Latest

ಗ್ರಾ.ಪಂ ಆಡಳಿತದಲ್ಲಿ ಪತ್ನಿಯ ಬದಲು ಪತಿಯ ಹಸ್ತಕ್ಷೇಪದಿಂದ ಮಾನಸಿಕ ಕಿರುಕುಳ; ಗ್ರಾ.ಪಂ ಸದಸ್ಯೆ ತಾಲೂಕು ಪಂಚಾಯತ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ.

ಕೊಟ್ಟೂರು:- ಅಂಬಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಹೊಳಲಮ್ಮ ನವರ ಪತಿ ಹನುಮಂತಪ್ಪ ಎಂಬುವವರ ಅಧಿಕಾರದ ಹಸ್ತಕ್ಷೇಪದಿಂದಾಗಿ ನನಗೆ ಮಾನಸಿಕ ಕಿರುಕುಳ ಉಂಟಾಗುತ್ತಿದೆ ಹಾಗೂ ಅನುದಾನದಲ್ಲಿ ತಾರತಮ್ಯವಾಗುತ್ತಿದೆ ಎಂದು ಕುಡಿತಿನಮಗ್ಗಿ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯೆ ಲಲಿತ ಕಾಳಚಾರಿ ಯವರು ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗದ ಆವರಣದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಕುರಿತು ಮಾತನಾಡಿದ ಅವರು
ನನಗೆ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಯಾವುದೇ ಸಭೆಯಲ್ಲಿ ಆಗಲಿ ಅಥವಾ ಲೆಕ್ಕ ಪುಸ್ತಕದ ಬಗ್ಗೆ ಆಗಲಿ ಸರಿಯಾದ ಮಾಹಿತಿ ನೀಡುತ್ತಿಲ್ಲ ಇದರ ಬಗ್ಗೆ ಕೇಳಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯವರ ಗಂಡ ಹನುಮಂತಪ್ಪ ನವರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಬೆದರಿಸುವ ಪ್ರಯತ್ನ ಮಾಡುತ್ತಾರೆ.ಇದರ ಸಂಬಂಧ ನನಗೆ ಯಾವುದೇ ಅನುದಾನ ನೀಡುತ್ತಿಲ್ಲ ಈಗಾದರೆ ನಾನು ವಾರ್ಡಿನಲ್ಲಿ ಹೇಗೆ ಅಭಿವೃದ್ಧಿ ಮಾಡಲು ಸಾಧ್ಯ ಹಾಗೂ ಹಿಂದೆ ಮಾಡಿರುವ ಕೆಲಸಗಳ ಬಿಲ್ ಗಳನ್ನು ಸಹ ತಡೆಹಿಡಿದು ಮಾನಸಿಕವಾಗಿ ಕುಗ್ಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಇದರಿಂದಾಗಿ ನನಗೆ ನ್ಯಾಯ ಬೇಕೇ ಬೇಕೆಂದು ಈ ಸತ್ಯಾಗ್ರಹವನ್ನು ನಡೆಸಲು ಮುಂದಾಗಿದ್ದೇನೆ ಎಂದು ಕಣ್ಣೀರು ಹಾಕುತ್ತಾ ಹೇಳಿದರು.

ನಿನ್ನೆ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಉನ್ನತ ಅಧಿಕಾರಿಗಳು, ರಾಜಕೀಯ ನಾಯಕರು, ಮಹಿಳೆಯರು ಮುಖ್ಯವಾಹಿನಿಗೆ ಬರಬೇಕೆಂದು ಬರೀ ಟೊಳ್ಳು ಮಾತನಾಡಿದರೆ ಸಾಲದು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡವರನ್ನು ಸರಿ ಸಮಾನ ಅವಕಾಶಗಳು ದೊರಕಿಸಬೇಕು ಈ ರೀತಿ ಒಬ್ಬ ಗ್ರಾ.ಪಂ. ಮಹಿಳಾ ಸದಸ್ಯೆಯನ್ನು ದೌರ್ಜನ್ಯವಾಗಿ ನಡೆಸಿಕೊಂಡರೆ ಸರಿಯೇ ಮುಂದೆ ಈ ಘಟನೆಗಳು ಕಂಡು ಬಂದರೆ ಪ್ರತ್ಯಕ್ಷವಾಗಿ ಇವರ ಹೋರಾಟಕ್ಕೆ ನಮ್ಮ ಸಂಘಟನೆಯಿಂದ ಬೆಂಬಲ ಸೂಚಿಸಲಾಗುವುದು ಎಂದು ವಕೀಲ ಹನುಮಂತಪ್ಪ ಹಾಗೂ ರೈತ ಮುಖಂಡ ಗುಡಿಯಾರ ಮಲ್ಲಿಕಾರ್ಜುನ ನವರು ತಿಳಿಸಿದರು.

ನಂತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಮಾನ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ್ ಕುಮಾರ್ ರವರು ಅಂಬಳಿ ಗ್ರಾಮ ಪಂಚಾಯಿತಿ ಪಿ ಡಿ ಒ ರವರನ್ನು ಸ್ಥಳಕ್ಕೆ ಕರೆಸಿ ವಾಸ್ತವ ಬಗ್ಗೆ ಚರ್ಚಿಸಿ ಇನ್ನು ಮುಂದೆ ಸಾಮಾನ್ಯ ಸಭೆಯಲ್ಲಿ ಪೊಲೀಸ್ ಸಹಾಯ ಪಡೆದು ಸಭೆಯನ್ನು ಮುಂದುವರೆಸಬೇಕು ಸಭೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರು ಮಾತ್ರ ಪರಿಗಣಿಸಬೇಕು ಬೇರೆಯವರು ಸಭೆಯಲ್ಲಿ ಹಸ್ತಕ್ಷೇಪ ಮಾಡದಂತೆ ಸಭೆಯನ್ನು ನಡೆಸಬೇಕೆಂದು ಹೇಳಿದರು ಹಾಗೂ ಸದಸ್ಯೆ ಲಲಿತಮ್ಮ ನವರು ಮಾಡಿರುವ ಕೆಲಸ ಅಧಿಕೃತ ದಾಖಲೆಗಳನ್ನು ಪಡೆದು ಬೇಗನೆ ಬಿಲ್ ಮಾಡುವಂತೆ ಸೂಚಿಸಿದರು, ಅಧ್ಯಕ್ಷರನ್ನು ಸದಸ್ಯರು ಬಿಟ್ಟು ಅವರ ಸಂಬಂಧಿಕರು ಅಧಿಕಾರದಲ್ಲಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಬೇಕು ಇದು ಏನಾದರು ಮುಂದುವರೆದರೆ ಪೊಲೀಸ್ ದೂರು ನೀಡಿ ಎಂದು ಖಡಕ್ ಸೂಚನೆ ನೀಡಿದರು. ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿ ಧರಣಿಯನ್ನು ಹಿಂಪಡೆಯುವಂತೆ ಹೇಳಿದರು ಮಾನ್ಯ ಅಧಿಕಾರಿಗಳು ಸ್ಪಂದಿಸಿ ಧರಣಿಯನ್ನು ಹಿಂಪಡೆಯಲಾಯಿತು.

ವರದಿ:- ಮಣಿಕಂಠ. ಬಿ

ಭ್ರಷ್ಟರ ಬೇಟೆ

Recent Posts

ಪೂಲ್‌ನಲ್ಲಿ ಬಾಯ್ ಫ್ರೆಂಡ್ ನೊಂದಿಗೆ ಮಹಿಳೆ ರೋಮ್ಯಾನ್ಸ್: ದಿಡೀರನೆ ಬಂದ ಗಂಡ..! ವೈರಲ್ ವಿಡಿಯೋ

ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಹಿಳೆ ತನ್ನ ಬಾಯ್‌ಫ್ರೆಂಡ್ ಜೊತೆಗೆ ಸಮಯ ಕಳೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ…

1 hour ago

ಕೆಐಎಡಿಬಿ 16 ಕೋಟಿ ವಂಚನೆ: ಪ್ರಮುಖ ಆರೋಪಿ ಪೊಲೀಸರ ವಶಕ್ಕೆ

ಬಳ್ಳಾರಿಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿಯಲ್ಲಿ ನಡೆದಿದೆ ಎನ್ನಲಾದ 16 ಕೋಟಿಗೂ ಅಧಿಕ ವಂಚನೆ ಪ್ರಕರಣದಲ್ಲಿ ಪ್ರಮುಖ…

6 hours ago

ನಾಸಿಕ್ ಟಿಸಿಎಸ್ ಪ್ರಕರಣ: ಆರೋಪಿಗಳ ಪರ ನಿಂತಿದ್ದ ಎಚ್‌ಆರ್ ಮ್ಯಾನೇಜರ್ ನಿದಾ ಖಾನ್ ಪಾತ್ರ ಬಹಿರಂಗ

ನಾಸಿಕ್‌ನ ಟಿಸಿಎಸ್ ಸಂಬಂಧಿತ ಮತಾಂತರ ಮತ್ತು ಕಿರುಕುಳ ಪ್ರಕರಣದ ತನಿಖೆಯಲ್ಲಿ ಹೊಸದಾಗಿ ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಬಿಪಿಒ ಘಟಕದಲ್ಲಿ ಎಚ್‌ಆರ್…

6 hours ago

ಗೃಹಲಕ್ಷ್ಮಿ ಹಣ ಕೂಡಿಟ್ಟು ಐಸ್ ಕ್ರೀಮ್ ಅಂಗಡಿ ತೆರೆದ ಮಹಿಳೆ!

ವಿಜಯನಗರ:- ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡಿಟ್ಟು ಮಹಿಳೆಯೊಬ್ಬರು ಸಣ್ಣದಾಗಿ ಐಸ್ ಕ್ರೀಮ್ ಅಂಗಡಿ ತೆರೆದು ಬದುಕು ಕಟ್ಟಿಕೊಂಡಿದ್ದಾರೆ.ಕೊಟ್ಟೂರು ತಾಲ್ಲೂಕಿನ ಹರಾಳು…

6 hours ago

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ತಕ್ಷಣ ಶಾಸಕ ಸ್ಥಾನ ರದ್ದು, ಮುಂದೇನು?

ಧಾರವಾಡ ಜಿಪಂ ಮಾಜಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್…

16 hours ago

ಪೆಟ್ರೋಲ್ ಬಂಕ್ ನಕಾಶೆ ಅಪ್ಲೋಡ್‌ಗೆ ಹಣ ಬೇಡಿಕೆ – ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ವಿಜಯಪುರ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಸಿಲುಕಿರುವ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಜಾಗದ…

16 hours ago