Categories: CrimeLatest

ಇಬ್ಬರು ಪತ್ನಿಯರ ನಡುವೆ ಪತಿಯನ್ನು ಹಂಚಿದ ಪಂಚಾಯಿತಿ! ವಾರದ 3 ದಿನ ಒಬ್ಬಳಿಗೆ, 3 ದಿನ ಮತ್ತೊಬ್ಬಳಿಗೆ

ರಾಮ್‌ಪುರ: ಉತ್ತರ ಪ್ರದೇಶದ ರಾಮ್‌ಪುರ ಜಿಲ್ಲೆಯ ತಾಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಟುಂಬ ಕಲಹಕ್ಕೆ ಸಂಬಂಧಿಸಿದ ಅಪರೂಪದ ತೀರ್ಪೊಂದು ಬೆಳಕಿಗೆ ಬಂದಿದೆ. ಇಬ್ಬರು ಪತ್ನಿಯರನ್ನು ಹೊಂದಿದ್ದ ವ್ಯಕ್ತಿಯ ಕುಟುಂಬ ವಿವಾದವನ್ನು ಬಗೆಹರಿಸಲು ಪಂಚಾಯಿತಿ ಸಭೆ ನಡೆಸಿ, ವಾರದ ಮೂರು ದಿನ ಮೊದಲ ಪತ್ನಿಯೊಂದಿಗೆ ಹಾಗೂ ಮೂರು ದಿನ ಎರಡನೇ ಪತ್ನಿಯೊಂದಿಗೆ ವಾಸಿಸುವಂತೆ ಪತಿಗೆ ಸೂಚನೆ ನೀಡಿದೆ.

ದಢಿಯಾಲ್ ನಗರ ಪಂಚಾಯಿತಿ ನಿವಾಸಿ ನಜಾಖತ್ ಸುಮಾರು 14 ವರ್ಷಗಳ ಹಿಂದೆ ಉತ್ತರಾಖಂಡ ಮೂಲದ ಆಶ್ರಾ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕುಟುಂಬದಲ್ಲಿ ಗಂಡು ಮಗು ಬೇಕೆಂಬ ಆಸೆಯಿಂದ ನಜಾಖತ್ ನಾಲ್ಕು ವರ್ಷಗಳ ಹಿಂದೆ ನೇಹಾ ಎಂಬ ಮಹಿಳೆಯನ್ನು ಎರಡನೇ ಮದುವೆಯಾಗಿದ್ದನು. ಆದರೆ, ಎರಡನೇ ಪತ್ನಿಗೂ ಇಬ್ಬರು ಹೆಣ್ಣುಮಕ್ಕಳೇ ಜನಿಸಿದ್ದರು.

ಎರಡನೇ ಮದುವೆಯ ಬಳಿಕ ನಜಾಖತ್ ಮೊದಲ ಪತ್ನಿ ಆಶ್ರಾ ಮತ್ತು ಆಕೆಯ ಮಕ್ಕಳನ್ನು ನಿರ್ಲಕ್ಷಿಸಲು ಆರಂಭಿಸಿದ್ದಾನೆ ಎನ್ನಲಾಗಿದೆ. ಆತ ಸಂಪೂರ್ಣವಾಗಿ ಎರಡನೇ ಪತ್ನಿಯೊಂದಿಗೆ ವಾಸಿಸುತ್ತಿದ್ದು, ಮೊದಲ ಪತ್ನಿಯ ಕುಟುಂಬದ ನಿರ್ವಹಣೆಗೆ ಯಾವುದೇ ಹಣಕಾಸಿನ ನೆರವು ನೀಡುತ್ತಿರಲಿಲ್ಲ. ಇದರಿಂದ ಸಂಕಷ್ಟಕ್ಕೀಡಾದ ಆಶ್ರಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಜೀವನಾಂಶಕ್ಕಾಗಿ ಮನವಿ ಮಾಡಿದ್ದರು.

ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದ ವೇಳೆ ಗ್ರಾಮಸ್ಥರು ಹಾಗೂ ಪಂಚಾಯಿತಿ ಹಿರಿಯರು ಮಧ್ಯಪ್ರವೇಶಿಸಿ ಸಭೆ ಕರೆದರು. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಚರ್ಚೆಯ ಬಳಿಕ ಪಂಚಾಯಿತಿ ಎಲ್ಲರ ಒಪ್ಪಿಗೆಯೊಂದಿಗೆ ವಿಶೇಷ ತೀರ್ಮಾನವನ್ನು ಪ್ರಕಟಿಸಿತು.

ಪಂಚಾಯಿತಿಯ ತೀರ್ಪಿನಂತೆ, ನಜಾಖತ್ ವಾರದಲ್ಲಿ ಮೂರು ದಿನ ಮೊದಲ ಪತ್ನಿ ಆಶ್ರಾ ಅವರೊಂದಿಗೆ ಮತ್ತು ಮೂರು ದಿನ ಎರಡನೇ ಪತ್ನಿ ನೇಹಾ ಅವರೊಂದಿಗೆ ಕಡ್ಡಾಯವಾಗಿ ವಾಸಿಸಬೇಕು. ಉಳಿದ ಒಂದು ದಿನವನ್ನು ಪತಿಯ ವೈಯಕ್ತಿಕ ಆಯ್ಕೆಗೆ ಬಿಡಲಾಗಿದೆ. ಜೊತೆಗೆ ಮೊದಲ ಪತ್ನಿಯ ಕುಟುಂಬದ ನಿರ್ವಹಣೆಗಾಗಿ ಪ್ರತಿ ತಿಂಗಳು ಅಗತ್ಯ ದಿನಸಿ ಸಾಮಗ್ರಿಗಳೊಂದಿಗೆ ₹2,000 ನಗದು ಹಣವನ್ನು ನೀಡುವಂತೆ ಸೂಚಿಸಲಾಗಿದೆ.

