Latest

ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಬೃಹತ್ ನಿರ್ಲಕ್ಷ್ಯ: ಟಿಕೆಟ್ ನೀಡದೇ ಮೊಬೈಲ್ ಬಳಕೆ, ಸಿಬ್ಬಂದಿಗೆ ಅಮಾನತು

ಯಾದಗಿರಿ: ಪ್ರಯಾಣಿಕರ ಪಯಣಕ್ಕೆ ಅವಶ್ಯಕವಾದ ಟಿಕೆಟ್ ನೀಡದೆ, ಸಾರ್ವಜನಿಕ ಸೇವೆಯ ಹೊಣೆಗಾರಿಕೆಯನ್ನು ಕಡೆಗಣಿಸಿದ ಘಟನೆಯೊಂದು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ಟಿಕೆಟ್ ಕೌಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಮಹೇಶ್‌ ಅವರು ತಮ್ಮ ಕರ್ತವ್ಯದ ಸಮಯದಲ್ಲಿ ಮೊಬೈಲ್‌ನಲ್ಲಿ ನಿರಂತರವಾಗಿ ಮಾತನಾಡುತ್ತಾ, ಪ್ರಯಾಣಿಕರನ್ನು ಗಂಟೆಗಟ್ಟಲೆ ಕಾಯಿಸಬಿಟ್ಟಿರುವುದು ಕಂಡುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ನೂರಾರು ಜನ ಸರತಿ ಸಾಲಿನಲ್ಲಿ ನಿಂತು ಟಿಕೆಟ್‌ಗಾಗಿ ನಿರೀಕ್ಷಿಸುತ್ತಿದ್ದ ಸಂದರ್ಭ, ಕೋಪಗೊಂಡ ಪ್ರಯಾಣಿಕನೊಬ್ಬ ಈ ದೃಶ್ಯವನ್ನು ವಿಡಿಯೋದಲ್ಲಿ ದಾಖಲೆ ಮಾಡಿಕೊಂಡು ನೇರವಾಗಿ ಸ್ಟೇಷನ್ ಮಾಸ್ಟರ್‌ ಕಳುಹಿಸುತ್ತಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆಯೇ, ಯಾದಗಿರಿ ಸ್ಟೇಷನ್ ವ್ಯವಸ್ಥಾಪಕ ಭಾಗಿರಥ ಮೀನಾ ಕೂಡಲೇ ಸ್ಪಂದನೆ ನೀಡಿ, ಸಂಬಂಧಪಟ್ಟ ವರದಿಯನ್ನು ಗುಂತಕಲ್ ರೈಲ್ವೆ ವಿಭಾಗದ ಉನ್ನತ ಅಧಿಕಾರಿಗಳಿಗೆ ರವಾನಿಸುತ್ತಾರೆ.

ಘಟನೆಯ ಗಂಭೀರತೆಯನ್ನು ಮನಗಂಡ ಗುಂತಕಲ್ ವಿಭಾಗದ ಅಧಿಕಾರಿಗಳು ತಕ್ಷಣವೇ ಮಹೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಘಟನೆ ನೈತಿಕ ಜವಾಬ್ದಾರಿಯ ಕೊರತೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ನಿರ್ಲಕ್ಷ್ಯದ ಉದಾಹರಣೆಯಾಗಿ ರೈಲ್ವೆ ಇಲಾಖೆಯ ಒಳಪರಿಶೋಧನೆಯ ಕೇದ್ರಬಿಂದು ಆಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ರೈಲ್ವೆ ಇಲಾಖೆ, ಈ ರೀತಿಯ ಉಲ್ಲಂಘನೆಗಳನ್ನು ಲಘುವಾಗಿ ತೆಗೆದುಕೊಳ್ಳದೆ, ಭದ್ರತೆ ಹಾಗೂ ಸಮಯಪಾಲನೆಯತ್ತ ಹೆಚ್ಚಿನ ಗಮನಹರಿಸುವ ನಿರೀಕ್ಷೆಯಿದೆ.

***

“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392

nazeer ahamad

Recent Posts

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ತಕ್ಷಣ ಶಾಸಕ ಸ್ಥಾನ ರದ್ದು, ಮುಂದೇನು?

ಧಾರವಾಡ ಜಿಪಂ ಮಾಜಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್…

10 hours ago

ಪೆಟ್ರೋಲ್ ಬಂಕ್ ನಕಾಶೆ ಅಪ್ಲೋಡ್‌ಗೆ ಹಣ ಬೇಡಿಕೆ – ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ವಿಜಯಪುರ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಸಿಲುಕಿರುವ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಜಾಗದ…

10 hours ago

ಖಾತೆಗಾಗಿ ಲಂಚ ಬೇಡಿಕೆ: ನೆಲಮಂಗಲದ ಕಳಲುಘಟ್ಟ ಪಿಡಿಓ ಲೋಕಾಯುಕ್ತ ಬಲೆಗೆ

ನಿವೇಶನದ ಖಾತೆ ಮಾಡಿಕೊಡಲು ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಲೋಕಾಯುಕ್ತ…

13 hours ago

ವಿಷು ಪೋಸ್ಟರ್ ವಿವಾದ: ಶ್ರೀಕೃಷ್ಣನ ಪಕ್ಕದಲ್ಲಿ ಚಿಕನ್ ಚಿತ್ರ – ರೆಸ್ಟೋರೆಂಟ್ ಮಾಲೀಕ ಆರೆಸ್ಟ್.!!!

ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್‌ನಲ್ಲಿ ಶ್ರೀಕೃಷ್ಣನ…

14 hours ago

ಹಾರ್ಮುಝ್ ಜಲಸಂಧಿ ಮತ್ತೆ ತೆರೆಯಿತು: ಯುದ್ಧ ವಿರಾಮದ ಬಳಿಕ ಜಾಗತಿಕ ತೈಲ ಮಾರುಕಟ್ಟೆಗೆ ನೆಮ್ಮದಿ

ಇರಾನ್ ಮತ್ತು ಲೆಬನಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನವಾಗುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಾರ್ಮುಝ್ ಜಲಸಂಧಿಯನ್ನು ಮತ್ತೆ ಎಲ್ಲಾ…

15 hours ago

ಇನ್‌ಸ್ಟಾಗ್ರಾಮ್ ಹನಿಟ್ರ್ಯಾಪ್: 14 ವರ್ಷದ ಬಾಲಕ ಅಪಹರಣ – 1 ಕೋಟಿ ಸುಲಿಗೆ ಯತ್ನ, ಸಂಬಂಧಿಯೇ ಮಾಸ್ಟರ್ ಮೈಂಡ್!

ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ನಡೆದ ಅಪಹರಣ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. 14…

15 hours ago