Categories: CrimeLatest

ಅತ್ತಿಗೆ ಮೈದುನನ ಲವ್ ಟ್ರ್ಯಾಕ್ ಗೆ ಅಡ್ಡಿಯಾದ ಅಮ್ಮನ ಟ್ರ್ಯಾಕ್ ಕ್ಲೋಸ್

ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಘಟನೆ ಸಂಚಲನ ಮೂಡಿಸಿದೆ. ಆರಂಭದಲ್ಲಿ ಸಾಮಾನ್ಯ ಕಸದ ಚೀಲವೆಂದು ಭಾವಿಸಿದ ಸ್ವಚ್ಛತಾ ಸಿಬ್ಬಂದಿ, ಅದನ್ನು ತೆರೆಯುತ್ತಿದ್ದಂತೆ ಅಚ್ಚರಿಗೊಂಡಿದ್ದಾರೆ. ಚೀಲದೊಳಗೆ ಮಹಿಳೆಯ ಶವ ಇರುವುದನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತನಿಖೆ ಮುಂದುವರಿದಂತೆ ಪ್ರಕರಣದಲ್ಲಿ ಒಂದರ ಹಿಂದೆ ಒಂದಾಗಿ ಹಲವು ತಿರುವುಗಳು ಹೊರಬಂದಿವೆ.

ಈ ಘಟನೆ ಸೂರತ್ ನಗರದ ಅಮ್ರೋಲಿ ಪ್ರದೇಶದ ಕೊಸಾದ್ ಹೌಸಿಂಗ್ ಕಾಲೋನಿಯಲ್ಲಿ ನಡೆದಿದೆ. ಮಾರ್ಚ್ 11ರಂದು ಪತ್ತೆಯಾದ ಶವವು ಅದೇ ಪ್ರದೇಶದ ನಿವಾಸಿಯಾದ 57 ವರ್ಷದ ಹಮೀದಾ ಖಾತೂನ್ ಮನ್ಸೂರಿ ಅವರದ್ದು ಎಂದು ಪೊಲೀಸರು ಗುರುತಿಸಿದ್ದಾರೆ. ಹಮೀದಾ ಖಾತೂನ್ ಕುಟುಂಬದ ಹೊಣೆಗಾರಿಕೆಯನ್ನು ಹೊತ್ತಿದ್ದರು. ಅವರ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ಇಬ್ಬರು ಪುತ್ರರಾದ ವಾಸಿಮ್ ಮತ್ತು ಪರ್ವೇಜ್ ಅವರೊಂದಿಗೆ ವಾಸಿಸುತ್ತಿದ್ದರು. ವಾಸಿಮ್ ಮೂರು ವರ್ಷಗಳ ಹಿಂದೆ ಶಬಾನಾ ಎಂಬವರನ್ನು ವಿವಾಹವಾಗಿದ್ದರು.

ಅಕ್ರಮ ಸಂಬಂಧದಿಂದ ಉಂಟಾದ ಕಲಹ

ಶಬಾನಾ ಮನೆಗೆ ಬಂದ ಆರಂಭದಲ್ಲಿ ಕುಟುಂಬ ಜೀವನ ಸರಾಗವಾಗಿತ್ತು. ಆದರೆ ನಂತರ ಮನೆಯೊಳಗೆ ಕಲಹಗಳು ಹೆಚ್ಚಾಗತೊಡಗಿದವು. ತನಿಖೆ ವೇಳೆ, ಹಮೀದಾ ಅವರ ಕಿರಿಯ ಪುತ್ರ ಪರ್ವೇಜ್ ಮತ್ತು ಅತ್ತಿಗೆ ಶಬಾನಾ ನಡುವೆ ಅಕ್ರಮ ಸಂಬಂಧವಿದ್ದುದಾಗಿ ಪೊಲೀಸರು ತಿಳಿಸಿದರು. ಕೆಲವು ಕಾಲ ಬಿಹಾರದಲ್ಲಿ ಇದ್ದಾಗ ಇವರಿಬ್ಬರೂ ಹತ್ತಿರವಾಗಿದ್ದು, ಬಳಿಕ ಸೂರತ್‌ಗೆ ಬಂದ ನಂತರವೂ ಅವರ ಸಂಬಂಧ ಮುಂದುವರಿದಿತ್ತು ಎನ್ನಲಾಗಿದೆ.

