Latest

ಪತಿಯನ್ನು ಹತ್ಯೆ ಮಾಡಿ ಡ್ರಂಗೆ ತುಂಬಿದ ಮುಸ್ಕಾನ್ ಈಗ ಗರ್ಭಿಣಿ!

ಗಾಜಿಯಾಬಾದ್‌ನ ಜನಮನ ತಲ್ಲಣಗೊಳಿಸಿರುವ ಸೌರಭ್ ರಾಜಪೂತ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪತಿಯನ್ನು ಕ್ರೂರವಾಗಿ ಕೊಂದ ಬಳಿಕ, ಡ್ರಮ್‌ನಲ್ಲಿ ಶವವನ್ನು ಅಡಗಿಸಿದ ಆರೋಪದ ಮೇಲೆ ಜೈಲಿನಲ್ಲಿ ಬಂಧನದಲ್ಲಿರುವ ಮುಸ್ಕಾನ್ ರಸ್ತೋಗಿ ಇದೀಗ ಗರ್ಭಿಣಿಯಾಗಿರುವುದು ದೃಢಪಟ್ಟಿದೆ.

27 ವರ್ಷದ ಮುಸ್ಕಾನ್ ತೀವ್ರ ಹೊಟ್ಟೆ ನೋವು ಕಾಣಿಸಿದ್ದ ಕಾರಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಅದರಲ್ಲಿ ಆಕೆ ಗರ್ಭಿಣಿಯಾಗಿರುವ ಸಂಗತಿ ಬಹಿರಂಗವಾಗಿದೆ. ಈಗ ಎಲ್ಲರಲ್ಲೂ ಒಂದು ದೊಡ್ಡ ಪ್ರಶ್ನೆ ಉದ್ಭವವಾಗಿದೆ—ಈ ಗರ್ಭದಲ್ಲಿರುವ ಮಗು ಸೌರಭ್ ರಾಜಪೂತ್ ಅವರದುನಾ? ಅಥವಾ ಮುಸ್ಕಾನ್‌ನ ಪ್ರಿಯಕರ ಶಾಹಿಲ್‌ನದುನಾ?

ಹತ್ಯೆ ನಡೆದ ನಂತರ, ಮುಸ್ಕಾನ್ ಪ್ರಿಯಕರ ಶಾಹಿಲ್ ಜೊತೆಗೆ ಹಿಮಾಚಲ ಪ್ರದೇಶಕ್ಕೆ ಹೋಗಿದ್ದಾಳೆ. ಅಲ್ಲಿ ಅವರು ಸುಮಾರು 11 ದಿನಗಳ ಕಾಲ ಒಂದೇ ಮನೆನಲ್ಲಿ ವಾಸಿಸಿದ್ದರ ಜೊತೆಗೆ, ಸ್ಥಳೀಯ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಈ ವಿಚಾರದಿಂದಾಗಿ ಪೊಲೀಸರು ಇದೀಗ ಮುಸ್ಕಾನ್‌ಗಿಂತಲೂ ಹೆಚ್ಚಿನ ಮೆರವಣಿಗೆ ನಡೆಸುತ್ತಿದ್ದಾರೆ. ವೈದ್ಯಕೀಯವಾಗಿ ಮಗುವಿನ ಪಿತೃತ್ವದ ಬಗ್ಗೆ ಸ್ಪಷ್ಟತೆ ಮೂಡಿಸಲು ಡಿಎನ್‌ಎ ಪರೀಕ್ಷೆ ನಡೆಸಲಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸೌರಭ್ ರಾಜಪೂತ್‌ರನ್ನು ಹತ್ಯೆ ಮಾಡಿ ಶವವನ್ನು ಪ್ಲಾಸ್ಟಿಕ್ ಡ್ರಮ್‌ವೊಂದರಲ್ಲಿ ಹಾಕಿ ಮನೆಯೊಳಗೆ ಅಡಗಿಸಿದ್ದ ಆರೋಪದ ಮೇಲೆ ಮುಸ್ಕಾನ್ ಹಾಗೂ ಶಾಹಿಲ್ ಬಂಧಿತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯಸಂಗ್ರಹದಲ್ಲಿ ತೊಡಗಿದ್ದಾರೆ.