ಪಂಚಾಯಿತಿ ನೀಡಿದ ಈ ತೀರ್ಪಿಗೆ ನಜಾಖತ್ ಹಾಗೂ ಆತನ ಇಬ್ಬರೂ ಪತ್ನಿಯರು ಒಪ್ಪಿಗೆ ಸೂಚಿಸಿದ್ದಾರೆ. ಸಮಸ್ಯೆ ಗ್ರಾಮ ಮಟ್ಟದಲ್ಲೇ ಬಗೆಹರಿದ ಹಿನ್ನೆಲೆಯಲ್ಲಿ ಆಶ್ರಾ ಅವರು ಪೊಲೀಸರಿಗೆ ನೀಡಿದ್ದ ದೂರನ್ನು ವಾಪಸ್ ಪಡೆದಿದ್ದು, ಎರಡೂ ಕುಟುಂಬಗಳು ಪರಸ್ಪರ ಸಮ್ಮತಿಯಿಂದ ರಾಜಿಯಾಗಿವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ಆರೋಪ: ಕನ್ನಡ ಪರ ಹೋರಾಟಗಾರ ಬಸವರಾಜ ಪಡುಕೋಟೆ ಬಂಧನ! ವೈರಲ್ ಆಯ್ತು ವಿಡಿಯೋ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕನ್ನಡ ಪರ ಹೋರಾಟಗಾರ ಎಂದು ಗುರುತಿಸಲ್ಪಡುವ…

2 hours ago

ಕೋಟ್ಯಂತರ ರೂ. ವೆಚ್ಚದ ಸರ್ಕಾರಿ ನರ್ಸಿಂಗ್ ಶಾಲೆ ಕಟ್ಟಡಕ್ಕೆ ಎರಡು ವರ್ಷಗಳಿಂದ ಬೀಗ! ಸಾರ್ವಜನಿಕರ ಆಕ್ರೋಶ

ಬಳ್ಳಾರಿ: ಸಾರ್ವಜನಿಕರ ತೆರಿಗೆ ಹಣ ಹಾಗೂ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ (District Mineral Foundation - DMF) ನಿಧಿಯಿಂದ…

4 hours ago

6 ವರ್ಷಗಳ ಬಳಿಕವೂ ಪರಿಹಾರ ನೀಡದ ಕೆಎಸ್‌ಆರ್‌ಟಿಸಿ; ಬಸ್ ಜಪ್ತಿಗೆ ಕೂಡ್ಲಿಗಿ ನ್ಯಾಯಾಲಯದ ಆದೇಶ

ಕೂಡ್ಲಿಗಿ (ವಿಜಯನಗರ): 2019ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯಾಯಾಲಯ ಆದೇಶಿಸಿದ್ದ ಪರಿಹಾರವನ್ನು ಹಲವು ವರ್ಷಗಳಾದರೂ…

4 hours ago

24 ಗಂಟೆಯೊಳಗೆ ಚೈನ್ ಸ್ನಾಚರ್ ಬಂಧನ: ₹3 ಲಕ್ಷ ಮೌಲ್ಯದ ಚಿನ್ನದ ಸರ, ಬೈಕ್ ಹಾಗೂ ಮೊಬೈಲ್ ವಶ

ಮುರ್ಡೇಶ್ವರ: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮಹಿಳೆಯ ಕುತ್ತಿಗೆಯಿಂದ ಬಂಗಾರದ ಚೈನ್ ಕಸಿದು ಪರಾರಿಯಾಗಿದ್ದ ಪ್ರಕರಣವನ್ನು ಮುರ್ಡೇಶ್ವರ ಪೊಲೀಸರು ಕೇವಲ 24 ಗಂಟೆಯೊಳಗೆ…

4 hours ago

ಹನಿಮೂನ್ ಗೆ ಕರೆದೊಯ್ದು ಪತಿಯನ್ನು ಕೊಂದ ಸೋನಂಗೆ ಸುಪ್ರೀಂ ಕೋರ್ಟ್‌ನಿಂದ ಎರಡು ಆಯ್ಕೆ…?

ನವದೆಹಲಿ: ಮೇಘಾಲಯದಲ್ಲಿ ಹನಿಮೂನ್ ವೇಳೆ ಪತಿ ರಾಜಾ ರಘುವಂಶಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೋನಂ ರಘುವಂಶಿ ಅವರಿಗೆ ಸುಪ್ರೀಂ…

4 hours ago

ಲೈಂಗಿಕ ಕಿರುಕುಳ ಆರೋಪದ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಆತ್ಮಹತ್ಯೆಗೆ ಯತ್ನ: ‘ಆಕೆಯೇ ನನಗೆ ಚುಂಬಿಸಿ, ಅಪ್ಪಿಕೊಂಡಿದ್ದಳು’ ಡೆತ್‌ನೋಟ್‌ನಲ್ಲಿ ಹೊಸ ಆರೋಪ

ಹೈದರಾಬಾದ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಸಹ ತರಬೇತಿ ನಿರತ ಮಹಿಳಾ ಐಪಿಎಸ್ ಅಧಿಕಾರಿಗೆ…

4 hours ago