Latest

ಔಷಧಿ ಪರಿವೀಕ್ಷಕ ಅಧಿಕಾರಿಗಳ ಕೊರತೆಯಿಂದ ಕಳಪೆ ಔಷಧಿಗಳು ಹಾವಳಿ; ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ- ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬಂಗಾರಪೇಟೆ: ಕರ್ನಾಟಕ ಸರ್ಕಾರ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಗೃಹ ಆರೋಗ್ಯ ಯೋಜನೆ ಅನುಷ್ಠಾನ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಬಂಗಾರಪೇಟೆಯ ಮಾಗೊಂದಿ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ
ಬಂಗಾರಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ರಾಜ್ಯವ್ಯಪ್ತಿ ಆರೋಗ್ಯ ಇಲಾಖೆ ನಿರಂತರ ತಪಾಸಣೆ ನಡೆಸುತ್ತಿದ್ದಾರೆ, ಹಲವು ಕಡೆ ಕಳಪೆ ನಕಲಿ ಗುಣಮಟ್ಟದ ಆನೇಕ ಬಗೆಯ ಕಳಪೆ ಔಷಧಿಗಳು ಸಿಕ್ಕಿರುವ ಮಾಹಿತಿ ಗಮನಕ್ಕ್ ಬಂದಿದೆ ಔಷಧಿ ಪರಿವೀಕ್ಷಕ ಅಧಿಕಾರಿಗಳ ತೀವ್ರ ಕೊರತೆ ಕರ್ನಾಟಕ ಎದುರಿಸುತ್ತಿದೆ. ಇದರ ಪರಿಣಾಮ, ಕಳಪೆ ಗುಣಮಟ್ಟದ ಔಷಧಿ ಪೂರೈಕೆ ಜಾಲವನ್ನು ನಿರ್ಮೂಲನೆ ಗೊಳಿಸುವ ಯತ್ನಕ್ಕೆ ತೊಂದರೆ ಉಂಟಾಗಿದ್ದು, ಇಲಾಖೆ ಈಗಾಗಲೇ ಇದರ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಖಾಲಿ ಇರುವ ಔಷಧಿ ಪರಿವೀಕ್ಷಕ ಅಧಿಕಾರಿ ಗಳನ್ನು ನೇಮಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ, ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಮತ್ತು ಡಿ-ಗ್ರೂಪ್ ನೌಕರರ ಕೊರತೆ ಇದ್ದು ಹಾಗು ಸ್ಕ್ಯಾನಿಂಗ್ ಟೆಕ್ನಿಷಿಯನ್‌ ಗಳ ಕೊರತೆ ಸಹಾ ಇದ್ದು ಖಾಸಗಿ ಆಸ್ಪತ್ರೆ ಟಿಕ್ನಿಷಿಯನ್‌ ವಾರಕ್ಕೊಮ್ಮೆ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ಕೆಲಸ ಮಾಡಲು ಇಚ್ಚಿಸಿದವರಿಗೆ ಒಳ್ಳೆಯ ಸಂಬಳ ನೀಡಲಾಗುವುದು ಇದರ ಬಗ್ಗೆ  ಮುಖ್ಯಮಂತ್ರಿಗಳ ಬಳಿ ಚರ್ಚಿಸಿದ್ದೇನೆ, ಮುಖ್ಯಮಂತ್ರಿಗಳ ಅನುಮೋದನೆ ಸಿಕ್ಕ ಕೂಡಲೇ ಅಗತ್ಯವಿರುವ ಕಡೆಗಳಲ್ಲಿ ಕೂಡಲೇ ಸಿಬ್ಬಂದಿಗಳನ್ನು ನೇಮಕ ಮಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಂಗಾರಪೇಟೆ ಶಾಸಕರಾದ ಶ್ರೀ. ಎಸ್.ಎನ್.ನಾರಾಯಣಸ್ವಾಮಿ ಕೆ.ಎಂ , ಆಸ್ಪತ್ರೆಯ ಆಡಳಿತಾಧಿಕಾರಿ ಡಾಕ್ಟರ್ ಭಾರತಿ, ಡಾಕ್ಟರ ಸುಧಾಕರ್, ಮತ್ತು ಸಾರ್ವಜನಿಕರು ಹಾಜರಿದ್ದರು. ವರದಿ: ರೋಶನ್ ಜಮೀರ್

nazeer ahamad

Recent Posts

ಲೆನ್ಸ್ಕಾರ್ಟ್ ಡ್ರೆಸ್ ಕೋಡ್ ವಿವಾದ: ತಿಲಕ-ಕುಂಕುಮ ನಿಷೇಧ ಆರೋಪ, ನಾಯಕಿ ನಾಜಿಯಾ ಖಾನ್ ಪ್ರತಿಭಟನೆ

ನಾಸಿಕ್‌ನ Tata Consultancy Services ನಲ್ಲಿ ಬಲವಂತದ ಮತಾಂತರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, Lenskart…

4 hours ago

ರೌಡಿಶೀಟರ್ ಸೈಲೆಂಟ್ ಸುನಿಲ್‌ಗೆ ಭರ್ಜರಿ ಸ್ವಾಗತ: ಹಾಸನದಲ್ಲಿ ವಿಡಿಯೋ ವೈರಲ್

ಹಾಸನ ತಾಲೂಕಿನ ಶಾಂತಿಗ್ರಾಮ ಟೋಲ್ ಬಳಿಯಲ್ಲಿ ನಟೋರಿಯಸ್ ರೌಡಿಶೀಟರ್ ಸೈಲೆಂಟ್ ಸುನಿಲ್ ಆಗಮಿಸುತ್ತಿದ್ದಂತೆಯೇ ಯುವಕರ ಗುಂಪೊಂದು ಅದ್ದೂರಿ ಸ್ವಾಗತ ಕೋರಿರುವ…

4 hours ago

ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ ಲೋಕಾಯುಕ್ತ ಬಲೆಗೆ: ಠಾಣೆ ಮುಂದೆ ಪಟಾಕಿ ಸಿಡಿಸಿ ಜನರ ಸಂಭ್ರಮ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ಭೀಮಪ್ಪ ರಬಕವಿ ಹಾಗೂ ಕಾನ್ಸ್ಟೇಬಲ್ ಸಂತೋಷ್…

5 hours ago

ಡಿಎನ್‌ಎ ಸತ್ಯ ಹೇಳಿತು: ಬಿಜೆಪಿ ಮುಖಂಡನ ಪುತ್ರನೇ ಮಗುವಿನ ತಂದೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಂಚಲನ ಸೃಷ್ಟಿಸಿದ್ದ ಅತ್ಯಾಚಾರ ಮತ್ತು ವಂಚನೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪುತ್ತೂರು…

10 hours ago

ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ: ಯುದ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಮುನ್ನೆಚ್ಚರಿಕಾ ಕ್ರಮ

ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಸಂಘರ್ಷ ಹಾಗೂ ಯುದ್ಧದ ಪರಿಣಾಮವಾಗಿ ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಆಮದು ವ್ಯತ್ಯಯಗೊಳ್ಳುವ ಭೀತಿ…

10 hours ago

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿ ಹತ್ಯೆಗೆ ಸಂಚು: ಪತ್ನಿ ಸೇರಿ ಐವರ ಬಂಧನ

ಆಂಧ್ರ ಪ್ರದೇಶದ ಪ್ರೊದ್ದಟೂರು ತಾಲ್ಲೂಕಿನ ಲಿಂಗಾಪುರಂ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ತನ್ನ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಭಾವಿಸಿದ…

10 hours ago