ಚಿತ್ರದುರ್ಗ: ನಟ ದರ್ಶನ್ ಮತ್ತು ಅವರ ತಂಡದವರಿಂದ ಭೀಕರವಾಗಿ ಹತ್ಯೆಯಾದ ರೇಣುಕಾಸ್ವಾಮಿಯ ಕುಟುಂಬದಲ್ಲಿ ಇಂದು ವಿಶಿಷ್ಟ ಸಂಭ್ರಮದ ಜೊತೆಗೆ ಭಾವುಕರ ಕ್ಷಣಗಳು ಮನೆಮಾಡಿದವು. ಮೃತ ರೇಣುಕಾಸ್ವಾಮಿಯ ಪುತ್ರನ ನಾಮಕರಣ ಸಂಭ್ರಮದ ಜೊತೆಗೆ ಕುಟುಂಬದ ನೋವನ್ನು ಮತ್ತೊಮ್ಮೆ ಎಳೆದು ತಂದಿತು.
ಪುನರ್ಜನ್ಮದ ಭಾವನೆ
ಚಿತ್ರದುರ್ಗದ ವಿಆರ್ಎಸ್ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ಶಾಸ್ತ್ರೋಕ್ತ ರೀತಿಯಲ್ಲಿ ಇಂದು ನಾಮಕರಣ ವಿಧಿ ನೆರವೇರಿತು. ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ ಸಂಪ್ರದಾಯದಂತೆ ಮೊಮ್ಮಗನಿಗೆ ಶಶಿಧರ ಎಂದು ಹೆಸರಿಡಲಾಯಿತು.
ನಾಮಕರಣದ ಬಳಿಕ, ಮೃತ ರೇಣುಕಾಸ್ವಾಮಿಯ ತಂದೆ ಶಿವನಗೌಡ ಮಾತನಾಡುತ್ತ, “ನಮ್ಮ ಕುಟುಂಬಕ್ಕೆ ನಡೆದ ಅನ್ಯಾಯದ ನಿವಾರಣೆಗೆ ಸರ್ಕಾರ ಸ್ಪಂದಿಸಬೇಕು. ನನ್ನ ಸೊಸೆಗೆ ನೌಕರಿ ದೊರಕಿಸಿಕೊಡಬೇಕು,” ಎಂದು ಕಣ್ಣೀರಿಟ್ಟು ಬೇಡಿಕೆ ಮುಂದಿಟ್ಟರು.
ಈ ಸಂದರ್ಭದಲ್ಲಿ, ಮಗನನ್ನು ಕಳೆದುಕೊಂಡ ತಾಯಿ ರತ್ನಪ್ರಭ ಭಾವುಕರಾಗಿ, “ಮಗನೇ ಮತ್ತೆ ಹುಟ್ಟಿ ಬಂದಂತೆ ಅನಿಸುತ್ತಿದೆ,” ಎಂದು ಗೋಡೆಗೆ ಒರಗಿ ಕಣ್ಣೀರು ಹಾಕಿದರು.
ಸಾಂತ್ವನದ ಜೊತೆಗೆ ನ್ಯಾಯದ ನಿರೀಕ್ಷೆ
ಕುಟುಂಬದ ಸದಸ್ಯರು, ಬಂಧು-ಮಿತ್ರರು, ಹಿತೈಷಿಗಳು ನಾಮಕರಣ ಸಮಾರಂಭದಲ್ಲಿ ಭಾಗಿಯಾಗಿದ್ದು, ಮೃತ ರೇಣುಕಾಸ್ವಾಮಿಯ ನೆನಪನ್ನು ಮುರಿಯಲಾಗದು ಎಂಬ ಭಾವನೆ ವ್ಯಕ್ತಪಡಿಸಿದರು. ಕುಟುಂಬ ನ್ಯಾಯಕ್ಕಾಗಿ ಕಾಯುತ್ತಲೇ, ಮಗನ ಪುನರ್ಜನ್ಮದ ಭಾವನೆಗೆ ಒಲಿದು ಸಂತಸವನ್ನು ಹೊರಹಾಕಿತು.
ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…
ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…
ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…
ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…
ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…
ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…