Latest

ನಡು ರಸ್ತೆಯಲ್ಲಿ ಅಬ್ಬರ: ಕಾರು ಟಚ್ ಗೊಂಡ ಕಾರಣಕ್ಕೆ ಮಚ್ಚು ಹಿಡಿದು ಹಲ್ಲೆಗೆ ಯತ್ನ

ಬೆಂಗಳೂರು, ಜುಲೈ 07: ನಗರದಲ್ಲಿ ಟ್ರಾಫಿಕ್ ಗದ್ದುಗೆ ನಡುವೆ ಛಿಕ್ಕೊ ಚಿಕ್ಕ ದುರಂತವು ದೊಡ್ಡ ಘಟನೆಗೆ ರೂಪಾಂತರಗೊಂಡಿರುವ ಘಟನೆ ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರು ಟಚ್ ಆದ ಕಾರಣಕ್ಕೆ ಓರ್ವ ಚಾಲಕ ನಡು ರಸ್ತೆಯಲ್ಲೇ ಮತ್ತೊಬ್ಬ ಚಾಲಕನ ಮೇಲೆ ಮಚ್ಚಿನಿಂದ ಹಲ್ಲೆ ಯತ್ನಿಸಿದ ಅಪಾಯಕಾರಿ ಘಟನೆಯು ನಗರದ ಸಂಚಲನ ಮೂಡಿಸಿದೆ.

ಮಧ್ಯಾಹ್ನ ಸುಮಾರು 1:40ರ ಸುಮಾರಿಗೆ ಶೇಷಾದ್ರಿಪುರಂನ ರೈಲ್ವೆ ಗೇಟ್ ಹಿಂಭಾಗದಲ್ಲಿ ಇಟಿಯೋಸ್ ಮತ್ತು ಇನ್ನೋವಾ ಕಾರುಗಳು ಪರಸ್ಪರ ತಾಗಿಕೊಂಡವು. ಈ ಸಣ್ಣ ಘಟನೆಗೆ ತೀವ್ರ ಕೋಪಗೊಂಡ ಇನ್ನೋವಾ ಚಾಲಕ, ಕಾರಿನಲ್ಲಿ ಇಟ್ಟಿದ್ದ ಮಚ್ಚು ತೆಗೆದು ಇಟಿಯೋಸ್ ಚಾಲಕನ ಮೇಲೆ ದಾಳಿ ಮಾಡಲು ಮುಂದಾದನು.

ಹಲ್ಲೆ ನಡೆಯುವ ಸಂದರ್ಭದಲ್ಲಿಯೇ ಇಟಿಯೋಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂಪ್ಲಾಯಿಗಳಿಗೂ ಅವನು ಹಲ್ಲೆ ಮಾಡಲು ಯತ್ನಿಸಿದ ಎನ್ನಲಾಗಿದೆ. ಮಾತನಾಡಿದ ಮಾತುಗಳು ಗಲಾಟೆಗೆ ಬದಲಾಗಿ, ಮತ್ತಷ್ಟು ಉದ್ರಿಕ್ತಗೊಂಡ ಇನ್ನೋವಾ ಚಾಲಕ ಮಚ್ಚು ಹಿಡಿದು ಇಟಿಯೋಸ್ ಚಾಲಕನ ಗಂಟಲಿಗೆ ಇಡಲು ಮುಂದಾಗಿದ್ದಾನೆ ಎನ್ನಲಾಗಿದೆ.

ಸಮೀಪದ ಸಾರ್ವಜನಿಕರು ಕೂಡಲೇ ಮಧ್ಯ ಪ್ರವೇಶ ಮಾಡಿ ಆರೋಪಿಯನ್ನು ತಡೆದು, ಪೊಲೀಸರು ಸಂಪರ್ಕಿಸಲು ಯತ್ನಿಸಿದರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆರೋಪಿಯ ಕಾರಿನ ಮೇಲೆ ಕೆಲವರು ಕಲ್ಲು ಎಸೆದು ತಡೆಯುವ ಪ್ರಯತ್ನ ಮಾಡಿದರು. ಈ ಘಳಿಗೆಯಲ್ಲಿ ಆತ ತನ್ನ ಇನ್ನೋವಾ ಕಾರು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.

