ಕಳಕ್ಕೆ ಖಾಯಂ ಎಸಿ, ಜೆ. ಮಹೇಶ್ ಅಧಿಕಾರ ಸ್ವೀಕಾರ

ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…

2 days ago

ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕದ ಛಾಯೆ

ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…

2 days ago