ವಡೋದರದಲ್ಲಿ ನಡೆದ ಭೀಕರ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ಕಾರಿನ ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟರೂ, ಅಪಘಾತ ಮಾಡಿದ್ದ ಯುವಕನಿಗೆ ಯಾವುದೇ ಪಶ್ಚಾತ್ತಾಪವೇ ಇರಲಿಲ್ಲ. ಇದಕ್ಕೂ ಮೀರಿಸಿ, ರಸ್ತೆಯಲ್ಲೇ ಪುಂಡಾಟ ನಡೆಸಿದ ಆತನ ವರ್ತನೆ ಜನರಲ್ಲಿ ಆಕ್ರೋಶ ಉಂಟುಮಾಡಿದೆ.
ಅಪಘಾತದ ಭೀಕರ ದೃಶ್ಯ
ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಯುವಕ ಪ್ರಾರಂಭದಲ್ಲಿ ಕಾರಿನಿಂದ ಇಳಿಯಲೂ ನಿರಾಕರಿಸುತ್ತಾನೆ, ಹಾಗೆಯೇ ಅವನ ಜೊತೆಯ ಮತ್ತೊಬ್ಬ ಯುವಕ ದೂರ ಹೋಗಿ ನಿಂತುಕೊಳ್ಳುತ್ತಾನೆ. ನಂತರ, ಅಪಘಾತ ಮಾಡಿದ ಯುವಕ ತಾನು ಮಾಡಿರುವ ಕೃತ್ಯ ಕಡೆಗೆ ಗಮನಿಸದೇ, ಮಹಿಳೆಯ ಮೃತದೇಹದತ್ತ ತಿರುಗಿಯೂ ನೋಡದೆ, ಮತ್ತೊಂದು ರೌಂಡ್ ಎಂದು ದರ್ಪ ತೋರುತ್ತಾ ರಸ್ತೆಯಲ್ಲೇ ತೂರಾಡುತ್ತಾನೆ.
ಸಂಭ್ರಮದಲಿ ಮರೆತ ಪಶ್ಚಾತ್ತಾಪ
ಯುವಕ ಕುಡಿದ ಮತ್ತಿನಲ್ಲಿದ್ದು, ತಾನು ಎಂತಹ ಗಂಭೀರ ಅಪರಾಧ ಮಾಡಿದ್ದೇನೆ ಎಂಬುದರ ಬಗ್ಗೆ ಯಾವುದೇ ಪರಿವೆಯಿಲ್ಲ. ಈ ನಡುವೆ, ಅಪಘಾತ ಸ್ಥಳಕ್ಕೆ ಜನರು ಸೇರಿ ಆತನನ್ನು ಸುತ್ತುವರಿದು ಹಿಡಿದುಕೊಳ್ಳುತ್ತಾರೆ. ಈ ಭೀಕರ ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಆರೋಪಿ ಕುರಿತು ಮಾಹಿತಿ
ಅಪಘಾತಕ್ಕೆ ಕಾರಣವಾಗಿರುವ ಯುವಕನನ್ನು ರಕ್ಷಿತ್ ಎಂದು ಗುರುತಿಸಲಾಗಿದೆ. ಆತ ಕಾನೂನು ವಿದ್ಯಾರ್ಥಿಯಾಗಿದ್ದು, ಅವನ ನಿರ್ಲಕ್ಷ್ಯ ಮತ್ತು ನಿರ್ದಯ ವರ್ತನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನತೆ ಒತ್ತಾಯಿಸುತ್ತಿದ್ದಾರೆ. ಈ ಪ್ರಕರಣವು ನೈತಿಕ ಮತ್ತು ಕಾನೂನಾತ್ಮಕ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಈಗ ಮುಂದಿನ ಹಂತದ ಕ್ರಮ ಕೈಗೊಳ್ಳುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…
ಮೈಸೂರು: ನಕಲಿ ದಾಖಲೆಗಳ ಆಧಾರದಲ್ಲಿ ನೋಂದಣಿ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಿದ್ದ ದುಬಾರಿ ಕಾರುಗಳ ಮೇಲೆ ಸಾರಿಗೆ ಇಲಾಖೆಯ ಅಧಿಕಾರಿಗಳು…
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಸುಮಾರು 17 ಕಿಲೋಗ್ರಾಂ…
ರಾಜ್ಯ ಸರ್ಕಾರ ಓಲಾ, ಉಬರ್ ಹಾಗೂ ರ್ಯಾಪಿಡೋ ಸೇರಿದಂತೆ ಎಲ್ಲ ಬೈಕ್ ಟ್ಯಾಕ್ಸಿ ಸೇವೆಗಳನ್ನು ಬೆಂಗಳೂರಿನಲ್ಲಿ ರ್ಯಾಪಿಡೋ ಚಾಲಕನಿಂದ ಮಹಿಳೆಯ…
ಪುತ್ತೂರು, ಜೂನ್ 16 – ಪುತ್ತೂರು ಹೊರವಲಯದ ಚಿಕ್ಕಪುತ್ತೂರಿನಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ…
ಕೋಲಾರ್ (ಜೂನ್ 16): ನಗರದ ಸಹಕಾರ ನಗರದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೇಂದ್ರವೊಂದರಲ್ಲಿ ಭಾನುವಾರ ರಾತ್ರಿ ಸಂಭವಿಸಿದ…