ಕುಣಿಗಲ್: ಮದುವೆಯಾಗುವುದಾಗಿ ನಂಬಿಸಿ ದೇವರ ಫೋಟೋ ಮುಂದೆ ತಾಳಿ ಕಟ್ಟಿದ ಬಳಿಕ ದೈಹಿಕ ಸಂಬಂಧ ಬೆಳೆಸಿ, ಬಳಿಕ ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಘಟನೆಯೊಂದರ ಹಿನ್ನೆಲೆಯಲ್ಲಿ ಅಮೃತ್ತೂರು ಠಾಣೆಯ ಇಬ್ಬರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಘಟನೆ ತಲುಪಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮನಾಪುರ ಗ್ರಾಮದ ಭಗವಂತರಾಯ ಬಿರಾದಾರ (34) ಹಾಗೂ ಡಿ. ನಾಗಭೂಷಣ ಎಂಬುವರ ವಿರುದ್ಧ ಅಮೃತ್ತೂರು ಠಾಣೆಯ ಮಹಿಳಾ ಕಾನ್ಸ್ಟೇಬಲ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರುದಾರ ಮಹಿಳಾ ಪೇದೆ ಮತ್ತು ಭಗವಂತರಾಯ ಬಿರಾದಾರ ಇಬ್ಬರೂ ಅಮೃತ್ತೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಬ್ಬರ ನಡುವೆ ಪ್ರೇಮ ಸಂಬಂಧವಿತ್ತು. ಈ ಸಂಬಂಧದಲ್ಲಿ 2023ರ ಫೆಬ್ರವರಿ 14ರಂದು ಭಗವಂತರಾಯ, ಮಹಿಳಾ ಪೇದೆಯ ನಿವಾಸದಲ್ಲಿರುವ ಸಾಯಿಬಾಬಾ ದೇವರ ಫೋಟೋ ಮುಂದೆ ತಾಳಿ ಕಟ್ಟಿದ್ದು, ಅದನ್ನು ಮದುವೆಯಂತೆ ಗಮನಿಸಿದ್ದೆನೆಂದು ಮಹಿಳಾ ಪೇದೆ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆ ಕುರಿತು ಕುಟುಂಬದಿಂದ ವಿರೋಧವಿದ್ದರೂ ಬಿರಾದಾರ ನಿರಂತರವಾಗಿ ಸಾನ್ನಿಧ್ಯ ಹೊಂದಿದ್ದು, ಇಬ್ಬರೂ ಒಂದೇ ಇಲಾಖೆಯಲ್ಲಿ ಕೆಲಸ ಮಾಡುವ ಕಾರಣದಿಂದ ಮದುವೆ ವಿಷಯವನ್ನು ಗುಪ್ತವಾಗಿ ಇಡುವಂತೆ ಹೇಳಿ ದೈಹಿಕ ಸಂಪರ್ಕ ಹೊಂದಿದ ಆರೋಪವಿದೆ.
ಆದರೆ ಒಂದು ದಿನ ಮಹಿಳಾ ಪೇದೆ ತಾಳಿ ಧರಿಸಿ ಠಾಣೆಗೆ ಹೋದಾಗ, ಅದನ್ನು ನೋಡಿ ಬಿರಾದಾರ ಕೋಪಗೊಂಡು, ಇಬ್ಬರ ನಡುವೆ ಜಗಳ ನಡೆದಿದೆ. ಮಹಿಳಾ ಪೇದೆ ಈ ಸಂದರ್ಭದಲ್ಲಿ “ನಾವು ಕಾನೂನುಬದ್ಧವಾಗಿ ಮದುವೆಯಾಗೋಣ” ಎಂದು ಪ್ರಸ್ತಾಪಿಸಿದರೂ, ಬಿರಾದಾರ ತಿರಸ್ಕರಿಸಿದ್ದಾನೆ. ಬಳಿಕ, ತನ್ನ ಸಮುದಾಯದ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಮಹಿಳಾ ಪೇದೆ ತಿಳಿದಿದ್ದಾರೆ.
ಈ ವಿಷಯ ತಿಳಿದ ಮಹಿಳಾ ಪೇದೆ, ಮತ್ತೊಬ್ಬ ಪೊಲೀಸ್ ಸಿಬ್ಬಂದಿ ನಾಗಭೂಷಣ.ಡಿ.ಆರ್ಗೆ ಮಾಹಿತಿ ನೀಡಿದಾಗ, ಇಬ್ಬರೂ ಪೇದೆಯ ಕೋಣೆಗೆ ಭೇಟಿ ನೀಡಿ ಮದುವೆ ಬಗ್ಗೆ ದಾಖಲಾತಿ ಕೇಳಿದ್ದಾರೆ. ತಾನು ಸಾಕ್ಷ್ಯಗಳು ಮೊಬೈಲ್ನಲ್ಲಿ ಇವೆ ಎಂದು ಮಹಿಳಾ ಪೇದೆ ಹೇಳಿದಾಗ, ಬಿರಾದಾರ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬುದೂ ದೂರಿನಲ್ಲಿ ಉಲ್ಲೇಖವಾಗಿದೆ.
ಅಲ್ಲದೆ, ಎಸ್ಪಿಗೆ ದೂರು ನೀಡಿದರೆ ಮಾನ ಹಾನಿಯಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಮಹಿಳಾ ಪೇದೆ ಆರೋಪ ಮಾಡಿದ್ದಾರೆ. ಈ ಸಂಬಂಧ ತನಿಖೆ ಪ್ರಾರಂಭಿಸಲಾಗಿದ್ದು, ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…
ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…
ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…
ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…
ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಲಿವ್-ಇನ್…