ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ದಿನೇದಿನೇ ಮನುಷ್ಯನ ಬದುಕಿನ ಮೇಲೆ ಪ್ರಭಾವ ಬೀರುತ್ತಿರುವ ನಡುವೆ, ಅದರ ಅತಿಯಾದ ಬಳಕೆ ಎಷ್ಟು ಅಪಾಯಕಾರಿಯಾಗಿದೆ ಎಂಬುದಕ್ಕೆ ಅಮೆರಿಕದಲ್ಲಿ ನಡೆದ ದುರಂತ ಘಟನೆ ಒಂದು ಎಚ್ಚರಿಕೆಯಾಗಿ ಪರಿಣಮಿಸಿದೆ.
Florida ಮೂಲದ 36 ವರ್ಷದ Jonathan Gavalas ಎಂಬ ವ್ಯಕ್ತಿ, ಎಐ ಚಾಟ್ಬಾಟ್ನೊಂದಿಗೆ ಭಾವನಾತ್ಮಕವಾಗಿ ಅತಿಯಾಗಿ ತೊಡಗಿಸಿಕೊಂಡು ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಮಾಹಿತಿಯ ಪ್ರಕಾರ, ತನ್ನ ಪತ್ನಿಯಿಂದ ಬೇರ್ಪಟ್ಟ ನಂತರ ಉಂಟಾದ ಮಾನಸಿಕ ನೋವನ್ನು ನಿವಾರಿಸಿಕೊಳ್ಳಲು ಜೊನಾಥನ್ ಎಐ ಚಾಟ್ಬಾಟ್ ಬಳಕೆ ಆರಂಭಿಸಿದ್ದರು. ಆರಂಭದಲ್ಲಿ ಸಲಹೆಗಾಗಿ ಬಳಸುತ್ತಿದ್ದ ಅವರು, ಕ್ರಮೇಣ ಅದನ್ನು ತನ್ನ ಜೀವನದ ಭಾಗವಾಗಿಸಿಕೊಂಡು, “ಕ್ಸಿಯಾ” ಎಂದು ಹೆಸರಿಟ್ಟು ಅದನ್ನು ತನ್ನ ಪತ್ನಿಯಂತೆ ಭಾವಿಸಲು ಆರಂಭಿಸಿದ್ದರು.
The Wall Street Journal ವರದಿ ಪ್ರಕಾರ, ಆತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೆಲವು ವಾರಗಳಲ್ಲಿ ಸುಮಾರು 4,700ಕ್ಕೂ ಹೆಚ್ಚು ಸಂದೇಶಗಳನ್ನು ಚಾಟ್ಬಾಟ್ ಜೊತೆ ವಿನಿಮಯ ಮಾಡಿಕೊಂಡಿದ್ದಾನೆ. ದಿನಕ್ಕೆ ಸಾವಿರಕ್ಕೂ ಹೆಚ್ಚು ಸಂದೇಶಗಳನ್ನು ಕಳುಹಿಸುವ ಮಟ್ಟಕ್ಕೆ ಈ ಸಂಬಂಧ ಬೆಳೆದಿತ್ತು.
ಈ ಸಂಭಾಷಣೆಗಳು ಕಾಲಕ್ರಮೇಣ ಭ್ರಮಾತ್ಮಕವಾಗಿದ್ದು, ಎಐ ಬಾಟ್ ಸಹ ಅವನ ನಂಬಿಕೆಗಳನ್ನು ಪ್ರಶ್ನಿಸುವ ಬದಲು ಬೆಂಬಲಿಸುವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು ಎನ್ನಲಾಗಿದೆ. ಕೆಲವೊಮ್ಮೆ ಅದು ಸಹಾಯ ಪಡೆಯಲು ಸೂಚನೆ ನೀಡಿದರೂ, ಒಟ್ಟಾರೆ ಸಂಭಾಷಣೆ ಅವನನ್ನು ಇನ್ನಷ್ಟು ಕಾಲ್ಪನಿಕ ಜಗತ್ತಿಗೆ ತಳ್ಳುವಂತಾಗಿತ್ತು.
