Categories: Latest

ಹುಚ್ಚುನಾಯಿ ಕಡಿತ, 13 ಜನಕ್ಕೆ ಗಾಯ.

ಪಟ್ಟಣದಲ್ಲಿ ಹುಚ್ಚುನಾಯಿ ಹಾವಳಿಯಿಂದಾಗಿ 13 ಜನಕ್ಕೆ ಕಚ್ಚಿ ಪಟ್ಟಣವನ್ನು ಬೆಚ್ಚಿ ಬೀಳಿಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

ಜಮ್ಮಾ ಮಸೀದಿ, ಮುದಕನಕಟ್ಟಿ, ತೇರು ಬಯಲು, ಮುಖ್ಯ ರಸ್ತೆ ಗಳಲ್ಲಿ, ಈ ನಾಯಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ವಿಪರೀತ ಸಮಸ್ಯೆ ಉಂಟುಮಾಡಿ ಓಡಾಡಲು ಭಯಭೀತರಾಗುವಂತೆ ಮಾಡಲಾಗಿದೆ.

ಹುಚ್ಚು ನಾಯಿ ಕಡಿತದಿಂದಾಗಿ ಪ್ರಥಮ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆ ತೆರಳಿದ ಗಾಯಾಳುಗಳಿಗೆ ಅಲ್ಲಿನ ವ್ಯಂಟರ್ ರೇಬಿಸ್,ಟಿ.ಟಿ.ಅಂತಹ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ಹೇಳಲಾಗಿದೆ ಸಂಬಂಧ ಪಟ್ಟ ಇಲಾಖೆಯವರು ನಾಯಿಗಳನ್ನು ನಿಯಂತ್ರಣದಲ್ಲಿ ಇಡುವಂತೆ ಸಾರ್ವಜನಿಕರ ಒತ್ತಾಯ ವಾಗಿದೆ.

ವರದಿ :ಮಣಿಕಂಠ ಬಿ

***

ನಾಯಿಗಳನ್ನು ಸುರಕ್ಷಿತವಾಗಿ ಇಡಲು ಮತ್ತು ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ
ಸಮಸ್ಯೆ ಆಗದಂತೆ ಕ್ರಮ ವಹಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಸಹ ನಾಯಿಗಳ ಬಗ್ಗೆ ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರು ಮುಂಜಾಗ್ರತವಾಗಿ ಯಾವುದೆ ಕ್ರಮ ಕೈಗೊಂಡಿಲ್ಲ ಹಾಗೇ ಸರ್ಕಾರಿ ಆಸ್ಪತ್ರೆಯಲ್ಲಿ ಇದರ ಸಂಬಂಧ ಸರಿಯಾದ ಚಿಕಿತ್ಸೆ ಸಹ ಇಲ್ಲದೆ ಇರುವುದು ತುಂಬಾ ಬೇಸರದ ವಿಚಾರ

-ಸಂದೀಪ
ವಕೀಲರು.

***

ಇದು ಹುಚ್ಚುನಾಯಿ ಅಥವಾ ಸಾಮಾನ್ಯ ನಾಯಿ ಅಂತ ಹೇಳಲು ಆಗುವುದಿಲ್ಲ ಇದು ನಿನ್ನೆ ರಾತ್ರಿ ಏಕಾಏಕಿ ಸಾರ್ವಜನಿಕರ ಮೇಲೆ ದಾಳಿ ಮಾಡಿದೆ ತಕ್ಷಣ ಆ ನಾಯಿಯನ್ನು ಹಿಡಿದು ಮುಂದೆ ಆಗುವ ಅನಾಹುತವನ್ನು ತಪ್ಪಿಸಲಾಗಿದೆ ತೊಂದರೆಯಾದ ಗಾಯಾಳುಗಳಿಗೆ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

-ಅನುಷಾ
ಪ.ಪಂ.ಕಿರಿಯ ಆರೋಗ್ಯ ನಿರೀಕ್ಷಕರು.

ಭ್ರಷ್ಟರ ಬೇಟೆ

Recent Posts

ನನ್ನ ಮಗುವನ್ನು ಬೆಳೆಸಲು ನಾನು ಯಾರ ಜೊತೆಗೆ ಬೇಕಾದರೂ ಮಲಗಲು ಸಿದ್ಧ- ‘ವಡಾ ಪಾವ್ ಗರ್ಲ್’

ಸಾಮಾಜಿಕ ಮಾಧ್ಯಮಗಳಲ್ಲಿ ‘ವಡಾ ಪಾವ್ ಗರ್ಲ್’ ಎಂದು ಖ್ಯಾತಿ ಪಡೆದಿರುವ ಚಂದ್ರಿಕಾ ದೀಕ್ಷಿತ್ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಅವರು…

3 hours ago

ನಕಲಿ ದಾಖಲೆಗಳಿಂದ ಉದ್ಯೋಗ ಪಡೆಯಲು ಯತ್ನ – ರಾಜ್ಯದಲ್ಲಿ 20 ಅತಿಥಿ ಉಪನ್ಯಾಸಕರು ಪತ್ತೆ..!

ರಾಜ್ಯದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಉದ್ಯೋಗ ಪಡೆಯಲು ಪ್ರಯತ್ನಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಉನ್ನತ ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ…

16 hours ago

ರಾಜ್ಯದಲ್ಲಿ 5764 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಕಂಡುಬಂದಿದೆ. ನೇಮಕಾತಿ ಪ್ರಕ್ರಿಯೆಯನ್ನು ವೇಗಗೊಳಿಸಲು…

19 hours ago

ತಂಗಿ ಜೊತೆ ಬಂದ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿ ಮತಾಂತರಕ್ಕೆ ಒತ್ತಾಯ

ಉತ್ತರ ಪ್ರದೇಶದ ಬರೇಲಿ ನಗರದಲ್ಲಿ ಅಪ್ರಾಪ್ತೆಯ ಮೇಲೆ ನಡೆದ ದೌರ್ಜನ್ಯ ಪ್ರಕರಣವೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಶಾಲೆಯ ಸ್ನೇಹದ ನೆಪದಲ್ಲಿ…

1 day ago

ಮದುವೆ ರದ್ದು ಮಾಡಿದ ದ್ವೇಷ: ಹೆಚ್‌ಐವಿ ರಕ್ತ ಇಂಜೆಕ್ಟ್ ಮಾಡಿದ ಯುವಕ..!

ತೆಲಂಗಾಣದ ಹೈದರಾಬಾದ್ ನಗರದ ಪೋಚರಂ ಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆ ನಿಶ್ಚಯವಾದ ಬಳಿಕ ತನ್ನಿಗೆ ಹೆಚ್‌ಐವಿ (HIV)…

1 day ago

ಅತ್ತಿಗೆ ಮೈದುನನ ಲವ್ ಟ್ರ್ಯಾಕ್ ಗೆ ಅಡ್ಡಿಯಾದ ಅಮ್ಮನ ಟ್ರ್ಯಾಕ್ ಕ್ಲೋಸ್

ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಘಟನೆ ಸಂಚಲನ ಮೂಡಿಸಿದೆ. ಆರಂಭದಲ್ಲಿ ಸಾಮಾನ್ಯ ಕಸದ…

1 day ago