Latest

ಮುಂಡಗೋಡಕ್ಕೆ ಜಿಲ್ಲಾಧಿಕಾರಿ ಭೇಟಿ..!

ಮುಂಡಗೋಡ ಪಟ್ಟಣಕ್ಕೆ ಹಾಗೂ ಟಿಬೇಟಿಯನ್ ಕಾಲೋನಿಗೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಇಂದು ಭೇಟಿ ನೀಡಿ ಹಲವಾರು ವಿಷಯಗಳ ಕುರಿತು ಚರ್ಚಿಸಿದರು.
ಮುಂಡಗೋಡದ ಟಿಬೇಟಿಯನ್ ಕಾಲೋನಿ, ಗಣೇಶ ಚತುರ್ಥಿ ಅಂಗವಾಗಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸ್ಥಳಗಳಿಗೆ, ಪಟ್ಟಣದ ಹೊರವಲಯದಲ್ಲಿರುವ ಅಮ್ಮಾಜಿ ಕೆರೆ, ಹಾಗೂ ಇತ್ತೀಚಿನ ದಿನಗಳಲ್ಲಿ ಭಾರಿ ಮಳೆಯಿಂದಾಗಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿರುವ ಹತ್ತಿರ ಬಂಕಾಪು ರಸ್ತೆಗೆ ( ಹೆಗಡೆ ದವಾಖಾನೆ) ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಸ್ಯೆಗಳ ಪರಿಹಾರದ ಕುರಿತು ಚರ್ಚಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಬಂಕಾಪುರ ರಸ್ತೆಯಲ್ಲಿ ಭಾರಿ ಮಳೆಯಿಂದ ಆಗುತ್ತಿರುವ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳಿಗೆ ನಗರೋತ್ಥಾನ ಯೋಜನೆಯಲ್ಲಿ ಶಾಶ್ವತ ಪರಿಹಾರವನ್ನು ಕಲ್ಪಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತಿಯವರು ಮಾಡಲಿದ್ದಾರೆ ಎಂದು ತಿಳಿಸಿದರು.

ಅತೀ ಹೆಚ್ಚು ಮಳೆಯಿಂದ ಇವರೆಗೆ ತಾಲೂಕಿನಲ್ಲಿ 39 ಮನೆಗಳು ತೀವ್ರ ಹಾನಿಗೆ ಒಳಪಟ್ಟಿವೆ ಇವುಗಳು 5 ಲಕ್ಷ ರೂಪಾಯಿಯ ಪರಿಹಾರದ ಅಡಿಯಲ್ಲಿ ಬರುತ್ತವೆ ಇವುಗಳಿಗೆ ಮೊದಲ ಹಂತದಲ್ಲಿ 95 ಸಾವಿರ ರೂಪಾಯಿಗಳನ್ನು ಮೊದಲ ಹಂತವಾಗಿ 48 ಗಂಟೆಯಿಂದ 72 ಗಂಟೆಗಳ ಒಳಗಾಗಿ ನೀಡುವಂತೆ ಸೂಚನೆ ನೀಡಲಾಗಿದೆ. ಉಳಿದ ಹಣವನ್ನು ಹಂತಹಂತವಾಗಿ ಮನೆ ನಿರ್ಮಿಸುವ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ನಂತರ 99 ಮನೆಗಳು (ಪ್ರಕರಣಗಳು) ಸಿ ಕೆಟಗರಿಯಲ್ಲಿ ಬರುತ್ತವೆ ಇವುಗಳಿಗೆ 50 ಸಾವಿರ ರೂಪಾಯಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎಸ್. ಪಿ ಸುಮನ್ ಪನ್ನೇಕರ್, ಶಿರಸಿ ವಿಭಾಗದ ಡಿಎಸ್ಪಿ ರವಿ ನಾಯ್ಕ ,ಸಿ.ಪಿ.ಐ ಸಿದ್ದಪ್ಪ ಸಿಮಾನಿ, ತಹಸಿಲ್ದಾರ್ ಶಂಕರ್ ಗೌಡಿ,ಪಟ್ಟಣ ಪಂಚಾಯತಿ ಸದಸ್ಯರಾದ ಪಣಿರಾಜ ಹದಳಗಿ,ಪ್ರಮುಖರಾದ ಸಿದ್ದಪ್ಪ ಹಡಪದ, ಚಿದಾನಂದ ಹರಿಜನ, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು, ಇತರರು ಹಾಜರಿದ್ದರು.
ವರದಿ :ಮಂಜುನಾಥ ಹರಿಜನ

