ಗದಗ: ಶಿವಮೊಗ್ಗ ಜಿಲ್ಲೆಯ ಕೂಡ್ಲಿ ಶೃಂಗೇರಿ ಮಠಕ್ಕೆ ಸೇರಿದ್ದ ಮೌಲ್ಯಮತ್ತಾದ ಜಮೀನನ್ನು ಕಾನೂನು ಬಾಹಿರವಾಗಿ ತನ್ನ ಹೆಸರಿಗೆ ಮಾಡಿಕೊಳ್ಳಲು ಯತ್ನಿಸಿದ ಪ್ರಕರಣವು ಬೆಳಕಿಗೆ ಬಂದಿದೆ. ಈ ಹಗರಣದಲ್ಲಿ ಮಹಿಳಾ ಕಾಂಗ್ರೆಸ್ ನಾಯಕಿ ಸುಜಾತಾ ದೊಡ್ಡಮನಿ ಮತ್ತು ಅವರ ಪತಿ ನಿಂಗಪ್ಪ ದೊಡ್ಡಮನಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ತೆಗ್ಗಿನಭಾನೂರ ಗ್ರಾಮದಲ್ಲಿ ಸರ್ವೇ ನಂ. 63 ಮತ್ತು 54ರಲ್ಲಿ ಮಠದ ಒಟ್ಟು 21 ಎಕರೆ ಜಮೀನಿದೆ. ಈ ಜಮೀನನ್ನು ಕೇವಲ ಕಾಗದದ ಲೆಕ್ಕದಲ್ಲಿ ಕಬಳಿಸಿ ಸುಜಾತಾ ದೊಡ್ಡಮನಿ ಅವರ ಹೆಸರಿಗೆ ಬದಲಾಯಿಸಲು ಪತಿ-ಪತ್ನಿ ಸಂಚು ರೂಪಿಸಿದ್ದಾರೆಯೆಂದು ಸ್ಥಳೀಯ ಪೋಕಳಾ ವಾರಸುದಾರರು ಆರೋಪಿಸಿದ್ದಾರೆ.
ನಿಂಗಪ್ಪ ದೊಡ್ಡಮನಿ ಶಿರಹಟ್ಟಿ ಉಪ ತಹಶೀಲ್ದಾರ್ ಆಗಿ ಸೇವೆ ನಿರ್ವಹಿಸುತ್ತಿದ್ದ ವೇಳೆ ಈ ಜಮೀನಿನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರೆಂದು ತಿಳಿದು ಬಂದಿದೆ. ನಂತರ ರಾಜಕೀಯ ಪ್ರಭಾವ ಮತ್ತು ಆಡಳಿತಾತ್ಮಕ ಸಂಪರ್ಕಗಳನ್ನು ಬಳಸಿಕೊಂಡು ಜಮೀನನ್ನು ಕಾನೂನು ವಿರುದ್ಧವಾಗಿ ತಮ್ಮ ಹೆಸರಿಗೆ ಬದಲಾಯಿಸಲು ಹೆಣಗೊಂಡಿದ್ದಾರೆ ಎಂಬುದು ದೂರುದಾರರ ವಾದ.
ಈ ಜಮೀನಿಗೆ ಪೋಕಳಾ ಹಕ್ಕುದಾರರು ಇರುವುದರಿಂದ, ಅವರ ಅನುಮತಿಯಿಲ್ಲದೇ ಜಮೀನು ಮಾರಾಟ ಅಥವಾ ಹಕ್ಕು ಬದಲಾವಣೆ ಸಾಧ್ಯವಿಲ್ಲ. ಆದರೆ ಶಿರಹಟ್ಟಿ ತಹಶೀಲ್ದಾರ ಶರಣಪ್ಪ ಪವಾರ್ ಮತ್ತು ಸಬ್ರಿಜಿಸ್ಟ್ರಾರ್ ಅಧಿಕಾರಿಗಳು ಲಂಚದ ಆಸೆಗೆ ಮಣಿದು, ಸೂಕ್ತ ದಾಖಲೆಗಳಿಲ್ಲದೇ ಹಕ್ಕು ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವೂ ಹೊರಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೋಕಳಾ ಕುಟುಂಬಗಳು ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದು, ಭೂಹಗರಣದ ತನಿಖೆ ನಡೆಸಿ ಜವಾಬ್ದಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಮಠದ ಆಸ್ತಿಗಳನ್ನು ದುರುಪಯೋಗಪಡಿಸಿಕೊಳ್ಳಲು ನಡೆಯುವ ಇಂತಹ ಸಂಚುಗಳು ಧಾರ್ಮಿಕ ಸಂಸ್ಥೆಗಳ ಭದ್ರತೆಗೆ ಧಕ್ಕೆಯುಂಟು ಮಾಡುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಘಟನೆ ಸಂಬಂಧ ಮುಂದಿನ ದಿನಗಳಲ್ಲಿ ತನಿಖಾ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬುದರತ್ತ ಸಾರ್ವಜನಿಕರು ಹಾಗೂ ಮಠದ ನಂಬಿಕಸ್ಥರು ಕಣ್ಣಿಟ್ಟಿದ್ದಾರೆ.
ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…
ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…
ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…
ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…
ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…
ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…