ಘಟನೆ ಸಂಬಂಧವಾಗಿ ಹಲ್ಲೆಗೊಳಗಾದ ಇಟಿಯೋಸ್ ಕಾರು ಚಾಲಕ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪೊಲೀಸರು ಈಗಾಗಲೇ ಆರೋಪಿಯ ಗುರುತು ಪತ್ತೆ ಹಚ್ಚಿ, ಬಂಧನದ ಪ್ರಕ್ರಿಯೆ ಮುಂದುವರೆಸಿದ್ದಾರೆ.

 

nazeer ahamad

Recent Posts

ಭಟ್ಕಳ ಘಟನೆಗೆ ಹೊಸ ತಿರುವು: ಯುವತಿಯ ದೂರಿನ ಮೇರೆಗೆ ಮುಸ್ಲಿಂ ಯುವಕ ಬಂಧನ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಮಹಿಳಾ ಸಹೋದ್ಯೋಗಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಕಾರಿನಲ್ಲಿ ಕರೆದೊಯ್ದ ಆರೋಪದ ಹಿನ್ನೆಲೆಯಲ್ಲಿ…

12 hours ago

ಅಧಿಕಾರಿಗೆ ಚಪ್ಪಲಿ ಏಟು: 20 ವರ್ಷವಾದರೂ ಭೂ ಪರಿಹಾರ ನೀಡದ ಬಾಗಲಕೋಟೆ ಅಧಿಕಾರಿಗಳಿಗೆ ಲೋಕಾಯುಕ್ತ ಸಮನ್ಸ್

ಬಾಗಲಕೋಟೆ: ಸುಮಾರು 20 ವರ್ಷಗಳ ಹಿಂದೆ ಭೂಸ್ವಾಧೀನಪಡಿಸಿಕೊಂಡ ಜಮೀನಿಗೆ ಇನ್ನೂ ಪರಿಹಾರ ನೀಡದೇ ರೈತನನ್ನು ಅಲೆದಾಡಿಸಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ…

21 hours ago

ಸಾರ್ವಜನಿಕರ ದೂರುಗಳ ಬೆನ್ನಲ್ಲೇ ದಾಸನಪುರ ಗ್ರಾಮ ಪಂಚಾಯಿತಿ ಪಿಡಿಓ ಉಷಾ ಅಮಾನತು

ಬೆಂಗಳೂರು: ಅಧಿಕೃತ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ…

21 hours ago

ರೈತರ ಹಣ ಗುಳುಂ: ತೊಂಡೇಭಾವಿ ಹಾಲು ಡೇರಿಯಲ್ಲಿ ₹2.33 ಲಕ್ಷ ಹಣ ದುರುಪಯೋಗ.!

ಗೌರಿಬಿದನೂರು: ತೊಂಡೇಭಾವಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರೈತರ ಹಣ ದುರುಪಯೋಗವಾಗಿರುವ ಆರೋಪ ಕೇಳಿಬಂದಿದ್ದು, ಈ ವಿಚಾರವಾಗಿ ಗ್ರಾಮಸ್ಥರು ಹಾಗೂ…

21 hours ago

₹50 ಸಾವಿರ ಲಂಚ ಸ್ವೀಕರಿಸುವಾಗ ಪಿಎಸ್‌ಐ, ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ

ಕಲಬುರಗಿ: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದ್ದು, ಕಲಬುರಗಿ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಪೊಲೀಸ್…

21 hours ago

4ನೇ ತರಗತಿ ಓದಿದ ಮೆಕ್ಯಾನಿಕ್‌ನ ಅದ್ಭುತ ಸಾಧನೆ: ಮಾರುತಿ 800 ಅನ್ನು ಲ್ಯಾಂಬೋರ್ಗಿನಿಯನ್ನಾಗಿ ಮಾಡಿದ ಕನ್ನಡಿಗ!

ಈ ಕಾಲದಲ್ಲಿ ಪ್ರತಿಭೆ ಮತ್ತು ಕ್ರಿಯೇಟಿವಿಟಿಗೆ ಯಾವುದೇ ವಿದ್ಯಾರ್ಹತೆ ಅಥವಾ ದೊಡ್ಡ ಹುದ್ದೆಗಳ ಅಗತ್ಯವಿಲ್ಲ ಎಂಬುದನ್ನು ಹಾಸನ ಜಿಲ್ಲೆಯ ಅರಸೀಕೆರೆಯ…

21 hours ago