“ಪ್ರೀತಿ ಕುರುಡು” ಎನ್ನುವ ಮಾತು ಮತ್ತೆ ಸಾಬೀತಾಗುವಂತ ಘಟನೆ ಒಂದರಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಆರಂಭವಾದ ಪ್ರೇಮ ಕಥೆ ದುರ್ಘಟನೆಗೆ ತಲುಪಿದೆ. ರಿಯಲ್ ಎಸ್ಟೇಟ್ ಉದ್ಯಮಿ ಸುದೀಪ್ ಶೆಟ್ಟಿ ಮತ್ತು ತುಳು ರಂಗಭೂಮಿ ನಟಿ ಸೌಮ್ಯಾ ಶೆಟ್ಟಿ ಅವರ ಸಂಬಂಧ ಈಗ ದುರಂತ ಅಂತ್ಯ ಕಂಡಿದೆ. ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಸುದೀಪ್ ಮೃತಪಟ್ಟಿದ್ದು, ಈ ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ.
ಇವರಿಬ್ಬರ ಪರಿಚಯ Instagram ಮೂಲಕ ಆರಂಭವಾಗಿ, ನಂತರ ಅದು ಪ್ರೀತಿಯಾಗಿ ಬೆಳೆದಿತ್ತು. ಮದುವೆಗೆ ನಿರ್ಧರಿಸಿದ ಅವರು ಮನೆವರಿಗೂ ವಿಷಯ ತಿಳಿಸಿದ್ದರು. ಆದರೆ ಸುದೀಪ್ ಕುಟುಂಬದಿಂದ ಈ ಸಂಬಂಧಕ್ಕೆ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ.
ಕುಟುಂಬದ ವಿರೋಧದಿಂದ ಮನನೊಂದು ಸುದೀಪ್ ಜೂನ್ 16ರಂದು ವಿಷ ಸೇವಿಸಿದ್ದಾನೆ ಎಂಬ ಅಚ್ಚರಿಯ ಮಾಹಿತಿ ಹೊರಬಂದಿದೆ. ಆದರೆ ಈ ವಿಷಯವನ್ನು ಯಾರಿಗೂ ತಿಳಿಸದೆ, ಅದೇ ಪರಿಸ್ಥಿತಿಯಲ್ಲಿ ಸೌಮ್ಯರನ್ನು ಭೇಟಿ ಮಾಡಿ ಮದುವೆಗೆ ಒಪ್ಪಿಸಿ, ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾನೆ. ಮದುವೆಯ ನಂತರ ಕೆಲವು ದಿನಗಳು ಸಹಜವಾಗಿದ್ದರೂ, ನಂತರ ಆತನ ಆರೋಗ್ಯ ಏಕಾಏಕಿ ಹದಗೆಟ್ಟಿದೆ. ಆಸ್ಪತ್ರೆಗೆ ದಾಖಲಿಸಿದ ಬಳಿಕ ಕೊನೆಯ ಕ್ಷಣದಲ್ಲಿ ತಾನು ವಿಷ ಸೇವಿಸಿದ್ದಾಗಿ ಆತ ಹೇಳಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಇದಕ್ಕೆ ನಡುವೆ, ಸುದೀಪ್ ಪೋಷಕರು ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಮದುವೆಯಾದ ಮಹಿಳೆ ಈಗಾಗಲೇ ಹಲವು ಮದುವೆಗಳಾಗಿ ಮೋಸ ಮಾಡಿದ್ದಾಳೆ ಎಂದು ಆರೋಪಿಸಿ, “ಅವಳೇ ನಮ್ಮ ಮಗನ ಸಾವಿಗೆ ಕಾರಣ” ಎಂದು ಅವರು ಆರೋಪಿಸಿದ್ದಾರೆ. ಮತ್ತೊಂದೆಡೆ, ಪತ್ನಿ ಈ ಆರೋಪಗಳನ್ನು ತಳ್ಳಿ ಹಾಕಿದ್ದು, “ಕುಟುಂಬದ ವಿರೋಧದಿಂದ ಆತ ಮನನೊಂದು ವಿಷ ಸೇವಿಸಿದ್ದಾನೆ, ಇದರಲ್ಲಿ ನನ್ನ ಪಾತ್ರವಿಲ್ಲ” ಎಂದು ಹೇಳಿದ್ದಾರೆ.
ಇನ್ನೂ ಈ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಉತ್ತರಿಸಬೇಕಿವೆ. ವಿಷ ಸೇವಿಸಿದ 13 ದಿನಗಳ ಬಳಿಕ ಸಾವು ಸಂಭವಿಸಿದ್ದು ಹೇಗೆ? ಆತ ಸೇವಿಸಿದ ವಿಷ ಯಾವುದು? ಅದು ನಿಧಾನವಾಗಿ ದೇಹದ ಮೇಲೆ ಪರಿಣಾಮ ಬೀರಿದಿತೇ ಅಥವಾ ಮದುವೆಯ ನಂತರ ಬೇರೆ ಏನಾದರೂ ನಡೆದಿದೆಯೇ? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.
ಈ ಸಂಬಂಧ ಈಗ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಯುವ ಉದ್ಯಮಿಯ ಈ ದುರಂತ ಸಾವು ಆತ್ಮಹತ್ಯೆಯೇ ಅಥವಾ ಇದಕ್ಕಿಂತ ದೊಡ್ಡ ಸಂಚಿಯ ಭಾಗವೇ ಎಂಬುದು ತನಿಖೆಯಿಂದಲೇ ಹೊರಬರಬೇಕಿದೆ.
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…