Latest

ಮುಸ್ಲಿಂ ಕಂಡಕ್ಟರ್ ನ ಟೋಪಿ ತೆಗೆಸಿದ ಮಹಿಳೆ; ವೈರಲ್ ಆಯ್ತು ವಿಡಿಯೋ!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ಸಿನಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ. ಮುಸ್ಲಿಂ ಕಂಡಕ್ಟರ್‌ ತಲೆ ಮೇಲಿನ ಕ್ಯಾಪ್‌ ತೆಗೆಯುವಂತೆ ಮಹಿಳಾ ಪ್ರಯಾಣಿಕರೊಬ್ಬರು ಬಲವಂತವಾಗಿ ಒತ್ತಾಯಿಸಿದ ಪ್ರಕರಣ ನಡೆದಿದೆ. ಇದು ವಿಡಿಯೊದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.
ಈ ಬೆಳವಣಗೆ ನಡುವೆಯೇ, ಘಟನೆಯ ಬಗೆಗಿನ ವೈರಲ್ ಟ್ವೀಟ್‌ಗೆ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ಅಪರಿಚಿತ ಮಹಿಳೆಯು ಒಂದೂವರೆ ನಿಮಿಷದ ಕ್ಲಿಪ್ ಶೂಟ್ ಮಾಡಿದ್ದಾರೆ. ಬಿಎಂಟಿಸಿ ಬಸ್‌ನಲ್ಲಿರುವ ಕಂಡಕ್ಟರ್‌ ಸಮವಸ್ತ್ರದಲ್ಲಿದ್ದಾರೆ. ಸಮವಸ್ತ್ರದಲ್ಲಿ ಇರುವವರು ಟೊಪ್ಪಿಯನ್ನು (ಮುಸ್ಲಿಮರು ತಲೆಗೆ ಹಾಕಿಕೊಳ್ಳುವ ಟೊಪ್ಪಿ) ಧರಿಸಬಹುದೇ ಎಂದು ಕಂಡಕ್ಟರ್‌ಗೆ ಮಹಿಳೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಡಕ್ಟರ್‌ ಬಹುಶಃ ಕ್ಯಾಪ್‌ ಅನ್ನು ಧರಿಸಬಹುದೆಂದು ಕಂಡಕ್ಟರ್ ಉತ್ತರಿಸಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ‘ನೀವು ಮನೆಯಲ್ಲಿ ನಿಮ್ಮ ಧರ್ಮವನ್ನು ಆಚರಿಸಿ. ಮಸೀದಿಯೊಳಗೆ ಟೊಪ್ಪಿಯನ್ನು ಹಾಕಿಕೊಳ್ಳಿ. ಸಮವಸ್ತ್ರದಲ್ಲಿರುವಾಗ ನೀವು ಟೊಪ್ಪಿಯನ್ನು ಧರಿಸಬಾರದು’ ಎಂದು ಮಹಿಳೆ ಹೇಳುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕಂಡಕ್ಟರ್, ‘ನಾನು ಅನೇಕ ವರ್ಷಗಳಿಂದ ಟೊಪ್ಪಿಯನ್ನು ಧರಿಸುತ್ತಿದ್ದೇನೆ ಮೇಡಮ್’ ಎಂದು ಹೇಳುತ್ತಾರೆ. ಸಮವಸ್ತ್ರ ತೊಟ್ಟಕೊಂಡಿರುವಾಗ ಇದನ್ನು ಧರಿಸಬಹುದೇ ಎಂದು ಮಹಿಳೆ ಕೇಳುತ್ತಾರೆ. ಕ್ಯಾಪ್‌ ಅನ್ನು ತೆಗೆಯುವಂತೆ ಮಹಿಳೆ ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕಂಡಕ್ಟರ್‌ ಈ ವರೆಗೆ ಯಾರೂ ಆಕ್ಷೇಪಿಸಿಲ್ಲ. ಆ ಕಾರಣ ನಾನು ಕ್ಯಾಪ್‌ ಅನ್ನು ಧರಿಸುತ್ತಿದ್ದೇನೆ ಎಂದು ಕಂಡಕ್ಟರ್‌ ಹೇಳುತ್ತಾರೆ. ನಾನು ಈ ಬಗ್ಗೆ ನಮ್ಮ ಅಧಿಕಾರಿಗೆ ತಿಳಿಸುತ್ತೇನೆ. ಅವರು ಹೇಳಿದಂತೆ ಕೇಳುತ್ತೇನೆ ಎಂದು ಕಂಡಕ್ಟರ್‌ ಹೇಳುತ್ತಾರೆ.
ಕಂಡಕ್ಟರ್ ತನ್ನ ಹಸಿರು ಕ್ಯಾಪ್ ಅನ್ನು ತೆಗೆದುಹಾಕಬೇಕು ಎಂದು ಮಹಿಳೆ ಮತ್ತೆ ಒತ್ತಾಯಿಸುತ್ತಾರೆ. ‘ನೀವು ಅದನ್ನು ಮಸೀದಿ ಅಥವಾ ನಿಮ್ಮ ಮನೆಯಲ್ಲಿ ಧರಿಸಿದರೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ, ಕೆಲಸದಲ್ಲಿರುವು ಹಾಕಿಕೊಳ್ಳಬಾರದು. ಅದನ್ನು ತೆಗೆಯಿರಿ’ ಎಂದು ಮಹಿಳೆ ಒತ್ತಾಯಿಸುತ್ತಾರೆ. ಆ ನಂತರ ಕಂಡಕ್ಟರ್ ಕ್ಯಾಪ್ ಅನ್ನು ತಲೆಯ ಮೇಲಿಂದ ತೆಗೆಯುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಭ್ರಷ್ಟರ ಬೇಟೆ

