Categories: CrimeLatest

ಅತ್ತಿಗೆ ಮೈದುನನ ಲವ್ ಟ್ರ್ಯಾಕ್ ಗೆ ಅಡ್ಡಿಯಾದ ಅಮ್ಮನ ಟ್ರ್ಯಾಕ್ ಕ್ಲೋಸ್

ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಘಟನೆ ಸಂಚಲನ ಮೂಡಿಸಿದೆ. ಆರಂಭದಲ್ಲಿ ಸಾಮಾನ್ಯ ಕಸದ ಚೀಲವೆಂದು ಭಾವಿಸಿದ ಸ್ವಚ್ಛತಾ ಸಿಬ್ಬಂದಿ, ಅದನ್ನು ತೆರೆಯುತ್ತಿದ್ದಂತೆ ಅಚ್ಚರಿಗೊಂಡಿದ್ದಾರೆ. ಚೀಲದೊಳಗೆ ಮಹಿಳೆಯ ಶವ ಇರುವುದನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತನಿಖೆ ಮುಂದುವರಿದಂತೆ ಪ್ರಕರಣದಲ್ಲಿ ಒಂದರ ಹಿಂದೆ ಒಂದಾಗಿ ಹಲವು ತಿರುವುಗಳು ಹೊರಬಂದಿವೆ.

ಈ ಘಟನೆ ಸೂರತ್ ನಗರದ ಅಮ್ರೋಲಿ ಪ್ರದೇಶದ ಕೊಸಾದ್ ಹೌಸಿಂಗ್ ಕಾಲೋನಿಯಲ್ಲಿ ನಡೆದಿದೆ. ಮಾರ್ಚ್ 11ರಂದು ಪತ್ತೆಯಾದ ಶವವು ಅದೇ ಪ್ರದೇಶದ ನಿವಾಸಿಯಾದ 57 ವರ್ಷದ ಹಮೀದಾ ಖಾತೂನ್ ಮನ್ಸೂರಿ ಅವರದ್ದು ಎಂದು ಪೊಲೀಸರು ಗುರುತಿಸಿದ್ದಾರೆ. ಹಮೀದಾ ಖಾತೂನ್ ಕುಟುಂಬದ ಹೊಣೆಗಾರಿಕೆಯನ್ನು ಹೊತ್ತಿದ್ದರು. ಅವರ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು, ಇಬ್ಬರು ಪುತ್ರರಾದ ವಾಸಿಮ್ ಮತ್ತು ಪರ್ವೇಜ್ ಅವರೊಂದಿಗೆ ವಾಸಿಸುತ್ತಿದ್ದರು. ವಾಸಿಮ್ ಮೂರು ವರ್ಷಗಳ ಹಿಂದೆ ಶಬಾನಾ ಎಂಬವರನ್ನು ವಿವಾಹವಾಗಿದ್ದರು.

ಅಕ್ರಮ ಸಂಬಂಧದಿಂದ ಉಂಟಾದ ಕಲಹ

ಶಬಾನಾ ಮನೆಗೆ ಬಂದ ಆರಂಭದಲ್ಲಿ ಕುಟುಂಬ ಜೀವನ ಸರಾಗವಾಗಿತ್ತು. ಆದರೆ ನಂತರ ಮನೆಯೊಳಗೆ ಕಲಹಗಳು ಹೆಚ್ಚಾಗತೊಡಗಿದವು. ತನಿಖೆ ವೇಳೆ, ಹಮೀದಾ ಅವರ ಕಿರಿಯ ಪುತ್ರ ಪರ್ವೇಜ್ ಮತ್ತು ಅತ್ತಿಗೆ ಶಬಾನಾ ನಡುವೆ ಅಕ್ರಮ ಸಂಬಂಧವಿದ್ದುದಾಗಿ ಪೊಲೀಸರು ತಿಳಿಸಿದರು. ಕೆಲವು ಕಾಲ ಬಿಹಾರದಲ್ಲಿ ಇದ್ದಾಗ ಇವರಿಬ್ಬರೂ ಹತ್ತಿರವಾಗಿದ್ದು, ಬಳಿಕ ಸೂರತ್‌ಗೆ ಬಂದ ನಂತರವೂ ಅವರ ಸಂಬಂಧ ಮುಂದುವರಿದಿತ್ತು ಎನ್ನಲಾಗಿದೆ.

ಈ ವಿಷಯ ತಿಳಿದು ಹಮೀದಾ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮನೆಯ ವಾತಾವರಣ ಉದ್ವಿಗ್ನಗೊಂಡಿತ್ತು. ಇದಲ್ಲದೆ ಹಮೀದಾ ಹಾಗೂ ಶಬಾನಾ ಅವರ ತಂದೆ ಮೊಹಮ್ಮದ್ ಫಿರೋಜ್ ಆಲಂ ನಡುವೆಯೂ ಸಂಬಂಧಗಳ ಬಗ್ಗೆ ಮಾತುಕತೆಗಳು ನಡೆದಿದ್ದವು ಎನ್ನುವ ಅನುಮಾನಗಳು ಕುಟುಂಬದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದವು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಆರ್ಥಿಕ ವಿಚಾರದಲ್ಲೂ ಉದ್ವಿಗ್ನತೆ

