Latest

ಮ್ಯಾಟ್ರಿಮೋನಿಯಲ್ಲಿ ಸಿಕ್ಕ ಮಹಿಳೆಯನ್ನು ಮದುವೆಯಾದ; ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎಂದು ತಿಳಿದ ಮೇಲೆ ದಂಗಾದ!

ಗುಜರಾತ್‌ನ ಪೋರಬಂದರ್‌ನ ವ್ಯಕ್ತಿಯೊಬ್ಬ ಮ್ಯಾಟ್ರಿಮೋನಿಯಲ್​ ವೆಬ್​ಸೈಟ್​ನಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಅವರು ಮದುವೆಯೂ ಆಗಿದ್ದರು. ಮದುವೆಯಾದ ಕೇವಲ ಆರು ತಿಂಗಳೊಳಗೆ, ಅವನಿಗೆ ತನ್ನ ಹೆಂಡತಿ ಮೋಸ್ಟ್ ವಾಂಟೆಡ್​ ಕ್ರಿಮಿನಲ್​ ಎನ್ನುವ ಕರಾಳ ಸತ್ಯ ತಿಳಿದು ಬಂದಿದೆ.
ಹೊರಗೆ ಹೋದ ರೀಟಾ ಅನೇಕ ದಿನಗಳು ಕಳೆದರೂ ಹಿಂತಿರುಗಲಿಲ್ಲ. ಬದಲಾಗಿ ವಿಮಲ್​ಗೆ ರೀಟಾಳ ವಕೀಲರಿಂದ ಕರೆ ಬಂದಿದೆ. ರೀಟಾ ವಿರುದ್ಧ ಪ್ರಕರಣ ದಾಖಲಾಗಿದ್ದು, 1 ಲಕ್ಷ ರೂಪಾಯಿ ಜಾಮೀನು ಹಣದಲ್ಲಿ ಆಕೆಗೆ ಸಹಾಯ ಮಾಡಬೇಕು ಎಂದು ವಕೀಲರು ತಿಳಿಸಿದರು. ಪ್ರಕರಣ ಗಂಭೀರವಾಗಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ಸರಿ ಎಂದುಕೊಂಡ ವಿಮಲ್, ರೀಟಾ ಅವರ ನ್ಯಾಯಾಲಯದ ಪತ್ರಗಳನ್ನು ನೋಡಿದಾಗ ಅವರ ಮದುವೆ ಸುಳ್ಳಿನ ಮೇಲೆ ನಿರ್ಮಿಸಲ್ಪಟ್ಟಿದೆ ಎಂದು ಕಂಡುಕೊಂಡರು. ಮೊದಲನೆಯದಾಗಿ, ಆಕೆಯ ಹೆಸರು ರೀಟಾ ದಾಸ್ ಅಲ್ಲ ಎನ್ನುವುದು ಅವರ ಗಮನಕ್ಕೆ ಬಂದಿದ್ದು ಆಕೆಯ ಅಸಲಿ ಹೆಸರು ರೀಟಾ ಚೌಹಾಣ್. ವಿಮಲ್ ತನ್ನ ಹೆಂಡತಿಯೊಂದಿಗೆ ಹೆಸರಿನ ಗೊಂದಲವನ್ನು ಸ್ಪಷ್ಟಪಡಿಸಲು ನಿರ್ಧರಿಸಿದ್ದ. ಆಗ ರೀಟಾ ಆತನ ಕರೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿ ಅವನನ್ನು ಬ್ಲಾಕ್​ ಮಾಡಿದ್ದಾಳೆ. ಆತನ ಪ್ರಶ್ನೆಗಳಿಗೆ ಅವಳಲ್ಲಿ ಯಾವುದೇ ಉತ್ತರಗಳು ಇರಲಿಲ್ಲ.
ಅಸಮಾಧಾನಗೊಂಡ ವ್ಯಕ್ತಿ ಗೂಗಲ್ ಅನ್ನು ಅವಲಂಬಿಸಲು ನಿರ್ಧರಿಸಿದಾಗ ಕೆಲವೇ ಸೆಕೆಂಡುಗಳಲ್ಲಿ ತನ್ನ ಹೆಂಡತಿ ವಂಚನೆ, ಕಳ್ಳತನ, ಕೊಲೆ ಮತ್ತು ಬೇಟೆಯ ಆರೋಪಗಳನ್ನು ಹೊಂದಿರುವ ಅಪರಾಧಿ ಎಂದು ಅವನು ಅರಿತುಕೊಂಡಿದ್ದಾನೆ. ಇಷ್ಟೇ ಅಲ್ಲದೇ, ಈ ಖತರ್ನಾಕ್​ ರೀಟಾ ಈ ಹಿಂದೆ ಅನಿಲ್ ಚೌಹಾಣ್ ಎಂಬ ಸರಣಿ ಕಾರು ಕಳ್ಳನನ್ನು ಮದುವೆಯಾಗಿದ್ದಳು. ಸದ್ಯ ಜೈಲಿನಲ್ಲಿರುವ ಅನಿಲ್​ನೊಂದಿಗೆ ತನಗೆ ಯಾವುದೇ ಸಂಪರ್ಕವಿಲ್ಲ ಎಂದು ರೀಟಾ ತಿಳಿಸಿದ್ದಾಳೆ.

