ಬೆಂಗಳೂರು: ಧರ್ಮಸ್ಥಳದಲ್ಲಿ ಪತ್ತೆಯಾಗಿರುವ ಪಾನ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಂಬಂಧಿತ ದಾಖಲೆಗಳ ಮಾಲೀಕರ ಪರಿಚಯ ಈಗ ಬಹಿರಂಗವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಮೂಲದ ಸಿದ್ದಲಕ್ಷ್ಯಮ್ಮ ಎಂಬವರು ಈ ಕಾರ್ಡ್ಗಳ ಮಾಲಿಕತ್ವದ ಸಂಬಂಧ ತಮ್ಮ ಮಗ ಸುರೇಶ್ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಸಿದ್ದಲಕ್ಷ್ಯಮ್ಮ ಪ್ರಕಾರ, ಅವರ ಪುತ್ರ ಸುರೇಶ್ ಸುಮಾರು ಐದು ತಿಂಗಳ ಹಿಂದೆ ಜಾಂಡಿಸ್ನಿಂದ ಮೃತಪಟ್ಟಿದ್ದ. “ನನಗೆ ಎಟಿಎಂ ಬಳಕೆಗಲ್ಲ. ನಾನು ಬಾಡಿಗೆ ಕಾರ್ಡ್ ಕೊಟ್ಟಿದ್ದೆ. ಅದನ್ನು ನನ್ನ ಮಗ ಸುರೇಶ್ ಬಳಸುತ್ತಿದ್ದ,” ಎಂದು ಅವರು ಸ್ಪಷ್ಟಪಡಿಸಿದರು.
ತಮ್ಮ ಪುತ್ರ ಧರ್ಮಸ್ಥಳಕ್ಕೆ ಹಿಂದೆಯೂ ಕೆಲವೊಮ್ಮೆ ತೆರಳಿದ್ದ ಸಂಗತಿಯನ್ನು ಸಿದ್ದಲಕ್ಷ್ಯಮ್ಮ ಹಂಚಿಕೊಂಡಿದ್ದಾರೆ. “ಪೊಲೀಸರು ಮೊನ್ನೆ ಬಂದು ನನ್ನ ಬಗ್ಗೆ ವಿಚಾರಿಸಿದರು. ನಾನು ಆಗ ಮನೆಯಲ್ಲಿ ಇರಲಿಲ್ಲ. ನಿನ್ನೆ ಮತ್ತೆ ಬಂದು ನನ್ನ ಫೋಟೋ ತೆಗೆದುಕೊಂಡು ಹೋದರು. ನಾವು ಕೆಲ ಸಮಯದ ಹಿಂದೆ ಪರ್ಸ್ ಕಳೆದುಕೊಂಡಿದ್ದೆವು. ಆದರೆ ಈ ಪರ್ಸ್ ಕಳೆವಿಕೆ ಪ್ರಕರಣಕ್ಕೂ, ಧರ್ಮಸ್ಥಳ ಶವ ಪತ್ತೆ ಪ್ರಕರಣಕ್ಕೂ ನಮ್ಮಿಗೆ ಯಾವುದೇ ಸಂಬಂಧವಿಲ್ಲ,” ಎಂದು ಅವರು ಹೇಳಿದರು.
ಮಗನ ಕುಡಿತದ ಸಮಸ್ಯೆಯೂ ಮನೆಯಲ್ಲಿನ ತೊಂದರೆಗಳಿಗೆ ಕಾರಣವಾಗಿತ್ತು ಎನ್ನುವಂತೆ ಅವರು ಹೇಳಿದ್ದಾರೆ. “ಸುರೇಶ್ ಮೂರು ವರ್ಷಗಳಿಂದ ನಮ್ಮ ಜೊತೆ ಇರಲಿಲ್ಲ. ಕುಡಿತ ಜಾಸ್ತಿಯಾಗಿತ್ತು. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ನಾನು ನಿಖರವಾಗಿ ಉತ್ತರ ನೀಡಿದ್ದೇನೆ,” ಎಂದು ಸಿದ್ದಲಕ್ಷ್ಯಮ್ಮ ಹೇಳಿದಾರೆ.
ಈ ಮಾಹಿತಿಯೊಂದಿಗೆ ಧರ್ಮಸ್ಥಳದಲ್ಲಿ ಪತ್ತೆಯಾದ ಶವ ಹಾಗೂ ಡಾಕ್ಯುಮೆಂಟ್ಗಳ ನಡುವಿನ ಸಂಪರ್ಕವನ್ನು ಪೊಲೀಸರು ಈಗ ಹೆಚ್ಚಿನ ನಿರೀಕ್ಷೆಯೊಂದಿಗೆ ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…