ಭ್ರಷ್ಟರ ಬೇಟೆ

Recent Posts

ಮದುವೆ ಹೆಸರಿನಲ್ಲಿ ₹10 ಕೋಟಿ ವಂಚನೆ ಆರೋಪ: ಬಿಗ್‌ಬಾಸ್ ಖ್ಯಾತಿಯ ಆಶು ರೆಡ್ಡಿ ವಿರುದ್ಧ ಪ್ರಕರಣ

ಹೈದರಾಬಾದ್: ಬಣ್ಣದ ಲೋಕದಲ್ಲಿ ಮತ್ತೆ ವಂಚನೆ ಆರೋಪ ಕೇಳಿಬಂದಿದ್ದು, ತೆಲುಗು ಬಿಗ್‌ಬಾಸ್ ಮೂಲಕ ಜನಪ್ರಿಯತೆ ಪಡೆದ ನಟಿ ಆಶು ರೆಡ್ಡಿ…

12 hours ago

ಧಾರವಾಡ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪೊಲೀಸರಿಂದ ‘ಹಣದ ಬೇಡಿಕೆ, ಕಿರುಕುಳ’ ಆರೋಪ..!

ಧಾರವಾಡ: 20 ವರ್ಷದ ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಪೊಲೀಸರ ವಿರುದ್ಧ…

13 hours ago

ಶೇಕ್‌ಪೇಟ್‌ನಲ್ಲಿ ಪಶು ಆಸ್ಪತ್ರೆಯ ಹೆಸರಿನಲ್ಲಿ ಕ್ರೂರ ದಂಧೆ: ಬೀದಿ ನಾಯಿಗಳ ರಕ್ತ ಮಾರಾಟ, ಭಾರೀ ಹಣ ವಸೂಲಿ!

ಶೇಕ್‌ಪೇಟ್: ಪಶುಗಳ ಚಿಕಿತ್ಸೆಯ ಹೆಸರಿನಲ್ಲಿ ನಡೆದಿದ್ದ ಅಮಾನವೀಯ ದಂಧೆಯೊಂದು ಬೆಳಕಿಗೆ ಬಂದು ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸಿದೆ. ಖಾಸಗಿ ಪಶು ವೈದ್ಯಕೀಯ…

13 hours ago

ಧಾರವಾಡದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ: ‘ಕೇಸ್ ಹಾಕುತ್ತೇವೆ’ ಎನ್ನುವ ಭಯದಿಂದ ಜೀವತ್ಯಾಗ? ಪೊಲೀಸರ ವಿರುದ್ಧ ಆರೋಪ

ಧಾರವಾಡ: ಗಾಂಜಾ ಪ್ರಕರಣದಲ್ಲಿ ಹೆಸರು ಸೇರಿಸಲಾಗುತ್ತದೆ ಎಂಬ ಭಯದಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ…

13 hours ago

ಕೋರಮಂಗಲದಲ್ಲಿ ಸಿಸಿಬಿ ದಾಳಿ: ಸಾರ್ವಜನಿಕವಾಗಿ ವೇಶ್ಯಾವಾಟಿಕೆ, ರಸ್ತೆಯಲ್ಲಿ ನಿಂತ ಪುರುಷರನ್ನು ಕರೆಯುತ್ತಿದ್ದ ಆರು ವಿದೇಶಿ ಮಹಿಳೆಯರು ವಶಕ್ಕೆ

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇರೆಗೆ ಆರು ವಿದೇಶಿ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ…

14 hours ago

ಕಾಂಗ್ರೆಸ್ಗೆ ಅಹಿಂದ ಎಚ್ಚರಿಕೆ: ‘2028ಕ್ಕೆ ಹೊಸ ಪಕ್ಷ’ ಬೆದರಿಕೆ, ದಲಿತ ಸಿಎಂ ಆಗ್ರಹ

ಬೆಂಗಳೂರು: ರಾಜ್ಯ ಕಾಂಗ್ರೆಸ್ನೊಳಗಿನ ನಾಯಕತ್ವದ ಗೊಂದಲ ಮತ್ತು ಅಸಮಾಧಾನದ ನಡುವೆಯೇ ಅಹಿಂದ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಕ್ಷವು ಅಹಿಂದ…

14 hours ago