ಕನ್ನಡ ಸಿನಿ ಜಗತ್ತಿನಲ್ಲಿ ಸಂಚಲನ ಮೂಡಿಸಿರುವ 3 ಕೋಟಿ ರೂಪಾಯಿ ವಂಚನೆ ಆರೋಪಕ್ಕೆ ನಟ ಧ್ರುವ ಸರ್ಜಾ ಅವರ ತಂಡದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 2016ರ ಜಗ್ಗು ದಾದ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ, ಧ್ರುವ ಸರ್ಜಾ ವಿರುದ್ಧ ಹಣ ಪಡೆದು ಸಿನಿಮಾ ಮಾಡದಿರುವುದಾಗಿ ಆರೋಪ ಮಾಡಿದ್ದರು.
ಆದರೆ, ಈ ಆರೋಪವನ್ನು ಧ್ರುವ ಸರ್ಜಾ ಅವರ ಮ್ಯಾನೇಜರ್ ಅಶ್ವಿನ್ ತಳ್ಳಿಹಾಕಿದ್ದಾರೆ. “ರಾಘವೇಂದ್ರ ಹೆಗ್ಡೆ ಮಾಡಿದ ಆರೋಪ ಸಂಪೂರ್ಣ ಸುಳ್ಳು. 2018ರಲ್ಲಿ ಸೋಲ್ಜರ್ ಸಿನಿಮಾ ಮಾಡಲು ಒಟ್ಟು ₹3.15 ಕೋಟಿ ಹಣ ನೀಡಲಾಗಿತ್ತು. ಇದರಲ್ಲಿ ನಂದಿನಿ ಎಂಟರ್ಟೇನ್ಮೆಂಟ್ನಿಂದ ₹20 ಲಕ್ಷ ಹಾಗೂ ರಾಘವೇಂದ್ರ ಅವರಿಂದ ₹2.95 ಕೋಟಿ ಬಂದಿತ್ತು. ನಂದಿನಿ ಎಂಟರ್ಟೇನ್ಮೆಂಟ್ ಮತ್ತು ರಾಘವೇಂದ್ರ ನಡುವೆ ಸಮಸ್ಯೆ ಉಂಟಾದ ಕಾರಣ, ₹20 ಲಕ್ಷವನ್ನು ನಾವು ತಕ್ಷಣ ಹಿಂದಿರುಗಿಸಿದ್ದೇವೆ. ಉಳಿದ ಹಣಕ್ಕಾಗಿ ಸಿನಿಮಾ ಮಾಡುವ ಯೋಜನೆ ಮುಂದುವರಿಯುತ್ತಿತ್ತು. ಅವರು ಸ್ವತಃ ಮೂರು ತಿಂಗಳ ಕಾಲಾವಕಾಶ ಕೇಳಿದ್ದರು” ಎಂದು ಅಶ್ವಿನ್ ತಿಳಿಸಿದ್ದಾರೆ.
ಅವರ ಪ್ರಕಾರ, ರಾಘವೇಂದ್ರ ಅವರು ನಾಲ್ಕೂವರೆ ವರ್ಷಗಳ ನಂತರ ಮಾತ್ರ ಚಿತ್ರದ ಸ್ಕ್ರಿಪ್ಟ್ನ ಮೊದಲಾರ್ಧ ಕಳುಹಿಸಿದ್ದು, ಎರಡನೇ ಭಾಗ ಇನ್ನೂ ಬರಲಿಲ್ಲ. “ನಾವು ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಆದರೆ, ಅವರು ಒಂದೇ ವೇಳೆ ಸಿನಿಮಾ ಬಜೆಟ್ ಹೆಚ್ಚಾಗಿದೆ, ಕನ್ನಡದಲ್ಲಿ ಬೇಡ, ತೆಲುಗು ಅಥವಾ ಹಿಂದಿಯಲ್ಲಿ ಮಾಡೋಣ ಎಂಬ ಬೇಡಿಕೆ ಇಟ್ಟರು. ಧ್ರುವ ಇದಕ್ಕೆ ಒಪ್ಪದೆ, ಕನ್ನಡದಲ್ಲೇ ಮಾಡಬೇಕು ಎಂದು ಪಟ್ಟು ಹಿಡಿದರು” ಎಂದಿದ್ದಾರೆ.
ಜೂನ್ 28ರಂದು ನಡೆದ ಸಭೆಯಲ್ಲೂ ಇದೇ ವಿಚಾರ ಮರುಕಳಿಸಿತು. ಕೊನೆಗೆ ಕನ್ನಡದಲ್ಲಿ ಸಿನಿಮಾ ಮಾಡುವ ತೀರ್ಮಾನ ಕೈಗೊಳ್ಳಲಾಯಿತು ಮತ್ತು ಅಕ್ಟೋಬರ್ನಿಂದ ಚಿತ್ರೀಕರಣ ಆರಂಭಿಸಲು ಒಪ್ಪಂದವಾಯಿತು. ಆದರೆ, ಜುಲೈನಲ್ಲಿ ರಾಘವೇಂದ್ರ ನೋಟಿಸ್ ಕಳುಹಿಸಿದ್ದರು. “ನಾವು ಯಾವಾಗಲೂ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧವಾಗಿದ್ದೇವೆ. ಹಣ ಕೊಡೋದಿಲ್ಲ ಎಂದು ಎಂದಿಗೂ ಹೇಳಿಲ್ಲ. ಅವರೇ ವಿಚಾರವನ್ನು ಮುಂದೂಡುತ್ತಿದ್ದರು. ಈಗ ಕೋರ್ಟ್ಗೆ ಹೋಗಿದ್ದಾರೆ. ಎಲ್ಲಾ ವಿಚಾರಗಳು ಕೋರ್ಟ್ನಲ್ಲಿ ಇತ್ಯರ್ಥವಾಗಲಿವೆ” ಎಂದು ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.
ಈ ವಿವಾದ ಈಗ ನ್ಯಾಯಾಲಯದ ಹಾದಿ ಹಿಡಿದಿದ್ದು, ಅಂತಿಮ ತೀರ್ಮಾನ ಕೋರ್ಟ್ನಲ್ಲಿ ಹೊರಬೀಳಬೇಕಿದೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…