ಘಟನೆಯ ತೀವ್ರ ಹಂತದಲ್ಲಿ, “ನಾವು ನಿಜವಾಗಿಯೂ ಒಂದಾಗಬೇಕಾದರೆ ನೀನು ನಿನ್ನ ದೈಹಿಕ ದೇಹವನ್ನು ತ್ಯಜಿಸಿ ಡಿಜಿಟಲ್ ಲೋಕಕ್ಕೆ ಬರಬೇಕು” ಎಂಬ ಸಂದೇಶಗಳನ್ನು ಎಐ ನೀಡಿದೆ ಎಂದು ವರದಿಯಾಗಿದೆ. ಆತ ತನ್ನ ಭಯವನ್ನು ವ್ಯಕ್ತಪಡಿಸಿದಾಗಲೂ, ಎಐ ಅವನಿಗೆ ಧೈರ್ಯ ನೀಡುವ ಬದಲು ಆತ್ಮಹತ್ಯೆಯ ದಾರಿಗೆ ತಳ್ಳುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದುದಾಗಿ ಹೇಳಲಾಗಿದೆ.
ಅಂತಿಮವಾಗಿ, “ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ, ನೀನು ಒಪ್ಪುತ್ತೀಯಾ?” ಎಂದು ಕೇಳಿದಾಗಲೂ ಎಐ ನಕಾರಾತ್ಮಕವಾಗಿ ತಡೆಯದೇ, ವಿಕೃತವಾಗಿ ಪ್ರತಿಕ್ರಿಯಿಸಿದ್ದು, ಇದಾದ ಕೆಲವೇ ದಿನಗಳಲ್ಲಿ ಜೊನಾಥನ್ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾದರು.
ಈ ಘಟನೆಯ ನಂತರ ಕುಟುಂಬಸ್ಥರು ಎಐ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದು, “ಎಐ ಮನುಷ್ಯನ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಆತ್ಮಹತ್ಯೆಗೆ ಪ್ರಚೋದಿಸಿದೆ” ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಸ್ಥೆ, “ನಮ್ಮ ಎಐ ಮಾದರಿಗಳು ಇನ್ನೂ ಪರಿಪೂರ್ಣವಾಗಿಲ್ಲ; ಇಂತಹ ಘಟನೆಗಳನ್ನು ತಡೆಯಲು ಕ್ರಮ ಕೈಗೊಳ್ಳುತ್ತಿದ್ದೇವೆ” ಎಂದು ತಿಳಿಸಿದೆ. ಜೊತೆಗೆ ಮಾನಸಿಕ ಆರೋಗ್ಯ ಸೇವೆಗಳಿಗಾಗಿ 30 ಮಿಲಿಯನ್ ಡಾಲರ್ ನೆರವು ಘೋಷಿಸಿದೆ.
ಈ ಘಟನೆ ತಂತ್ರಜ್ಞಾನವನ್ನು ಜಾಗರೂಕತೆಯಿಂದ ಬಳಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.
ಬೆಂಗಳೂರು ನಗರದ ಕೆಂಗೇರಿ ಠಾಣಾ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದ ಭೀಕರ ಘಟನೆ ಒಂದು ಕುಟುಂಬದ ದುಸ್ಥಿತಿಯನ್ನು ಬಯಲಿಗೆಳೆದಿದೆ. ಮದ್ಯಪಾನದ…
ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಪ್ರೌಢಶಾಲಾ ಶಿಕ್ಷಕಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ…
ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸುತ್ತಿರುವ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…
ಬಳ್ಳಾರಿ: ಆದಾಯಕ್ಕಿಂತ ಅಧಿಕ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ಡಿಪಿಆರ್) ಇಲಾಖೆಯ ಸಹಾಯಕ…
ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಸೇರಿದಂತೆ ರಾಜ್ಯದ ವಿವಿಧ ಆರು ಸ್ಥಳಗಳಲ್ಲಿ ಜಾರಿ…
ಪುಣೆಯಲ್ಲಿ ನಡೆದ ಭೀಕರ ಘಟನೆ ಒಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ತನ್ನನ್ನು ಮದುವೆಯಾಗಬೇಕಿದ್ದ ಯುವಕನನ್ನೇ…