Latest

ಮುಂಡಗೋಡು ತಾಲೂಕಿನ ಚೆಸ್ ಆಟದ ಶಕ್ತಿ ಕೇಂದ್ರ ಸುಳ್ಳಳ್ಳಿ..!

ಮುಂಡಗೋಡ: ತಾಲೂಕಿನ ಸುಳ್ಳಳ್ಳಿ ಗ್ರಾಮದಲ್ಲಿ ಚೆಸ್ ಆಟಕ್ಕೆ ಭದ್ರ ಬುನಾದಿ ಸಿಕ್ಕಿದೆ ಎಂದು ಹೇಳಬಹುದು ಹಾಗಾಗಿ ಪ್ರತಿವರ್ಷ ರಾಜ್ಯಮಟ್ಟದವರೆಗೂ ಎರಡ್ಮೂರು ವಿದ್ಯಾರ್ಥಿಗಳು ಪ್ರತಿನಿಧಿಸುತ್ತಾರೆ.

2022 ಮತ್ತು 23ನೇ ಸಾಲಿನಲ್ಲಿ ಬೇರೆ ಬೇರೆ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಳ್ಳಳ್ಳಿ ಗ್ರಾಮದ ಒಟ್ಟು 15 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ಇದೆ ಸೆಪ್ಟೆಂಬರ್ 8ರಂದು ಪಾಳಾ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳಳ್ಳಿಯ 7 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.

14 ವರ್ಷದೊಳಗಿನವರ ಬಾಲಕರ ವಿಭಾಗ
1st ವಿನಾಯಕ ಬಸವಣ್ಣಿ ಪಾಟೀಲ
2nd ವಿಕಾಸ ಕವಲಗಿ
4th ಮಹಮ್ಮದ್ ಸಲೀಂ ಮಾಬುಸಾಬ ಸುಳ್ಳಳ್ಳಿ

14 ವರ್ಷದೊಳಗಿನವರ ಬಾಲಕಿಯರ ವಿಭಾಗ
1st ಭವ್ಯ ಲೋಕಪ್ಪ ಅಮ್ಮಿನಬಾವಿ
2nd ರಿಜಾಅಂಜುಮ್ ರಿಯಾಜಸಾಬಸಾಬ ಹನಕನಳ್ಳಿ
3rd ಸುನಿತಾ ವಿಠ್ಠು ಯಮಕರ
4th ಅರ್ಪಿತಾ ಚಂದ್ರಕಾಂತ ಹುಡೇಲಕೊಪ್ಪ

ಸರಕಾರಿ ಅಂದಲಗಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಳ್ಳಳ್ಳಿ ಗ್ರಾಮದ ವಿದ್ಯಾರ್ಥಿಗಳು
ಬಾಲಕರ ವಿಭಾಗ
2nd ಲೋಕೇಶ್ ಗೌಡ
3rd ಇಸ್ಮಾಯಿಲ್ ಮಹಮ್ಮದ್ಅಲಿ ಮಮ್ದುನವರ
4th ಲಕ್ಕು ವಿಠ್ಠು ಯಮಕರ

ಬಾಲಕಿಯರ ವಿಭಾಗ
1st ಆಫ್ರೀನ್ ಮಕ್ಬುಲ್ ಮಮ್ದುನವರ
2nd ನಿಖಿತಾ ಬಸವಣ್ಣಿ ಹೆಗ್ಗಾದಿ
3rd ಸುವರ್ಣ ಈಶ್ವರ ಮಿರಾಶಿ

ಕರಗಿನಕೊಪ್ಪದ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ
5th ಮಹೇಂದ್ರ ಗೌಡ

ಪಿಯುಸಿ ವಿಭಾಗದಲ್ಲಿ ಮುಂಡಗೋಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ
2nd ನಾಗರಾಜ ಮಾದರ

ಹೀಗೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ 7 ವಿದ್ಯಾರ್ಥಿಗಳು
ಪ್ರೌಢಶಾಲಾ ವಿಭಾಗದಲ್ಲಿ ಏಳು ವಿದ್ಯಾರ್ಥಿಗಳು
ಹಾಗೂ ಪಿಯುಸಿ ವಿಭಾಗದಲ್ಲಿ ಒಬ್ಬ ವಿದ್ಯಾರ್ಥಿ
ಒಟ್ಟು 15 ವಿದ್ಯಾರ್ಥಿಗಳು ಈ ವರ್ಷ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರತಿ ವರ್ಷ ಚೆಸ್ ಆಟದಲ್ಲಿ ಈ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸುಳ್ಳಳ್ಳಿಯ ಎಸ್ ಡಿಎಂ ಸಿ ಸಮಿತಿಯವರು, ಶಾಲೆಯ ಮುಖ್ಯ ಶಿಕ್ಷಕರು,ಶಿಕ್ಷಕ ಬಳಗದವರು ಗ್ರಾಮಸ್ಥರು ಹಾಗೂ ಅಂದಲಗಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದದವರು ಹೃದಯಪೂರ್ವಕವಾಗಿ ಅಭಿನಂದಿಸಿದ್ದಾರೆ ಹಾಗೆಯೇ ಜಿಲ್ಲಾಮಟ್ಟದಲ್ಲೂ ಉತ್ತಮ ಸಾಧನೆಗೈಲಿ ಎಂದು ಸರ್ವರು ಆಶಿಸುತ್ತಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳಿಗೆ ಚೆಸ್ ಆಟದ ಬುನಾದಿ ಹಂತದ ನಿಯಮಗಳು ಹಾಗೂ ಮಾರ್ಗದರ್ಶನ ನೀಡಿದವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಳಗದವರು. ಸುಳ್ಳಳ್ಳಿ ಶಾಲೆಯಲ್ಲಿ ಊಟದ ವಿರಾಮದ ಸಮಯದಲ್ಲಿ ಹಾಗೂ ಸಂಜೆ ಶಾಲಾ ಅವಧಿಯ ನಂತರದಲ್ಲಿ ಮಕ್ಕಳಿಗೆ ಚೆಸ್ ಆಟದ ಅಭ್ಯಾಸ ಮಾಡಿಸಲಾಗುತ್ತದೆ.
ವರದಿ: ಮಂಜುನಾಥ ಹರಿಜನ

