ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮೇಖಳಿ ಗ್ರಾಮ ಪಂಚಾಯತಿ ಯಲ್ಲಿ 30% ಪರ್ಸಂಟೇಜ್ ದಂಧೆ ನಡಿಯುತ್ತಿದು ಅಭಿವೃದ್ಧಿ ಅಧಿಕಾರಿ 10%, ಇಂಜಿನಿಯರ್ 10%, ತಾಲೂಕು ಪಂಚಾಯತ್ ಅಧಿಕಾರಿಗಳು 7%, ಟೆಕ್ನಿಕಲ್ 3% ಹೀಗೆ ಪಿಡಿಒ ಮಂಜುನಾಥ್ ದಳವಾಯಿ ನಿಂದ ಒಟ್ಟು 30% ಲಂಚದ ಬೇಡಿಕೆ ಇಡಲಾಗುತ್ತಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ವಿಡಿಯೋ ಹಂಚಿಕೊಂಡು ತೀವ್ರವಾಗಿ ಖಂಡಿಸಿ ತಮ್ಮ ಸದಸ್ಯೆತ್ವಕ್ಕೆ ಸುಧಾ ಸಿದ್ದಪ್ಪ ರವರು ರಾಜೀನಾಮೆ ಸಲ್ಲಿಸಿದ್ದಾರೆ.
ಕಚೇರಿಯಲ್ಲಿ ಈ ರೀತಿಯಾದಂತಹ ಪರ್ಸೆಂಟೇಜ್ ದಂಧೆ ನಡೆಯುತ್ತಿದ್ದು 14ನೇ ಹಣಕಾಸು, 15ನೇ ಹಣಕಾಸು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಅನುದಾನಗಳನ್ನು ಪಡೆಯಬೇಕಾದಲ್ಲಿ ಪರ್ಸೆಂಟ್ ಕೊಡಬೇಕೆಂದು ಕೇಳುತ್ತಿದ್ದಾರೆ ಈ ರೀತಿ ಕೊಡಲು ನನಗೆ ಸಾಧ್ಯವಿಲ್ಲ. ಒಟ್ಟಾರೆಯಾಗಿ 30% ಕಮಿಷನ್ ಕೇಳುತ್ತಿದ್ದು ಅದನ್ನು ನನ್ನಿಂದ ಕೊಡಲು ಸಾಧ್ಯವಿಲ್ಲ ಅದೇ ಕಾರಣಕ್ಕಾಗಿ ನಾನು ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಹಾಗೂ ಪೂರಕವಾದ ದಾಖಲೆಗಳು ಬೇಕಿದ್ದಲ್ಲಿ ನನ್ನ ಹತ್ತಿರ ವಿಡಿಯೋ ಹಾಗೂ ಆಡಿಯೋ ರೆಕಾರ್ಡ್ಗಳು ಲಭ್ಯವಿದ್ದು ಒದಗಿಸಲು ಸಿದ್ಧನಿದ್ದೇನೆ ಎಂದು ರಾಜಿನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹೊನ್ನಾವರ: ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದಿಂದ ಹಿಂದೆ ಸರಿಯುವಂತೆ ತಮ್ಮ ಮೇಲೆ ಬೆದರಿಕೆಗಳು, ಒತ್ತಡಗಳು ಹಾಗೂ…
ಹುಬ್ಬಳ್ಳಿ/ಕುಂದಗೋಳ: ಬಸ್ನಲ್ಲಿ ಪ್ರಯಾಣಿಸುವ ವೇಳೆ ಕಿಟಕಿಯಿಂದ ತಲೆ ಅಥವಾ ಕೈ ಹೊರಹಾಕುವುದು ಎಷ್ಟು ಅಪಾಯಕಾರಿ ಎಂಬುದನ್ನು ಧಾರವಾಡ ಜಿಲ್ಲೆಯ ಕುಂದಗೋಳ…
ಬಾಗ್ದಾದ್: ಇರಾಕ್ನ ಮಹಿಳಾ ಸಂಸದೆ ಹಿಂದ್ ಅಲ್-ಅಬ್ಬಾಸಿ ಅವರ ಮನೆಯಲ್ಲಿ ₹927 ಕೋಟಿ ಮೌಲ್ಯದ ನಗದು, 27 ಕಿಲೋಗ್ರಾಂ ಚಿನ್ನ…
ಪುಣೆ: ಮಹಾರಾಷ್ಟ್ರದ ಪುಣೆಯ ಡೆಕ್ಕನ್ ಪ್ರದೇಶದಲ್ಲಿರುವ ಜಿಪ್ಸಿಯಾ ಕ್ಯಾಫೆಯಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್…
ನವದೆಹಲಿ: ನಕಲಿ ಔಷಧ ತಯಾರಿಕಾ ದಂಧೆಗೆ ಸಂಬಂಧಿಸಿದ ಸಿಬಿಐ ತನಿಖೆಯಲ್ಲಿ ಅನುಕೂಲಕರ ಫಲಿತಾಂಶ ದೊರಕಿಸಿಕೊಡುವ ಭರವಸೆ ನೀಡಿ ₹3 ಕೋಟಿ…
ಬಸವನಬಾಗೇವಾಡಿ: ಹೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ (ಇಇ) ಸಿದ್ರಾಮ ಬಿರಾದಾರ ಅವರು ಗುತ್ತಿಗೆದಾರನಿಂದ ₹10 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ…