ಕುಂದಗೋಳ; ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶೌಚಾಲಯ ಸೌಲಭ್ಯಗಳಿಲ್ಲದೆ ಇಲ್ಲಿನ ವಿದ್ಯಾರ್ಥಿಗಳು ತ್ರೀವ ತೊಂದರೆ ಅನುಭವಿಸುತ್ತಿದ್ದಾರೆ.
ಸರಕಾರ ಸ್ವಚ್ಚತೆ ಹಾಗೂ ಶೌಚಾಲಯ ಬಳಸುವಂತೆ ಕುರಿತಾಗಿ ಹೇಳುವ ಮಾತುಗಳು ಕೇವಲ ಮಾತಿಗಷ್ಟೆ ಸೀಮಿತವಾಗಿದ್ದು, ಕೃತಿಯಲ್ಲಿ ಇಲ್ಲ ಎಂಬುದು ಕಾಲೇಜಿನಿ ಸ್ಥಿತಿಗತಿಗಳನ್ನು ಗಮನಿಸಿ ದಾಗಲೇ ಅರಿವಿಗೆ ಬರುತ್ತದೆ.
ಅದರಂತೆ ಯರಗುಪ್ಪಿ ಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ, ಶೌಚಾಲಯ ಕೊರತೆ ಒಂದು ವರ್ಷದಿಂದ ಪಾಳು ಬಿದ್ದಿದ್ದು ಕಾಲೇಜಿನ ವಿದ್ಯಾರ್ಥಿಗಳಿಗೆ ಪರಿತೆಪ್ಪಸುವಂತ ಮಾಡಿದೆ. ಕಟ್ಟಡ ಒಳಾಂಗಣ ದಲ್ಲಿ ಸಿಂಕ್, ಸೀಟ್, ಪೈಪಲೈನ್ ಒಡೆದು ಚೂರು ಚೂರು ಬಿದ್ದಿದ್ದು, ದುಸ್ಥಿತಿಗೆ ಬಂದು ತಲುಪಿದೆ. ವಿದ್ಯಾರ್ಥಿಗಳು ಈ ಕಟ್ಟಡದ ದುಸ್ಥಿತಿ ಕಂಡು ಮೂತ್ರ ವಿಸರ್ಜನೆ ಪಕ್ಕದ ಜಮೀನಿಗೆ ತೆರಳುತ್ತಾದ್ದಾರೆ. ಇನ್ನೂ ಕಟ್ಟಡ ಎಲ್ಲಡೆ ಬಿರುಕು ಬಿಟ್ಟಿದು, ವಿದ್ಯಾರ್ಥಿಗಳಿಗೆ ನಡುಕು ಶುರುವಾಗಿದೆ.
ಈಗಾಗಲೇ ತಾಲೂಕಿನ ಪಂಚಾಯಿತಿ ಅನಿರ್ಬಂಧಿತ ಅನುದಾನದಡಿಯಲ್ಲಿ ಒಂದು ರೂಮ್, ಮತ್ತು ಒಂದು ಪ್ಯಾಸೇಜ್ ಟೈಲ್ಸ್ ಕಾಮಗಾರಿ ಪ್ರಗತಿಯಲ್ಲಿ ಇದೆ, ಆದರೆ ಮೂಲಭೂತ ಸೌಕರ್ಯದದಿಂದ ವಂಚಿತವಾದರು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ಬಂದಿಲವ್ವಾ? ಅನ್ನೋದು ವಿದ್ಯಾರ್ಥಿಗಳ ವಾದ.