ಈ ಪತ್ತೆಯ ಬಳಿಕ ಪ್ರಕರಣ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ನಿಖರವಾದ ಪಿತೃತ್ವ ವರದಿ ನ್ಯಾಯಾಂಗ ಕ್ರಮದ ಮೇಲೆ ಮಹತ್ವಪೂರ್ಣ ಪರಿಣಾಮ ಬೀರಲಿದೆ ಎನ್ನುವುದು ಸ್ಪಷ್ಟ.

nazeer ahamad

Recent Posts

ಲಿವ್-ಇನ್ ಸಂಬಂಧದ ದುರಂತ ಅಂತ್ಯ: ಲವ್ ಜಿಹಾದ್ ಗೆ ಮತ್ತೊಂದು ಬಲಿ, ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣ ಚರ್ಚೆಗೆ ಗ್ರಾಸ

ಗುಜರಾತಿನ ರಾಜ್‌ಕೋಟ್‌ನಲ್ಲಿ ಯುವತಿ ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಂದಿನಿ,…

6 hours ago

ಸದಾ ಶೀಲ ಶಂಕಿಸುತ್ತಿದ್ದವನು ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದ..!

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಪತ್ನಿಯ ಶೀಲವನ್ನು ಅನುಮಾನಿಸುತ್ತಿದ್ದ ಪತಿಯೊಬ್ಬ ಕೊನೆಗೆ ಆಕೆಯನ್ನು…

6 hours ago

ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದ ನಿವೃತ್ತ ಸೈನಿಕ; ₹4 ಕೋಟಿ ಆಸ್ತಿಯನ್ನು ತಿರುಪತಿ ದೇವರಿಗೆ ದಾನ ಮಾಡಿದ ಹೃದಯವಿದ್ರಾವಕ ನಿರ್ಧಾರ

ದೇಶದ ಗಡಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರೊಬ್ಬರು, ಸ್ವಂತ ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದು ತಮ್ಮ ಸುಮಾರು ₹4…

6 hours ago

ಬೇರೊಬ್ಬನೊಂದಿಗೆ ಓಡಿ ಹೋದ ತಾಯಿ: ಹಸಿದ ಕಂದಮ್ಮನನ್ನು ಮಡಿಲಲ್ಲಿ ಹಿಡಿದು ಮೆಡಿಕಲ್ಗೆ ಬಂದು ಕಣ್ಣೀರಿಟ್ಟ ತಂದೆ.

ಹಸಿದ ಕಂದಮ್ಮನ ಅಳುವನ್ನು ಸಮಾಧಾನಪಡಿಸಲಾಗದೆ ಅಸಹಾಯಕನಾಗಿ ನಿಂತ ತಂದೆಯೊಬ್ಬನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರ ಮನಕಲಕಿದೆ. ಪತ್ನಿ ಮನೆಯನ್ನು ತೊರೆದು…

6 hours ago

ಕುಟುಂಬದ ಮೂವರ ಹತ್ಯೆ ಪ್ರಕರಣ: ಹೆತ್ತವರನ್ನು ಕೊಂದ ಬಳಿಕ ಪ್ರಿಯಕರನೊಂದಿಗೆ ಹೋಗಿ ಸಿಗರೇಟ್ ಸೇದಿದ್ದ ಸೈಕೋ ಮಗಳು..!

ತಂದೆ, ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಪ್ರಕರಣದಲ್ಲಿ ದಿನದಿಂದ…

6 hours ago

ನಾಲ್ಕು ತಿಂಗಳ ಗರ್ಭಿಣಿ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ: ಕಲಬುರಗಿಯಲ್ಲಿ ಮನಕಲುಕುವ ಘಟನೆ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಒಂದೂವರೆ…

6 hours ago