ಕುಟುಂಬದ ಖರ್ಚುಗಳನ್ನು ನಿಯಂತ್ರಿಸುವ ಹೊಣೆಗಾರಿಕೆ ಹಮೀದಾ ಅವರ ಮೇಲಿತ್ತು. ಇದು ಶಬಾನಾ ಮತ್ತು ಪರ್ವೇಜ್ ಅವರಿಗೆ ಇಷ್ಟವಾಗಿರಲಿಲ್ಲ. ಅಕ್ರಮ ಸಂಬಂಧ ಹಾಗೂ ಹಣಕಾಸಿನ ವಿಚಾರಗಳಿಂದ ಕುಟುಂಬದ ಒಳಜಗಳಗಳು ಹೆಚ್ಚಾಗಿ, ದ್ವೇಷಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ಶಬಾನಾ ತನ್ನ ತಂದೆ ಫಿರೋಜ್ ಆಲಂ ಅವರಿಗೆ ಅತ್ತೆಯ ಬಗ್ಗೆ ದೂರು ನೀಡಿದ್ದಳು. ನಂತರ ಫಿರೋಜ್ ಆಲಂ, ಹಮೀದಾಳನ್ನು ಕೊಲ್ಲುವ ಯೋಜನೆ ರೂಪಿಸಿದ್ದು, ಅದಕ್ಕೆ ಪರ್ವೇಜ್ ಸಹ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯೋಜಿತ ಕೊಲೆ

ಯೋಜನೆಯಂತೆ, ಶಬಾನಾ ತನ್ನ ತಂದೆಯನ್ನು ಮನೆಗೆ ಕರೆಸಿಕೊಂಡಿದ್ದಳು. ಮಾತುಕತೆ ನೆಪದಲ್ಲಿ ಹಮೀದಾಳನ್ನು ಕೋಣೆಗೆ ಕರೆದುಕೊಂಡು ಹೋಗಿ, ಫಿರೋಜ್ ಆಲಂ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಶಬಾನಾ ಅಲ್ಲಿ ಇದ್ದು ನೋಡುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ನಂತರ ಶಬಾನಾ, ಪರ್ವೇಜ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಮನೆಗೆ ಬಂದ ಪರ್ವೇಜ್ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಲು ಸಹಾಯ ಮಾಡಿದ್ದಾನೆ. ಕೈ ಕಾಲುಗಳನ್ನು ಕಟ್ಟಿ ಚೀಲದಲ್ಲಿ ಹಾಕಿದ ನಂತರ, ಫಿರೋಜ್ ಆಲಂ ಅದನ್ನು ಹೆಗಲ ಮೇಲೆ ಹೊತ್ತು ಮನೆಯಿಂದ ಹೊರಟಿದ್ದಾನೆ.

ಸಿಸಿಟಿವಿ ದೃಶ್ಯಗಳಿಂದ ಸಿಕ್ಕ ಸುಳಿವು

ಮಧ್ಯಾಹ್ನ ಸುಮಾರು 12.30ರ ವೇಳೆಗೆ ಫಿರೋಜ್ ಆಲಂ ಬಿಳಿ ಚೀಲವೊಂದನ್ನು ಹೊತ್ತು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಮನೆದಿಂದ ಸುಮಾರು 300 ರಿಂದ 500 ಮೀಟರ್ ದೂರದಲ್ಲಿರುವ ದೇವಸ್ಥಾನದ ಸಮೀಪ ಚೀಲವನ್ನು ಎಸೆದಿದ್ದಾನೆ. ನಂತರ ರೈಲು ನಿಲ್ದಾಣಕ್ಕೆ ತೆರಳಿ ಬಿಹಾರಕ್ಕೆ ಹೋಗುವ ರೈಲು ಹತ್ತಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಣ್ಣ ಸುಳಿವೇ ದೊಡ್ಡ ಸಾಕ್ಷಿ

ಪ್ರಾರಂಭದಲ್ಲಿ ತನಿಖೆ ಗೊಂದಲಮಯವಾಗಿದ್ದರೂ, ಚೀಲಕ್ಕೆ ಕಟ್ಟಿದ್ದ ದಾರವೇ ಪ್ರಕರಣ ಬಯಲು ಮಾಡುವ ಪ್ರಮುಖ ಸಾಕ್ಷಿಯಾಯಿತು. ಅದೇ ರೀತಿಯ ದಾರ ಶಬಾನಾ ಮನೆಯಲ್ಲೂ ಪತ್ತೆಯಾಗಿದ್ದು, ಪೊಲೀಸರ ವಿಚಾರಣೆ ವೇಳೆ ಮೂವರು ಆರೋಪಿಗಳು ಕೊಲೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.

ಈ ಘಟನೆ ಕುಟುಂಬದ ಒಳಜಗಳ ಮತ್ತು ಅಕ್ರಮ ಸಂಬಂಧದ ಪರಿಣಾಮ ಎಷ್ಟು ಭೀಕರ ಅಂತ್ಯಕ್ಕೇರಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ಭ್ರಷ್ಟರ ಬೇಟೆ

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

2 days ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

2 days ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

2 days ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

2 days ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

2 days ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

2 days ago