Latest

ನಂದಿನಿ ಬೂತ್‌ಗೆ 1 ಕೋಟಿ 3 ಲಕ್ಷ ರೂ. ತೆರಿಗೆ ನೋಟಿಸ್: ಸಣ್ಣ ವ್ಯಾಪಾರಿಗಳಿಗೆ ಶಾಕ್!

ಬೆಂಗಳೂರು ನಗರದಲ್ಲಿ ಸಣ್ಣ ವ್ಯಾಪಾರಿಗಳು ತೆರಿಗೆ ಇಲಾಖೆಯ ನೋಟಿಸ್‌ಗಳಿಂದ ಹಗ್ಗಾಮಿಗೊಳಗಾಗುತ್ತಿದ್ದಾರೆ. ಉಲ್ಲಾಳದ ನಂದಿನಿ ಬೂತ್ ಮಾಲಿಕ ರವಿ ಅವರಿಗೆ ದಾಖಲೆಬದ್ಧ ವ್ಯಾಪಾರದ ಹೆಸರಿನಲ್ಲಿ ರೂ. 1 ಕೋಟಿ 3 ಲಕ್ಷ ತೆರಿಗೆ ಪಾವತಿ ಮಾಡಬೇಕೆಂದು ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಇತ್ತೀಚೆಗಿನ ಜಿಎಸ್ಟಿ ನಿಯಮಗಳ ಅನ್ವಯ, ನಗರದಲ್ಲಿನ ನಂದಿನಿ ಬೂತ್‌ಗಳನ್ನು ವಾಣಿಜ್ಯ ಪ್ರಸ್ಥಾಪನೆಗಳಂತೆ ಪರಿಗಣಿಸಿ ನೂತನ ತೆರಿಗೆಗಳು ವಿಧಿಸಲಾಗುತ್ತಿದೆ. ಈ ಕ್ರಮದಿಂದ ಸಣ್ಣ ಅಂಗಡಿಮಾಲೀಕರು, ಬೀದಿ ಬದಿಯ ವ್ಯಾಪಾರಿಗಳು, ಟೀ ಶಾಪ್ ಹಾಗೂ ಬೇಕರಿ ಮಾಲೀಕರಿಗೆ ತೀವ್ರ ಆಘಾತವಾಗಿದೆ.

ಈ ಕ್ರಮವನ್ನು ವಿರೋಧಿಸಿ ವ್ಯಾಪಾರಿಗಳು ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಜುಲೈ 25 ರಂದು ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ವ್ಯಾಪಾರಿಗಳು ಸೇರಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ 23 ಮತ್ತು 24 ರಂದು ಬೆಂಗಳೂರಿನ ಕೆಲ ಅಂಗಡಿಗಳು ಮುಚ್ಚಲ್ಪಡುವ ಸಾಧ್ಯತೆ ಇದೆ.

ಸರ್ಕಾರದ ಈ ಕ್ರಮದ ವಿರುದ್ಧ ಕಿಡಿಕಾರಿದ ವ್ಯಾಪಾರಿಗಳು ಈಗ ಡಿಜಿಟಲ್ ಪೇಮೆಂಟ್‌ಗೂ ವಿರೋಧ ವ್ಯಕ್ತಪಡಿಸುತ್ತಿದ್ದು, “ಒನ್‌ಲಿ ಕ್ಯಾಶ್” ಪಲ್ಲಟದೊಂದಿಗೆ ಗ್ರಾಹಕರಿಗೆ ಹಣ ನಗದಾಗಿ ಪಾವತಿಸಲು ಸೂಚನೆ ನೀಡಿದ್ದಾರೆ. ಪೇಟಿಎಂ, ಗೂಗಲ್ ಪೇ, ಫೋನ್‌ಪೇ‌ ಮೊದಲಾದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ವ್ಯಾಪಾರಿಗಳು ‘ನೋ ಎಂಟ್ರಿ’ ಹೇಳಿದರು. ಹಲವು ಅಂಗಡಿಗಳಲ್ಲಿ ಈಗಾಗಲೇ ಕ್ಯೂಆರ್ ಕೋಡ್‌ಗಳು ತೆಗೆದು ಹಾಕಲಾಗಿದ್ದು, ನಗದು ವ್ಯವಹಾರಗಳೇ ಮುಖ್ಯವಾಗುತ್ತಿವೆ.