ಭ್ರಷ್ಟರ ಬೇಟೆ

Recent Posts

ಕಂದಾಯ ಅಧಿಕಾರಿಯ ಪುತ್ರಿ upsc ಆಕಾಂಕ್ಷಿ ಮೇಲೆ ಅತ್ಯಾಚಾರ, ಬಳಿಕ ಹತ್ಯೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮನಕಲಕುವ ಹಾಗೂ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಹಿರಿಯ ಕಂದಾಯ ಅಧಿಕಾರಿಯ 22 ವರ್ಷದ ಪುತ್ರಿಯನ್ನು…

8 hours ago

ನಿಶ್ಚಿತ ವಧುವಿನ ಭೇಟಿ: ಲೈಂಗಿಕ ಉತ್ತೇಜಕ ಮಾತ್ರೆಗಳ ಅತಿಸೇವನೆಗೆ ಯುವಕ ಬಲಿ..!

ಗುರುಗ್ರಾಮ: ನಿಶ್ಚಿತ ವಧುವನ್ನು ಭೇಟಿಯಾಗುವ ನಿರೀಕ್ಷೆಯಲ್ಲಿ ಇದ್ದ ಯುವಕನೊಬ್ಬ, ಲೈಂಗಿಕ ಉತ್ತೇಜಕ ಮಾತ್ರೆಗಳನ್ನು ಮಿತಿಮೀರಿ ಸೇವಿಸಿದ ಪರಿಣಾಮ ಹೃದಯಾಘಾತದಿಂದ ಮೃತಪಟ್ಟ…

8 hours ago

ಡಾ. ರಾಜ್‌ಕುಮಾರ್ ಸಮಾಧಿ ಭೂಮಿ ವಿವಾದ: ನಟ ಚೇತನ್ ಪೋಸ್ಟ್‌ಗೆ ಆಕ್ರೋಶ, ಪರ-ವಿರೋಧ ಚರ್ಚೆ ತೀವ್ರ

ಕನ್ನಡ ಚಿತ್ರರಂಗದ ದಿಗ್ಗಜ ಡಾ. ರಾಜ್‌ಕುಮಾರ್ ಅವರ ಸಮಾಧಿಗೆ ಮೀಸಲಾದ 2.5 ಎಕರೆ ಭೂಮಿ ವಿಚಾರವಾಗಿ ನಟ ಚೇತನ್ ಅಹಿಂಸಾ…

22 hours ago

ಪ್ರೇಮ ವಿಚಾರಕ್ಕೆ ರಕ್ತರಂಜಿತ ತಿರುವು: ಶಿವಮೊಗ್ಗದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಭೀಕರ ದಾಳಿ

ಪ್ರೀತಿಯ ವಿಚಾರವಾಗಿ ಉಂಟಾದ ಮನಸ್ತಾಪವು ಭೀಕರ ಹಲ್ಲೆಗೆ ತಿರುಗಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಯುವಕರ ಗುಂಪೊಂದು 17 ವರ್ಷದ…

22 hours ago

ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಪ್ರೇಮ ತ್ರಿಕೋನ ಡ್ರಾಮಾ: ನಡುರಸ್ತೆಯಲ್ಲಿ ಯುವಕರ ಗಲಾಟೆ ವೈರಲ್

ಬೆಂಗಳೂರು ನಗರದ ಪ್ರಮುಖ ವಸತಿ ಪ್ರದೇಶಗಳಲ್ಲಿ ಒಂದಾದ HSR Layout ಇತ್ತೀಚೆಗೆ ವಿಭಿನ್ನ ಕಾರಣಕ್ಕೆ ಸುದ್ದಿಯಲ್ಲಿದೆ. ಯುವತಿಯೊಬ್ಬಳ ವಿಚಾರವಾಗಿ ಹಳೆಯ…

22 hours ago

ಮಾದಕ ವ್ಯಸನದ ಬೆನ್ನೇರಿ ಮಗನಿಂದ ತಾಯಿ ಹತ್ಯೆ: ಕಣ್ಣೂರಿನಲ್ಲಿ ಹೃದಯ ಕಲಕುವ ಘಟನೆ

ಕೇರಳದ ಕಣ್ಣೂರು ಜಿಲ್ಲೆ ವ್ಯಾಪ್ತಿಯ ಕೇಳಕಂ ಸಮೀಪದ ಕಾಣಿಚಾರ್‌ನಲ್ಲಿ ಮನಕಲಕುವ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಮಾದಕ ವ್ಯಸನಕ್ಕೆ ಒಳಗಾಗಿದ್ದ…

22 hours ago