Recent Posts

ಮೈಸೂರು ರಾಜೀವ್ ನಗರದಲ್ಲಿ ಕುಟುಂಬ ಕಲಹ ತೀವ್ರಗೆಡೆದು ಯುವಕನಿಗೆ ಚಾಕು ಇರಿತ: ಆರೋಪಿ ಅಫ್ರೀದಿ ಬಂಧನ

ಮೈಸೂರು: ಕೌಟುಂಬಿಕ ಕಲಹದ ರೂಪಾಂತರವಾಗಿ ಜಗಳ ತೀವ್ರತೆ ಪಡೆದು ಕೊಲೆಯಾದ ಹೃದಯವಿದ್ರಾವಕ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ…

15 hours ago

ಖಾಲಿ ಮನೆ ಟಾರ್ಗೆಟ್: ಪೆಪ್ಸಿ ರಘು ಗ್ಯಾಂಗದಿಂದ 24 ಲಕ್ಷ ಕಳ್ಳತನ, ಮೂವರು ಅರೆಸ್ಟ್

ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ…

15 hours ago

ಲಂಚ ಸ್ವೀಕರಿಸುತ್ತಿದ್ದ ಪಂ.ರಾಜ್ ಇಂಜಿನಿಯರಿಂಗ್ ಅಧಿಕಾರಿ ಬಂಧನ: ಲೋಕಾಯುಕ್ತದ ದಾಳಿ ಸೊರಬದಲ್ಲಿ

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನಲ್ಲಿ ಭ್ರಷ್ಟಾಚಾರದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸೆಕ್ಷನ್ ಅಧಿಕಾರಿ…

16 hours ago

ಚನ್ನಪೇಟೆಯಲ್ಲಿ ಹಾವು ಕಚ್ಚಿದ ವ್ಯಕ್ತಿ ಸಾವು: ಮೂತ್ರ ವಿಸರ್ಜನೆ ವೇಳೆ ದುರ್ಘಟನೆ

ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೊರಟಿದ್ದ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ದುರ್ಘಟನೆ ಹುಬ್ಬಳ್ಳಿಯ ಚನ್ನಪೇಟೆ…

16 hours ago

ಹಾನಗಲ್ ಸಿಪಿಐ ಅಮಾನತುa: ಪ್ರಭಾವಿಯ ಲೋಕೇಷನ್ ಬಯಲು ಮಾಡಿದ್ದ ಆರೋಪ

ಹಾವೇರಿ: ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್‌.ಎಚ್. ಅವರನ್ನು ಸೇವೆಯಿಂದ ಅಮಾನತುಗೊಳಿಸುವ ಕ್ರಮ ಜರುಗಿದ್ದು, ಇದಕ್ಕೆ ಕಾರಣವಾಗಿರುವುದು ಸಮುದಾಯದ…

16 hours ago

ಮದ್ಯಪಾನ ಮಾಡಿ ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ಚಾಲಕರ ವಿರುದ್ಧ ಕ್ರಮ: ಬೆಂಗಳೂರು ಸಂಚಾರ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಮಕ್ಕಳ ಸುರಕ್ಷತೆಗಾಗಿ ಸಂಚಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಮದ್ಯಪಾನ ಮಾಡಿಕೊಂಡು…

1 day ago