ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಬಿಸಿಎ ಓದುತ್ತಿದ್ದ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇದೀಗ ಸ್ಪೋಟಕ ತಿರುವು ಪಡೆದಿದೆ. ತಡವಾಗಿ ಬೆಳಕಿಗೆ ಬಂದ ಈ ಘಟನೆಗೆ ನವೀನ್ ಎಂಬ ಯುವಕನ ಪ್ರೇಮ ಸಂಬಂಧ ಹಾಗೂ ಮತ್ತೊಬ್ಬ ವ್ಯಕ್ತಿಯ ಕಿರುಕುಳವೇ ಕಾರಣ ಎನ್ನಲಾಗಿದೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರು ಗ್ರಾಮದ ಶಿಲ್ಪಾ (22) ಎಂಬವರು ಸಾವಿಗೀಡಾದ ವಿದ್ಯಾರ್ಥಿನಿ. ಬೆಳಗಾವಿಯ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಈಕೆ, ಶಿಗ್ಗಾವಿಯ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಮೂರು ವರ್ಷಗಳ ಕಾಲ ಇವರಿಬ್ಬರ ನಡುವೆ ಪ್ರೇಮಸಂಬಂಧ ಮುಂದುವರಿದಿತ್ತು.

ಆದರೆ ಇತ್ತೀಚೆಗೆ ಶಿಲ್ಪಾಗೆ ಅನಾಮಿಕ ಕರೆಗಳು ಬರುತ್ತಿದ್ದು, ಕಿರುಕುಳಕ್ಕೆ ಒಳಗಾಗಿದ್ದಳು ಎಂಬ ಆಕ್ಷೇಪಣೆ ಕೇಳಿಬಂದಿದೆ. ಈ ಹಿಂದಿನ ಪ್ರಾಥಮಿಕ ತನಿಖೆಯಲ್ಲಿ, ರಂಜಾನ್ ನದಾಫ್ ಎಂಬ ವ್ಯಕ್ತಿ ಶಿಲ್ಪಾಗೆ ನಿರಂತರವಾಗಿ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಯುವತಿಯ ಮೇಲೆ ನಡೆದ ಮಾನಸಿಕ ಹಿಂಸೆ ಹಾಗೂ ದಬ್ಬಾಳಿಕೆಯಿಂದಾಗಿ, ಕಳೆದ ಒಂದು ವಾರದ ಹಿಂದೆ ಆತ್ಮಹತ್ಯೆಗೆ ಶರಣಾದ ಶಿಲ್ಪಾ, ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡಿದ್ದಳು.

ಈ ಘಟನೆ ಈಗ ತಡವಾಗಿ ಸಾರ್ವಜನಿಕ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಗಂಭೀರ ತಿರುವು ಸಿಕ್ಕಿದೆ. ಪ್ರಕರಣ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಎಲ್ಲಾ ಆಯಾಮಗಳಿಂದ ವಿಚಾರಣೆ ನಡೆಯುತ್ತಿದೆ.

ಸಂಬಂಧಿತ ವ್ಯಕ್ತಿಗಳ ವಿಚಾರಣೆ, ಮೊಬೈಲ್ ಕಾಲ್ ಡೇಟಾ ಪರಿಶೀಲನೆ ಮತ್ತು ಹಾಸ್ಟೆಲ್ ಸಹವಾಸಿಗಳ ಹೇಳಿಕೆಗಳು ಪ್ರಕರಣದ ಮೌಲ್ಯಮಾಪನಕ್ಕೆ ಸಹಕಾರಿಯಾಗಲಿವೆ.

Related News

error: Content is protected !!