ವ್ಯಾಪಾರಿಗಳ ಬೇಡಿಕೆಗಳು:

ಜಿಎಸ್ಟಿ ಹಾಗೂ ವಾಣಿಜ್ಯ ತೆರಿಗೆದಲ್ಲಿ ಸಣ್ಣ ವ್ಯಾಪಾರಿಗಳಿಗೆ ಸಡಿಲತೆ

ನಂದಿನಿ ಬೂತ್‌ಗಳಂತಹ ಸಾರ್ವಜನಿಕ ಸೇವಾ ಕೇಂದ್ರಗಳ ಮೇಲಿನ ತೆರಿಗೆದಿಂದ ವಿನಾಯಿತಿ

ಡಿಜಿಟಲ್ ಪಾವತಿಗೆ ಬದಲಾಗಿ ನಗದು ವ್ಯವಹಾರಗಳಿಗೆ ಪ್ರೋತ್ಸಾಹ

ಈ ನಿರ್ಧಾರಗಳು ಸಣ್ಣಮಧ್ಯಮ ವ್ಯಾಪಾರಿಗಳ ಆರ್ಥಿಕ ಸ್ಥಿತಿಗೆ ಕತ್ತರಿ ಹಾಕುತ್ತವೆ ಎಂಬ ಆಕ್ರೋಶ ವ್ಯಾಪಕವಾಗಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ತೆರಿಗೆ ಇಲಾಖೆಯ ನೋಟಿಸ್ಗಳ ಮಳೆ ಸುರಿಯುತ್ತಿರುವುದು ವ್ಯಾಪಾರಿಗಳು ಸರ್ಕಾರದ ನಿಲುವಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಲು ಕಾರಣವಾಗಿದೆ.

nazeer ahamad

Recent Posts

ಬೆಂಗಳೂರು ರಸ್ತೆ ಅಪಘಾತದಲ್ಲಿ ಭಟ್ಕಳದ ಯುವತಿ ದುರ್ಮರಣ; ಮದುವೆ ಕಾರ್ಯಕ್ರಮ ಮುಗಿಸಿ ವಾಪಸಾಗುವಾಗ ದುರಂತ

ಭಟ್ಕಳ: ಉದ್ಯೋಗ ನಿಮಿತ್ತ ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ಭಟ್ಕಳ ಮೂಲದ ಯುವತಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ…

5 hours ago

ಕಿತ್ತೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಇಬ್ಬರು ಮನೆಗಳ್ಳರ ಬಂಧನ, ₹9 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ವಾಹನಗಳ ಜಪ್ತಿ

ಕಿತ್ತೂರು: ಕಿತ್ತೂರು ಹಾಗೂ ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಮನೆಗಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿರುವ ಕಿತ್ತೂರು ಪೊಲೀಸರು,…

5 hours ago

ಶಿರಸಿಯಲ್ಲಿ ಹಾವು ಕಚ್ಚಿ ಬಾಲಕ ಸಾವು – ವೈದ್ಯರ ನಿರ್ಲಕ್ಷ್ಯದ ಆರೋಪ

ಶಿರಸಿ: ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಹಳ್ಳಿಯಲ್ಲಿ ಹಾವು ಕಚ್ಚಿದ ಪರಿಣಾಮ ಬಾಲಕ ಮೃತಪಟ್ಟ ಘಟನೆ ದುಃಖಕ್ಕೆ ಕಾರಣವಾಗಿದ್ದು, ಸರ್ಕಾರಿ ಆಸ್ಪತ್ರೆಯ…

8 hours ago

ಭಟ್ಕಳದಲ್ಲಿ ಭೀಕರ ರಸ್ತೆ ಅಪಘಾತ: ಮರಕ್ಕೆ ಬೈಕ್ ಡಿಕ್ಕಿ – ಯುವಕ ಸಾವು, ಸವಾರನ ಸ್ಥಿತಿ ಗಂಭೀರ

ಭಟ್ಕಳ: ಅತಿವೇಗದಲ್ಲಿ ಚಲಿಸುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ…

8 hours ago

ತುಮಕೂರು ಹೆದ್ದಾರಿಯಲ್ಲಿ ದಾರುಣ ಘಟನೆ: ಯುವತಿಗೆ ಚಾಕು ಇರಿದು ಪೆಟ್ರೋಲ್ ಬಾಂಬ್ ಸಿಡಿಸಿಕೊಂಡ ಪ್ರೇಮಿ ಸಾವು

ತುಮಕೂರು: ಪ್ರೇಮಿಗಳ ನಡುವಿನ ಮನಸ್ತಾಪ ಭೀಕರ ತಿರುವು ಪಡೆದುಕೊಂಡ ಪರಿಣಾಮ, ಯುವಕನೊಬ್ಬ ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ಕಾರಿನಲ್ಲೇ…

8 hours ago

ಶೀಲಾ ಶಂಕಿಸಿ ಮಕ್ಕಳ ಎದುರೇ ತಾಯಿಯ ಹತ್ಯೆ: ಪತ್ನಿಯನ್ನು ಕೊಡಲಿಯಿಂದ ಕೊಂದ ಪತಿಗೆ ಜೀವಾವಧಿ ಶಿಕ್ಷೆ

ಧಾರವಾಡ: ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದ ಪತಿಗೆ ಧಾರವಾಡದ ನಾಲ್ಕನೇ…

8 hours ago