ಮುಂಡಗೋಡ: ಶಿರಸಿಯ ಕೃಷಿ ಉಪ ನಿರ್ದೇಶಕರಾದ ಪಾಂಡು ಅವರ ನೇತೃತ್ವದಲ್ಲಿ ಮುಂಡಗೋಡ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬುಧವಾರ ರಸಗೊಬ್ಬರ ಮಾರಾಟಗಾರರ ಸಭೆ ನಡೆಯಿತು.
ಇದೇವೇಳೆ ರಸಗೊಬ್ಬರ ಮಾರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಉಪ ಕೃಷಿಷನಿರ್ದೇಶಕರಾದ ಪಾಂಡು ಅವರು
ತಾಲೂಕಿನಲ್ಲಿ ಯೂರಿಯ ರಸಗೊಬ್ಬರ , ಸಮಸ್ಯೆ ಉಲ್ಬಣವಾಗದಂತೆ ಎಚ್ಚೆತ್ತುಕೊಳ್ಳಬೇಕಿದೆ. ನಮ್ಮ ಮುಂಡಗೋಡ ತಾಲೂಕಿನ ರೈತರಿಗೆ ಮೊದಲು ಪ್ರಾತಿನಿಧ್ಯ ನೀಡಬೇಕು, ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಯ ರೈತರಿಗೆ ಯೂರಿಯಾ ನೀಡಬಾರದು ಎಂದು ಹೇಳಿದರು.
ಸಿಪಿಐ ರಂಗನಾಥ್ ನೀಲಮ್ಮನವರ
ಮಾತನಾಡಿ ಒಂದು ಎಕರೆಗೆ ಎರಡು ಪ್ಯಾಕೆಟ್ ಯೂರಿಯಾ ಮಾತ್ರ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳು
ಈಗಾಗಲೇ ಎಲ್ಲರಿಗೂ ನಿರ್ದೇಶನ ನೀಡಿದ್ದು, ಮೊದಲು ನಮ್ಮ ತಾಲೂಕಿನ ರೈತರಿಗೆ ತಪ್ಪದೆ ಪೂರೈಕೆ ಮಾಡಬೇಕು, ಸರ್ಕಾರ ನಿಗದಿಪಡಿಸಿದ ದರಕ್ಕೆ ಮಾತ್ರ ಮಾರಾಟ ಮಾಡಬೇಕು , ಶಿರಸಿ ಉಪವಿಭಾಗದ ಮಟ್ಟದಲ್ಲಿ ಮುಂಡಗೋಡ ತಾಲೂಕಿನಲ್ಲಿ ಯೂರಿಯಾಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ವಿಚಕ್ಷಣಾ ದಳದ ಅಧಿಕಾರಿಯಾದ ಶಿವಾನಂದ ಹಾವೇರಿ ಮಾತನಾಡಿ ಯೂರಿಯಾ ಪೂರೈಕೆ ಕುರಿತಂತೆ ಸಮಿತಿ ಅಸ್ತಿತ್ವದಲ್ಲಿದ್ದು, ವಿಚಕ್ಷಣಾ ದಳ ಪ್ರತಿಯೊಂದು ಚಟುವಟಿಕೆಯನ್ನು ಗಮನಿಸುತ್ತಿರುತ್ತದೆ, ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಯವರಿಗೆ ಪೂರೈಕೆ ಮಾಡುವುದು ಸೇರಿದಂತೆ ಅಕ್ರಮ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಂಗಾರು ಹಂಗಾಮಿಗೆ ಸಾಕಾಗುವಷ್ಟು ದಾಸ್ತಾನು ಕೇಂದ್ರದ
ಮಟ್ಟದಲ್ಲಿದೆ.ಅಂಗಡಿಯವರು ದಾಸ್ತಾನುಗಳನ್ನು ಪೋರ್ಟಲ್ ನಲ್ಲಿ ನಿರಂತರವಾಗಿ ನಮೂದಿಸಬೇಕು, ಎಫ್ ಐ ಡಿ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ
ಯೂರಿಯಾ ಸಿಗುವುದಿಲ್ಲ.ಯೂರಿಯಾ ಮಾನಿಟರಿಂಗ್ ಪೋರ್ಟಲ್ ಇದ್ದು, ಎಫ್ ಐ ಡಿ ಮಾಡಿಸದ ರೈತರು ಕೂಡಲೇ ಎಫ್ ಐ ಡಿ ಮಾಡಿಸಬೇಕಿದೆ.
ಇದೇ ವೇಳೆ ಪತ್ರಕರ್ತರು ತಾಲೂಕಿನಲ್ಲಿ ಹಲವಾರು ರೈತರು ಅತಿಕ್ರಮಣದಾರರಿದ್ದು ಅವರಿಗೆ ಇದು ಸಮಸ್ಯೆ ಆಗಬಹುದು ಎಂದು ಕೇಳಿದಾಗ ಸಹಾಯಕ ಕೃಷಿ ನಿರ್ದೇಶಕರಾದ ಕೆ ಎನ್ ಮಹಾರೆಡ್ಡಿ ಅವರು ಈಗಾಗಲೇ ಈ ವಿಷಯದ ಕುರಿತು ಹಿರಿಯ ಅಧಿಕಾರಿಗಳ ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ ಎಂದರು.
ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಶಿರಸಿಯ ಉಪ ನಿರ್ದೇಶಕರು,ವಿಚಕ್ಷಣಾ ದಳದ ಅಧಿಕಾರಿ, ಮುಂಡಗೋಡ ಸಿಪಿಐ ರಂಗನಾಥ ನಿಲಮ್ಮನವರ್, ಸಹಾಯಕ ಕೃಷಿ ನಿರ್ದೇಶಕರಾದ ಕೆ ಎನ್ ಮಹಾರೆಡ್ಡಿ , ರಸಗೊಬ್ಬರ ಕಂಪನಿಯ ಪ್ರತಿನಿಧಿಗಳು ಹಾಗೂ ನಗರ ಹಾಗೂ ಗ್ರಾಮೀಣ ಭಾಗದ ರಸಗೊಬ್ಬರ ಮಾರಾಟಗಾರರು ಉಪಸ್ಥಿತರಿದ್ದರು.
ಅಂಕೋಲ: ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕಂಚಿನಬಾಗಿಲು ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಪೆಟ್ರೋಲಿಯಂ ಉತ್ಪನ್ನ ಹೊತ್ತೊಯ್ಯುತ್ತಿದ್ದ ಟ್ಯಾಂಕರ್…
ಇತ್ತೀಚಿನ ದಿನಗಳಲ್ಲಿ ಪ್ರೇಮದ ಪರಿಕಲ್ಪನೆಗಳು ಬದಲಾಗುತ್ತಿದ್ದು, ವಯಸ್ಸಿನ ಅಂತರವನ್ನೇ ಮೀರಿ ಸಂಬಂಧಗಳು ರೂಪುಗೊಳ್ಳುತ್ತಿರುವುದು ಗಮನಾರ್ಹ. ಹಿಂದೆ ಸಾಮಾನ್ಯವಾಗಿ ಹುಡುಗ ಹುಡುಗಿಗಿಂತ…
ಬೆಳಗಾವಿ: ರಾಜ್ಯದಲ್ಲಿ ಕಾನೂನು ಕಠಿಣವಾಗಿದ್ದರೂ, ‘ಮರ್ಯಾದೆ’ ಹೆಸರಿನಲ್ಲಿ ನಡೆಯುವ ಹತ್ಯೆಗಳು ಕಡಿಮೆಯಾಗುತ್ತಿಲ್ಲ. ಇತ್ತೀಚೆಗೆ ಹುಬ್ಬಳ್ಳಿ ಘಟನೆಯ ಬೆನ್ನಲ್ಲೇ, ಈಗ ಬೆಳಗಾವಿ…
ಚಿತ್ರದುರ್ಗ ನಗರದಲ್ಲಿ ನಕಲಿ ಪೊಲೀಸ್ ಹೆಸರಿನಲ್ಲಿ ದರೋಡೆ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ದಿನಾಂಕ 05.04.2026…
ಪಾರ್ಕ್ನಲ್ಲಿ ಪ್ರೇಯಸಿಯೊಂದಿಗೆ ಏಕಾಂತವಾಗಿ ಸಮಯ ಕಳೆಯುತ್ತಿದ್ದ ಪತಿಯೊಬ್ಬನು, ಪತ್ನಿಯ ಕೈಗೆ ಸಿಕ್ಕಿಬಿದ್ದ ರೋಚಕ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ…
ಬೆಂಗಳೂರುದಲ್ಲಿರುವ ಕಾವೇರಿ ನಿವಾಸದಲ್ಲಿ Siddaramaiah ಮತ್ತು Zameer Ahmed Khan ನಡುವಿನ ಭೇಟಿಯು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. Indian…