ಈ ವಿಷಯ ತಿಳಿದು ಹಮೀದಾ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮನೆಯ ವಾತಾವರಣ ಉದ್ವಿಗ್ನಗೊಂಡಿತ್ತು. ಇದಲ್ಲದೆ ಹಮೀದಾ ಹಾಗೂ ಶಬಾನಾ ಅವರ ತಂದೆ ಮೊಹಮ್ಮದ್ ಫಿರೋಜ್ ಆಲಂ ನಡುವೆಯೂ ಸಂಬಂಧಗಳ ಬಗ್ಗೆ ಮಾತುಕತೆಗಳು ನಡೆದಿದ್ದವು ಎನ್ನುವ ಅನುಮಾನಗಳು ಕುಟುಂಬದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದವು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆರ್ಥಿಕ ವಿಚಾರದಲ್ಲೂ ಉದ್ವಿಗ್ನತೆ

ಕುಟುಂಬದ ಖರ್ಚುಗಳನ್ನು ನಿಯಂತ್ರಿಸುವ ಹೊಣೆಗಾರಿಕೆ ಹಮೀದಾ ಅವರ ಮೇಲಿತ್ತು. ಇದು ಶಬಾನಾ ಮತ್ತು ಪರ್ವೇಜ್ ಅವರಿಗೆ ಇಷ್ಟವಾಗಿರಲಿಲ್ಲ. ಅಕ್ರಮ ಸಂಬಂಧ ಹಾಗೂ ಹಣಕಾಸಿನ ವಿಚಾರಗಳಿಂದ ಕುಟುಂಬದ ಒಳಜಗಳಗಳು ಹೆಚ್ಚಾಗಿ, ದ್ವೇಷಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ಶಬಾನಾ ತನ್ನ ತಂದೆ ಫಿರೋಜ್ ಆಲಂ ಅವರಿಗೆ ಅತ್ತೆಯ ಬಗ್ಗೆ ದೂರು ನೀಡಿದ್ದಳು. ನಂತರ ಫಿರೋಜ್ ಆಲಂ, ಹಮೀದಾಳನ್ನು ಕೊಲ್ಲುವ ಯೋಜನೆ ರೂಪಿಸಿದ್ದು, ಅದಕ್ಕೆ ಪರ್ವೇಜ್ ಸಹ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯೋಜಿತ ಕೊಲೆ

ಯೋಜನೆಯಂತೆ, ಶಬಾನಾ ತನ್ನ ತಂದೆಯನ್ನು ಮನೆಗೆ ಕರೆಸಿಕೊಂಡಿದ್ದಳು. ಮಾತುಕತೆ ನೆಪದಲ್ಲಿ ಹಮೀದಾಳನ್ನು ಕೋಣೆಗೆ ಕರೆದುಕೊಂಡು ಹೋಗಿ, ಫಿರೋಜ್ ಆಲಂ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಶಬಾನಾ ಅಲ್ಲಿ ಇದ್ದು ನೋಡುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ನಂತರ ಶಬಾನಾ, ಪರ್ವೇಜ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಮನೆಗೆ ಬಂದ ಪರ್ವೇಜ್ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಲು ಸಹಾಯ ಮಾಡಿದ್ದಾನೆ. ಕೈ ಕಾಲುಗಳನ್ನು ಕಟ್ಟಿ ಚೀಲದಲ್ಲಿ ಹಾಕಿದ ನಂತರ, ಫಿರೋಜ್ ಆಲಂ ಅದನ್ನು ಹೆಗಲ ಮೇಲೆ ಹೊತ್ತು ಮನೆಯಿಂದ ಹೊರಟಿದ್ದಾನೆ.

ಸಿಸಿಟಿವಿ ದೃಶ್ಯಗಳಿಂದ ಸಿಕ್ಕ ಸುಳಿವು

ಮಧ್ಯಾಹ್ನ ಸುಮಾರು 12.30ರ ವೇಳೆಗೆ ಫಿರೋಜ್ ಆಲಂ ಬಿಳಿ ಚೀಲವೊಂದನ್ನು ಹೊತ್ತು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಮನೆದಿಂದ ಸುಮಾರು 300 ರಿಂದ 500 ಮೀಟರ್ ದೂರದಲ್ಲಿರುವ ದೇವಸ್ಥಾನದ ಸಮೀಪ ಚೀಲವನ್ನು ಎಸೆದಿದ್ದಾನೆ. ನಂತರ ರೈಲು ನಿಲ್ದಾಣಕ್ಕೆ ತೆರಳಿ ಬಿಹಾರಕ್ಕೆ ಹೋಗುವ ರೈಲು ಹತ್ತಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಣ್ಣ ಸುಳಿವೇ ದೊಡ್ಡ ಸಾಕ್ಷಿ