ಭ್ರಷ್ಟರ ಬೇಟೆ

Recent Posts

ಭ್ರೂಣಲಿಂಗ ಪತ್ತೆ–ಅಕ್ರಮ ಸ್ಕ್ಯಾನಿಂಗ್ ದಂಧೆ ಭಂಡಾಫೋಡ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಬಂಧನ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಅಕ್ರಮ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಬಂಧಿಸಿರುವ ಘಟನೆ…

9 hours ago

₹15 ಲಕ್ಷ ಲಂಚ ಸ್ವೀಕರಿಸುವ ವೇಳೆ ಕೆಎಎಸ್ ಅಧಿಕಾರಿ ಬಲೆಗೆ; ಚಾಲಕನೊಂದಿಗೆ ಬಂಧನ

ಭೂಸ್ವಾಧೀನ ಸಂಬಂಧಿತ ಬಾಕಿ ಕಂದಾಯ ಪ್ರಕರಣವನ್ನು ಪರಿಹರಿಸಲು ಲಂಚ ಪಡೆಯುತ್ತಿದ್ದ ವೇಳೆ ಕೆಎಎಸ್ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಘಟನೆ…

9 hours ago

ಪತ್ನಿಯ ದ್ರೋಹ ಗೊತ್ತಿದ್ದರೂ ಮಕ್ಕಳಿಗಾಗಿ ಸಹನೆ; ವಿಚ್ಛೇದನವೇ? ಹೊಸ ಬದುಕೇ? ಪತಿಯ ಪ್ರಶ್ನೆ ವೈರಲ್

ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನ ಸಣ್ಣಪುಟ್ಟ ವಿಚಾರಗಳಿಗೂ ಕುಸಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಹೊಂದಾಣಿಕೆಯ ಕೊರತೆ, ಅಕ್ರಮ ಸಂಬಂಧಗಳು ಸೇರಿದಂತೆ ಹಲವು…

11 hours ago

31 ವರ್ಷ ಜೈಲು ಜೀವನದ ನಂತರ ಹೊಸ ಹಾದಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ದೋಷಿ ಪೆರಾರಿವಾಲನ್ ಇದೀಗ ವಕೀಲ

ಮಾಜಿ ಪ್ರಧಾನಿ Rajiv Gandhi ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ ಎ.ಜಿ. ಪೆರಾರಿವಾಲನ್ ಇದೀಗ ವಕೀಲರಾಗಿರುವುದು ಗಮನಸೆಳೆಯುವ ಬೆಳವಣಿಗೆಯಾಗಿದೆ. 2022ರಲ್ಲಿ…

11 hours ago

ಪತಿಯ ಅನೈತಿಕ ಸಂಬಂಧ, ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ; ಬಿಜೆಪಿ ಮುಖಂಡ ಬಂಧನ

ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ದುರಂತ ಘಟನೆ ಸಂಭವಿಸಿದೆ. ಪತಿಯ ಅನೈತಿಕ ಸಂಬಂಧ ಹಾಗೂ ನಿರಂತರ ದೈಹಿಕ-ಮಾನಸಿಕ…

12 hours ago

ಮದುವೆ ಹೆಸರಿನಲ್ಲಿ ₹10 ಕೋಟಿ ವಂಚನೆ ಆರೋಪ: ಬಿಗ್‌ಬಾಸ್ ಖ್ಯಾತಿಯ ಆಶು ರೆಡ್ಡಿ ವಿರುದ್ಧ ಪ್ರಕರಣ

ಹೈದರಾಬಾದ್: ಬಣ್ಣದ ಲೋಕದಲ್ಲಿ ಮತ್ತೆ ವಂಚನೆ ಆರೋಪ ಕೇಳಿಬಂದಿದ್ದು, ತೆಲುಗು ಬಿಗ್‌ಬಾಸ್ ಮೂಲಕ ಜನಪ್ರಿಯತೆ ಪಡೆದ ನಟಿ ಆಶು ರೆಡ್ಡಿ…

1 day ago