ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ ತಾಯಿ ಹಾಗೂ ಮಗನನ್ನು ಹತ್ಯೆಗೊಳಿಸಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಮುಖ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಬ್ಬ ಆರೋಪಿ ಆತ್ಮಹತ್ಯೆ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಸಮಯೋಚಿತ ರೀತಿ ಜವಾಬ್ದಾರಿ ವಹಿಸಿ ರಕ್ಷಿಸಿದ್ದಾರೆ.
ಕೊಲೆಗೀಡಾದವರು ಚಂದ್ರವ್ವ ಇಚೇರಿ (62) ಮತ್ತು ವಿಠ್ಠಲ ಇಚೇರಿ (42) ಎಂಬ ತಾಯಿ-ಮಗ ಜೋಡಿ. ಇಬ್ಬರನ್ನು ಭೀಕರವಾಗಿ ಕತ್ತು ಹಿಸುಕುವ ಮೂಲಕ ಹತ್ಯೆಗೈಯಲಾಗಿದೆ. ಈ ಕ್ರೂರ ಕೃತ್ಯಕ್ಕೆ ಸಂಬಂಧಿಸಿದಂತೆ ಸುರೇಶ್ ಸವದತ್ತಿ ಮತ್ತು ಶ್ರೀಶೈಲ ಹೊರಟ್ಟಿ ಎಂಬ ಇಬ್ಬರು ವಿರುದ್ಧ ಆರೋಪ ಕೇಳಿಬಂದಿದ್ದವು.
ಅಳಿಯನಾದ ಸುರೇಶ್ ಸವದತ್ತಿಗೆ ಚಂದ್ರವ್ವ ಅವರ ಆಸ್ತಿ ಮೇಲೆ ಆಸೆ ಇದ್ದುದರಿಂದಲೇ ಈ ದ್ವಿತಯ ಹತ್ಯೆ ನಡೆದಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. ತನ್ನ ಸ್ನೇಹಿತ ಶ್ರೀಶೈಲನ ಸಹಾಯದಿಂದ ಈ ಕೃತ್ಯ ನೆರವೇರಿಸಿದ್ದ ಎನ್ನಲಾಗಿದೆ.
ಪೊಲೀಸರು ತನಿಖೆ ಆಳವಾಗಿಸುತ್ತಿದ್ದಂತೆಯೇ, ಆರೋಪಿ ಸುರೇಶ್ ಶೇಗುಣಸಿ ಗ್ರಾಮದ ಹೊರವಲಯದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಮೂಲಕ ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳಲು ಜೀವವನ್ನೇ ತ್ಯಜಿಸಿದ್ದಾನೆ.
ಇನ್ನೊಂದು ಕಡೆ, ಆರೋಪಿ ಶ್ರೀಶೈಲ ಹೊರಟ್ಟಿ ಕೂಡ ಬಂಧನದ ಭೀತಿಯಲ್ಲಿ ತನ್ನ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸಮಯಕ್ಕಿಂತ ಮೊದಲು ಸ್ಥಳಕ್ಕೆ ಧಾವಿಸಿದ ಪೊಲೀಸರು ಅವನನ್ನು ಜೀವಂತವಾಗಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ದ್ವಿತಯ ಕೊಲೆ ಪ್ರಕರಣದಿಂದ ನಂದಗಾಂವ ಗ್ರಾಮದಲ್ಲಿ ಭಾರೀ ಭೀತಿಯ ವಾತಾವರಣವಿದ್ದು, ಪೊಲೀಸರು ಮುಂದಿನ ಕ್ರಮವಾಗಿ ಘಟನೆ ಕುರಿತ ತನಿಖೆಯನ್ನು ಗಂಭೀರವಾಗಿ ಮುಂದುವರೆಸಿದ್ದಾರೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…