Latest

ಒಬ್ಬ ಪತಿ, ಇಬ್ಬರು ಹೆಂಡತಿಯರು – ಅಚ್ಚರಿಯ ಒಪ್ಪಂದ!

ಬಿಹಾರ್‌ನ ಪೂರ್ಣಿಯಾ ಜಿಲ್ಲೆಯ ಒಂದು ಕುಟುಂಬದಲ್ಲಿ ಅಸಾಮಾನ್ಯ ಒಪ್ಪಂದದ ಮೂಲಕ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ಇಲ್ಲೊಬ್ಬ ವ್ಯಕ್ತಿ, ಇಬ್ಬರು ಹೆಂಡತಿಯರ ನಡುವೆ ಸಮಯವನ್ನು ಹಂಚಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಎಲ್ಲವೂ ಹೇಗೆ ಶುರುವಾಯಿತು?

ಪೂರ್ಣಿಯಾದ ರೂಪೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಪತಿ ಸುಮಾರು ಏಳು ವರ್ಷಗಳ ಹಿಂದೆ ಎರಡನೇ ಮದುವೆಯನ್ನು ಮಾಡಿದ್ದರು. ಆದರೆ, ಈ ವಿಷಯವನ್ನು ತನ್ನ ಮೊದಲ ಹೆಂಡತಿಗೆ ಮರೆಮಾಚಿದ್ದರು. ಈ ಸತ್ಯ ತಿಳಿಯುತ್ತಿದ್ದಂತೆಯೇ, ಮನೆಯಲ್ಲಿ ಭಾರೀ ಕಲಹಗಳು ಶುರುವಾಯಿತು. ಮೊದಲ ಹೆಂಡತಿ ಆಕ್ರೋಶಗೊಂಡು, ಪತಿಯನ್ನು ಮನೆ ಬಿಟ್ಟು ಹೋಗುವುದಕ್ಕೆ ಕಾರಣೆಂದೂ ಆರೋಪಿಸಿದರು. ಇದರಿಂದಾಗಿ ಗಂಡ ಎರಡನೇ ಹೆಂಡತಿಯ ಜತೆ ವಾಸಿಸಲು ಪ್ರಾರಂಭಿಸಿದರು.

ಪೊಲೀಸ್ ಮಧ್ಯಸ್ಥಿಕೆ – ಹೊಸ ನಿಯಮಗಳು!

ಈ ಪ್ರಕರಣ ಎಷ್ಟೋ ತಿರುವುಗಳ ನಂತರ ಪೊಲೀಸ್ ಸ್ಟೇಷನ್‌ಗೆ ಬಂದು ತಲುಪಿತು. ನಂತರ ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್ ಮಧ್ಯಸ್ಥಿಕೆ ವಹಿಸಿ, ಇಬ್ಬರು ಹೆಂಡತಿಯರಿಗೂ ನ್ಯಾಯ ಒದಗಿಸಲು ಒಂದು ನಿರ್ಧಾರ ಕೈಗೊಂಡಿತು.

ನಿರ್ಧಾರದ ಪ್ರಕಾರ:

ಪತಿ ವಾರದಲ್ಲಿ ಮೂರು ದಿನ ಮೊದಲ ಹೆಂಡತಿಯ ಜತೆ, ಮೂರು ದಿನ ಎರಡನೇ ಹೆಂಡತಿಯ ಜತೆ ಕಳೆಯಬೇಕು.

ಉಳಿದ ಒಂದು ದಿನ ಪತಿಗೆ ಸ್ವತಂತ್ರವಾಗಿರಲು ಅವಕಾಶ ನೀಡಲಾಗಿದೆ.

ಮೊದಲ ಹೆಂಡತಿ ವಿದ್ಯಾಭ್ಯಾಸಕ್ಕಾಗಿ ಪ್ರತಿ ತಿಂಗಳು ₹4000 ಹಣ ನೀಡಬೇಕೆಂದು ಪತಿಗೆ ಸೂಚಿಸಲಾಗಿದೆ.

ಸಮಾಧಾನಕರ ಅಂತ್ಯ?

ಈ ತೀರ್ಮಾನದಿಂದಾಗಿ, ಇಬ್ಬರು ಹೆಂಡತಿಯರೂ ಮತ್ತು ಗಂಡನೂ ಒಟ್ಟಾಗಿ ಜೀವನವನ್ನು ಮುಂದುವರಿಸಲು ಒಪ್ಪಿಕೊಂಡಿದ್ದಾರೆ. ಈ ವಿಚಿತ್ರ ಒಪ್ಪಂದ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಒಂದೇ ಹೆಂಡತಿಯ ಜತೆ ಜೀವನ ಸಾಗಿಸುವುದೇ ತಲೆನೋವು ಎಂಬ ಮಾತಿದೆ. ಆದರೆ ಈ ವ್ಯಕ್ತಿ ಇಬ್ಬರಿಗೂ ನ್ಯಾಯ ಕೊಡಲು ಈಗ ಹೊಸ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದಾನೆ!

nazeer ahamad

Recent Posts

ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…

1 week ago

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ…!

ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…

2 weeks ago

ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಬಡ ರೋಗಿಗಳ ಸುಲಿಗೆಗೆ ಮುಂದಾದ ಖಾಸಗಿ ಆಸ್ಪತ್ರೆಗಳು…!

ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…

3 weeks ago

ಅನ್ನಭಾಗ್ಯದ 4 ಕ್ವಿಂಟಾಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ಅಕ್ರಮ ದಾಸ್ತಾನು

ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…

4 weeks ago

ಪ್ರೀತಿಸಿದವಳನ್ನೇ ಕೊಂದ ಪಾಪಿ ಪತಿರಾಯ

ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…

1 month ago

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ಕಳ್ಳರ ಕೈಚಳಕ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರ ಕಸಿದು ಪರಾರಿ

ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…

2 months ago