ಪ್ರಾರಂಭದಲ್ಲಿ ತನಿಖೆ ಗೊಂದಲಮಯವಾಗಿದ್ದರೂ, ಚೀಲಕ್ಕೆ ಕಟ್ಟಿದ್ದ ದಾರವೇ ಪ್ರಕರಣ ಬಯಲು ಮಾಡುವ ಪ್ರಮುಖ ಸಾಕ್ಷಿಯಾಯಿತು. ಅದೇ ರೀತಿಯ ದಾರ ಶಬಾನಾ ಮನೆಯಲ್ಲೂ ಪತ್ತೆಯಾಗಿದ್ದು, ಪೊಲೀಸರ ವಿಚಾರಣೆ ವೇಳೆ ಮೂವರು ಆರೋಪಿಗಳು ಕೊಲೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.

ಈ ಘಟನೆ ಕುಟುಂಬದ ಒಳಜಗಳ ಮತ್ತು ಅಕ್ರಮ ಸಂಬಂಧದ ಪರಿಣಾಮ ಎಷ್ಟು ಭೀಕರ ಅಂತ್ಯಕ್ಕೇರಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ಭ್ರಷ್ಟರ ಬೇಟೆ

Recent Posts

66ರ ವೃದ್ಧನಿಗೆ 35ರ ಯುವತಿಯೊಂದಿಗೆ ಮದುವೆ! ವಯಸ್ಸು ಕೇವಲ ಸಂಖ್ಯೆ ಮಾತ್ರವೇ?

66 ವರ್ಷದ ಸೋಮ್ ದೇವ್ ಮತ್ತು 35 ವರ್ಷದ ಯುವತಿಯ ವಿವಾಹ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.…

14 minutes ago

ವಿಮೆ-ಆಸ್ತಿ ಲಾಭಕ್ಕಾಗಿ ಗಂಡನ ಕೊಲೆ: ಹರಿಯಾಣದಲ್ಲಿ ಪ್ರಿಯಕರ ನೊಂದಿಗೆ ಪತ್ನಿ ರಚಿಸಿದ್ದ ಸಂಚು ಬಯಲು.!

ಹರಿಯಾಣದ ಚರ್ಕಿ ದಾದ್ರಿ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಮಾನವ ಸಂಬಂಧಗಳನ್ನೇ ಪ್ರಶ್ನಿಸುವಂತೆ ಮಾಡಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ,…

16 minutes ago

ಬೆಂಗಳೂರು ಡ್ರಗ್ಸ್ ಜಾಲದ ಮೇಲೆ ಭಾರೀ ದಾಳಿ: ₹36 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ, 16 ಮಂದಿ ಬಂಧನ

ರಾಜಧಾನಿ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ಮುಂದುವರೆಸಿದ್ದು, ನಾಲ್ವರು ವಿದೇಶಿಯರು ಸೇರಿದಂತೆ ಒಟ್ಟು 16 ಮಂದಿಯನ್ನು…

5 hours ago

ಕೊಡಗು ಜೈಲಿನಲ್ಲಿ ವಿಚಾರಣಾಧೀನ ಕೈದಿಯ ಸಾವು: ‘ಹನಿಟ್ರ್ಯಾಪ್‌, ಸುಳ್ಳು ಪ್ರಕರಣ’ ಆರೋಪಗಳಿಂದ ಪ್ರಕರಣಕ್ಕೆ ಹೊಸ ತಿರುವು

ಕೊಡಗು ಜಿಲ್ಲಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ 68 ವರ್ಷದ ಚೆಂಗಪ್ಪ ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸುಮಾರು 20…

5 hours ago

ಶಿವಾಜಿನಗರ ಬೌರಿಂಗ್ ಆಸ್ಪತ್ರೆ ದುರಂತ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿ, ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ

ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆ ಆವರಣದ ಗೋಡೆ ಕುಸಿತದಿಂದ ಸಂಭವಿಸಿದ ಭೀಕರ ದುರಂತದ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,…

6 hours ago

ಭ್ರೂಣಲಿಂಗ ಪತ್ತೆ–ಅಕ್ರಮ ಸ್ಕ್ಯಾನಿಂಗ್ ದಂಧೆ ಭಂಡಾಫೋಡ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಬಂಧನ

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಅಕ್ರಮ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರನ್ನು ಬಂಧಿಸಿರುವ ಘಟನೆ…

21 hours ago