ಒಂದು ವರ್ಷದಿಂದಲೇ ಕುಡಿಯುಲು ನೀರು, ಶೌಚಾಲಯದ ಕೊರತೆ, ಕಟ್ಟಡದ ದುರಸ್ತಿ ಇದ್ದರು ಜನಪ್ರತಿನಿಧಿಗಳು ಆಗಲಿ ಅಧಿಕಾರಿಗಳ ತಂಡ ವಾಗಲಿ ಇದುವರೆಗೂ ತೆಲೆ ಕೂಡ ಹಾಕಿಲ್ಲ, ಈಗ ಇದ್ದ ಮೇಲೆ ಸರಕಾರದ ದುಡ್ಡು ಹೇಗೆ ನಿರ್ವಹಣೆ ವಾಗುತ್ತದೆ? ಅಥವಾ ಅಧಿಕಾರಿಗಳ ಜೇಬಿಗೆ ಸೇರುತ್ತಾ? ಅನ್ನುವುದು ವಿದ್ಯಾರ್ಥಿಗಳ ಯುಕ್ಷ ಪ್ರಶ್ನೆ. ಅಷ್ಟಕ್ಕೂ ಇವರು ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ.ಆದರೆ ಕೂಲಿ ಕಾರ್ಮಿಕರು ಮಕ್ಕಳು ಗ್ರಾಮೀಣ ಪ್ರದೇಶದಲ್ಲಿ ಓದಬೇಕಾದ ಅನಿವಾರ್ಯತೆ ಯಲ್ಲಿ ಇಂತಹ ಸಮಸ್ಯೆಗಳಿಗೆ ಸಿಲುಕಿ ಓದ್ದಾಡುವ ಪರಿಸ್ಥಿತಿ ನೋಡದೆ ಮೇಲೆ ಇವರುಗಳು ಗೊತ್ತಾಗದು.
ಸ್ಥಿತಿಗತಿ ಅರ್ಥ ಮಾಡಿಕೊಳ್ಳಲಾಗಿದೆ ಇವರುಗಳು ಕಛೇರಿಗೆ ಸೀಮಿತವಾದರ? ಕೂಡಲೇ ಪರಿಶೀಲಿಸಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ.
ವರದಿ; ಶಾನು ಯಲಿಗಾರ
ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ 21 ವರ್ಷದ ಯುವತಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ…
ಹಾಸನ: ಹಾಸನದಿಂದ ಬೆಂಗಳೂರಿನತ್ತ ತೆರಳುತ್ತಿದ್ದ KSRTC ಬಸ್ನಲ್ಲಿ ಯುವತಿಯೊಬ್ಬರಿಗೆ ಸಹ ಪ್ರಯಾಣಿಕನೊಬ್ಬ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಇದರಿಂದ ಬಸ್ನಲ್ಲಿ…
ಉನ್ನತ ವ್ಯಾಸಂಗದ ಕನಸು ಹೊತ್ತು ವಿದೇಶಕ್ಕೆ ತೆರಳಿದ್ದ ಉತ್ತರ ಪ್ರದೇಶದ ಯುವಕನ ಜೀವನ ಇದೀಗ ಸಂಪೂರ್ಣ ಬದಲಾಗಿದೆ. ಎಂಬಿಬಿಎಸ್ ಓದಲು…
ದೆಹಲಿಯ ಉತ್ತಮ್ ನಗರದಲ್ಲಿ 24 ವರ್ಷದ ಯುವಕನೊಬ್ಬನನ್ನು ಸ್ಥಳೀಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಳಿಕ, ಆತನ ಮೊಬೈಲ್ನಲ್ಲಿ ಪತ್ತೆಯಾದ…
ಕಿತ್ತೂರು: ಚನ್ನಮ್ಮನ ಕಿತ್ತೂರಿನಲ್ಲಿ ನಡೆದ ಆಭರಣ ಅಂಗಡಿ ಕಳ್ಳತನ ಪ್ರಕರಣವನ್ನು ಕಿತ್ತೂರು ಪೊಲೀಸರು ಭೇದಿಸಿದ್ದು, ರಾಜಸ್ಥಾನ ಮೂಲದ ನಾಲ್ವರು ಹಾಗೂ…
ಬೆಳಗಾವಿ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅನುಷ್ಠಾನದ ಕುರಿತು ನೈರುತ್ಯ ಆರ್ಟ ಮೀಡಿಯಾ ಸಂಸ್ಥೆ (ಬೆಂಗಳೂರು)…