Latest

ಆನ್‌ಲೈನ್ ರಿವ್ಯೂ ಪ್ರಕರಣ: ಯುವಕನಿಗೆ ₹5.5 ಲಕ್ಷ ಮೋಸ!

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೆಳಗುಲಿ ಗ್ರಾಮಕ್ಕೆ ಸೇರಿದ ವ್ಯಾಆರ್ ಧನಂಜಯ ಆನ್‌ಲೈನ್ ಲಾಭದ ಆಸೆಗೆ ₹5 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಧನಂಜಯಗೆ ವಾಟ್ಸಪ್ ಮೂಲಕ ಪರಿಚಯವಾದ ಸೈಬರ್ ಮೋಸಗಾರರು, ವೆಬ್‌ಸೈಟ್‌ಗಳಲ್ಲಿ ಮಾರಾಟವಾಗುವ ಉತ್ಪನ್ನಗಳಿಗೆ ರಿವ್ಯೂ ನೀಡಿ ಕಮಿಷನ್‌ ಸಂಪಾದಿಸಬಹುದು ಎಂದು ಭರವಸೆ ನೀಡಿದ್ದರು. ಪ್ರಾರಂಭದಲ್ಲಿ ಒಂದು ಉತ್ಪನ್ನಕ್ಕೆ ರಿವ್ಯೂ ನೀಡಿದ ನಂತರ ಅವರ ಖಾತೆಗೆ ₹839 ಜಮೆಯಾಗಿದ್ದು, ಇದು ಅವರ ನಂಬಿಕೆಯನ್ನು ಗೆದ್ದಿತು.

ಮುಂದೆ, ಹೆಚ್ಚಿನ ಲಾಭಾಂಶ ದೊರೆಯುತ್ತದೆ ಎಂಬ ವಾಗ್ದಾನದೊಂದಿಗೆ ಟೆಲಿಗ್ರಾಮ್‌ ಅ್ಯಪ್‌ ಮೂಲಕ ಸಂಪರ್ಕ ಸಾಧಿಸಿ ₹10 ಸಾವಿರ ಹೂಡಿಕೆ ಮಾಡುವಂತೆ ಕೇಳಲಾಗಿದೆ. ಇದರ ನಂತರ ಅವರ ಖಾತೆಗೆ ₹15,343 ಜಮೆಯಾಗಿತ್ತು. ಇದರಿಂದ ಮತ್ತಷ್ಟು ನಂಬಿಕೆ ಬಂದ ಧನಂಜಯ, ಹಂತ ಹಂತವಾಗಿ ಒಟ್ಟು ₹5,59,951 ಮೊತ್ತವನ್ನು ವರ್ಗಾಯಿಸಿದರು.

ಆದರೆ, ಈ ಎಲ್ಲಾ ಹೂಡಿಕೆಗಳ ವಿರುದ್ಧ ಅವರಿಗೆ ಕೇವಲ ₹55,182 ಮಾತ್ರ ವಾಪಸ್‌ ಬಂದಿದೆ. ಉಳಿದ ಮೊತ್ತ ವಾಪಸ್ ಪಡೆಯಲು ಮತ್ತಷ್ಟು ಹಣ ಪಾವತಿಸುವಂತೆ ನಿರಂತರ ಒತ್ತಡ ಬಂದಿದ್ದು, ಅನುಮಾನಗೊಂಡ ಧನಂಜಯ ಕೊನೆಗೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಯ ಕುರಿತು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರು ಈ ರೀತಿಯ ಆನ್ಲೈನ್ ಆಮಿಷಗಳಿಂದ ಎಚ್ಚರಿಕೆ ವಹಿಸಲು ಅಧಿಕಾರಿಗಳು ಎಚ್ಚರಿಸಿದ್ದಾರೆ.

nazeer ahamad

Recent Posts

ಲಿವ್-ಇನ್ ಸಂಬಂಧದ ದುರಂತ ಅಂತ್ಯ: ಲವ್ ಜಿಹಾದ್ ಗೆ ಮತ್ತೊಂದು ಬಲಿ, ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣ ಚರ್ಚೆಗೆ ಗ್ರಾಸ

ಗುಜರಾತಿನ ರಾಜ್‌ಕೋಟ್‌ನಲ್ಲಿ ಯುವತಿ ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಂದಿನಿ,…

5 hours ago

ಸದಾ ಶೀಲ ಶಂಕಿಸುತ್ತಿದ್ದವನು ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದ..!

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಪತ್ನಿಯ ಶೀಲವನ್ನು ಅನುಮಾನಿಸುತ್ತಿದ್ದ ಪತಿಯೊಬ್ಬ ಕೊನೆಗೆ ಆಕೆಯನ್ನು…

5 hours ago

ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದ ನಿವೃತ್ತ ಸೈನಿಕ; ₹4 ಕೋಟಿ ಆಸ್ತಿಯನ್ನು ತಿರುಪತಿ ದೇವರಿಗೆ ದಾನ ಮಾಡಿದ ಹೃದಯವಿದ್ರಾವಕ ನಿರ್ಧಾರ

ದೇಶದ ಗಡಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರೊಬ್ಬರು, ಸ್ವಂತ ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದು ತಮ್ಮ ಸುಮಾರು ₹4…

6 hours ago

ಬೇರೊಬ್ಬನೊಂದಿಗೆ ಓಡಿ ಹೋದ ತಾಯಿ: ಹಸಿದ ಕಂದಮ್ಮನನ್ನು ಮಡಿಲಲ್ಲಿ ಹಿಡಿದು ಮೆಡಿಕಲ್ಗೆ ಬಂದು ಕಣ್ಣೀರಿಟ್ಟ ತಂದೆ.

ಹಸಿದ ಕಂದಮ್ಮನ ಅಳುವನ್ನು ಸಮಾಧಾನಪಡಿಸಲಾಗದೆ ಅಸಹಾಯಕನಾಗಿ ನಿಂತ ತಂದೆಯೊಬ್ಬನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರ ಮನಕಲಕಿದೆ. ಪತ್ನಿ ಮನೆಯನ್ನು ತೊರೆದು…

6 hours ago

ಕುಟುಂಬದ ಮೂವರ ಹತ್ಯೆ ಪ್ರಕರಣ: ಹೆತ್ತವರನ್ನು ಕೊಂದ ಬಳಿಕ ಪ್ರಿಯಕರನೊಂದಿಗೆ ಹೋಗಿ ಸಿಗರೇಟ್ ಸೇದಿದ್ದ ಸೈಕೋ ಮಗಳು..!

ತಂದೆ, ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಪ್ರಕರಣದಲ್ಲಿ ದಿನದಿಂದ…

6 hours ago

ನಾಲ್ಕು ತಿಂಗಳ ಗರ್ಭಿಣಿ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ: ಕಲಬುರಗಿಯಲ್ಲಿ ಮನಕಲುಕುವ ಘಟನೆ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಒಂದೂವರೆ…

6 hours ago