ಬೆಂಗಳೂರು, ಜುಲೈ 07: ನಗರದಲ್ಲಿ ಟ್ರಾಫಿಕ್ ಗದ್ದುಗೆ ನಡುವೆ ಛಿಕ್ಕೊ ಚಿಕ್ಕ ದುರಂತವು ದೊಡ್ಡ ಘಟನೆಗೆ ರೂಪಾಂತರಗೊಂಡಿರುವ ಘಟನೆ ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರು ಟಚ್ ಆದ ಕಾರಣಕ್ಕೆ ಓರ್ವ ಚಾಲಕ ನಡು ರಸ್ತೆಯಲ್ಲೇ ಮತ್ತೊಬ್ಬ ಚಾಲಕನ ಮೇಲೆ ಮಚ್ಚಿನಿಂದ ಹಲ್ಲೆ ಯತ್ನಿಸಿದ ಅಪಾಯಕಾರಿ ಘಟನೆಯು ನಗರದ ಸಂಚಲನ ಮೂಡಿಸಿದೆ.
ಮಧ್ಯಾಹ್ನ ಸುಮಾರು 1:40ರ ಸುಮಾರಿಗೆ ಶೇಷಾದ್ರಿಪುರಂನ ರೈಲ್ವೆ ಗೇಟ್ ಹಿಂಭಾಗದಲ್ಲಿ ಇಟಿಯೋಸ್ ಮತ್ತು ಇನ್ನೋವಾ ಕಾರುಗಳು ಪರಸ್ಪರ ತಾಗಿಕೊಂಡವು. ಈ ಸಣ್ಣ ಘಟನೆಗೆ ತೀವ್ರ ಕೋಪಗೊಂಡ ಇನ್ನೋವಾ ಚಾಲಕ, ಕಾರಿನಲ್ಲಿ ಇಟ್ಟಿದ್ದ ಮಚ್ಚು ತೆಗೆದು ಇಟಿಯೋಸ್ ಚಾಲಕನ ಮೇಲೆ ದಾಳಿ ಮಾಡಲು ಮುಂದಾದನು.
ಹಲ್ಲೆ ನಡೆಯುವ ಸಂದರ್ಭದಲ್ಲಿಯೇ ಇಟಿಯೋಸ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂಪ್ಲಾಯಿಗಳಿಗೂ ಅವನು ಹಲ್ಲೆ ಮಾಡಲು ಯತ್ನಿಸಿದ ಎನ್ನಲಾಗಿದೆ. ಮಾತನಾಡಿದ ಮಾತುಗಳು ಗಲಾಟೆಗೆ ಬದಲಾಗಿ, ಮತ್ತಷ್ಟು ಉದ್ರಿಕ್ತಗೊಂಡ ಇನ್ನೋವಾ ಚಾಲಕ ಮಚ್ಚು ಹಿಡಿದು ಇಟಿಯೋಸ್ ಚಾಲಕನ ಗಂಟಲಿಗೆ ಇಡಲು ಮುಂದಾಗಿದ್ದಾನೆ ಎನ್ನಲಾಗಿದೆ.
ಸಮೀಪದ ಸಾರ್ವಜನಿಕರು ಕೂಡಲೇ ಮಧ್ಯ ಪ್ರವೇಶ ಮಾಡಿ ಆರೋಪಿಯನ್ನು ತಡೆದು, ಪೊಲೀಸರು ಸಂಪರ್ಕಿಸಲು ಯತ್ನಿಸಿದರು. ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಆರೋಪಿಯ ಕಾರಿನ ಮೇಲೆ ಕೆಲವರು ಕಲ್ಲು ಎಸೆದು ತಡೆಯುವ ಪ್ರಯತ್ನ ಮಾಡಿದರು. ಈ ಘಳಿಗೆಯಲ್ಲಿ ಆತ ತನ್ನ ಇನ್ನೋವಾ ಕಾರು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆ ಸಂಬಂಧವಾಗಿ ಹಲ್ಲೆಗೊಳಗಾದ ಇಟಿಯೋಸ್ ಕಾರು ಚಾಲಕ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪೊಲೀಸರು ಈಗಾಗಲೇ ಆರೋಪಿಯ ಗುರುತು ಪತ್ತೆ ಹಚ್ಚಿ, ಬಂಧನದ ಪ್ರಕ್ರಿಯೆ ಮುಂದುವರೆಸಿದ್ದಾರೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…