Categories: CorruptionLatest

33 ಕೋಟಿ ಅನುದಾನದಲ್ಲಿ 23 ಕೋಟಿ ರೂ. ದೋಚಿದ ಆರೋಪ: ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗಳ ಮೇಲೆ ಲೋಕಾಯುಕ್ತ ದಾಳಿ

600 ಮನೆಗಳ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಲಾಗಿದ್ದ 33 ಕೋಟಿ ರೂಪಾಯಿ ಅನುದಾನದಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪದ ಹಿನ್ನೆಲೆ, ಬೆಳಗಾವಿ ಕೊಳಚೆ ನಿರ್ಮೂಲನಾ ಮಂಡಳಿಗೆ ಸಂಬಂಧಿಸಿದ ಎಂಟು ಕಡೆಗಳಲ್ಲಿ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸದೇ ಸುಮಾರು 23 ಕೋಟಿ ರೂಪಾಯಿ ದುರ್ಬಳಕೆ ಮಾಡಲಾಗಿದೆ ಎಂಬ ದೂರು ದಾಖಲಾಗಿದ್ದು, ಅದರ ಆಧಾರದ ಮೇಲೆ ಬೆಳಗಾವಿ ಲೋಕಾಯುಕ್ತ ಎಸ್‌ಪಿ ಪ್ರಶನ್ ದೇಸಾಯಿ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಬೆಂಗಳೂರು ನಗರ, ಧಾರವಾಡ, ರಾಮದುರ್ಗ, ವಿಜಯಪುರ, ಹುಬ್ಬಳ್ಳಿ ಸೇರಿದಂತೆ ವಿವಿಧ ಸ್ಥಳಗಳಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿಗಳ ಕಚೇರಿಗಳು ಮತ್ತು ಸಂಬಂಧಿತ ಸ್ಥಳಗಳಲ್ಲಿ ಅಧಿಕಾರಿಗಳು ಏಕಕಾಲದಲ್ಲಿ ಶೋಧ ನಡೆಸಿದರು.

ದಾಳಿಯ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಬಿಲ್‌ಗಳು, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳಚೆ ನಿರ್ಮೂಲನಾ ಅಭಿವೃದ್ಧಿ ಇಲಾಖೆಯ ನಿವೃತ್ತ ಎಇಇ ಶಂಭುಲಿಂಗಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್ ಲಮಾಣಿ, NTCC ಮ್ಯಾನೇಜರ್ ಎನ್. ಪ್ರಸಾದ್ ಹಾಗೂ ವಿಜಯಪುರ ಮೂಲದ ಗುತ್ತಿಗೆದಾರ ಗಿರಮಲಪ್ಪ ಜೋಗೂರ ವಿರುದ್ಧ ಪ್ರಕರಣ ದಾಖಲಾಗಿದೆ.

ಭ್ರಷ್ಟರ ಬೇಟೆ

Recent Posts

ರಸ್ತೆಯಲ್ಲಿ ನಮಾಜ್‌ಗೆ ಖಡಕ್‌ ಎಚ್ಚರಿಕೆ: “ನಿಯಮ ಪಾಲಿಸಿ, ಇಲ್ಲವೇ ಪರಿಣಾಮ ಎದುರಿಸಿ” ಎಂದ ಯೋಗಿ

ಉತ್ತರ ಪ್ರದೇಶ ಮುಖ್ಯಮಂತ್ರಿ Yogi Adityanath ಅವರು ರಸ್ತೆಗಳಲ್ಲಿ ನಮಾಜ್‌ ಸಲ್ಲಿಸುವ ಪದ್ಧತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಾರ್ವಜನಿಕ…

14 hours ago

ವೈರ್ ಕಳ್ಳತನ ಮಾಡ್ತಿದ್ದ ನಾಲ್ವರ ಬಂಧನ

ಅಲ್ಯೂಮಿನಿಯಂ ವೈರ್ ನ್ನು ಇತ್ತೀಚಿಗೆ ಕಿಡಿಗೇಡಿಗಳು ಕಳ್ಳತನ ಮಾಡಿ ಬೇರೆ ಕಡೆ ಸಾಗಿಸುತ್ತಿರುವ ಕಳ್ಳರನ್ನು ಗುಪ್ತ ಮಾಹಿತಿ ಆಧಾರದ ಮೇರೆಗೆ…

2 days ago

ಮೂಢನಂಬಿಕೆಯ ಮಧ್ಯೆ ಹೊರಬಿದ್ದ ಅಪ್ರಾಪ್ತೆಯ ಗರ್ಭಧಾರಣೆ; ಟ್ರ್ಯಾಕ್ಟರ್ ಚಾಲಕನ ಬಂಧನ

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಚೋಗಳೇರಿ ಹಟ್ಟಿ ಗ್ರಾಮದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯ…

2 days ago

8 ಸಾವಿರ ರೂ. ಬಾಡಿಗೆಗಾಗಿ ಪತ್ನಿ-ಮಗಳನ್ನೇ ನರಕಕ್ಕೆ ತಳ್ಳಿದ ತಂದೆ! ಗುಜರಾತ್‌ನಲ್ಲಿ ಅಮಾನವೀಯ ಕೃತ್ಯ

ಗುಜರಾತ್‌ನ ಮೋರ್ಬಿ ಜಿಲ್ಲೆಯಲ್ಲಿ ಮಾನವೀಯತೆಯನ್ನೇ ನಾಚಿಸುವಂತಹ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಕೇವಲ ನಾಲ್ಕು ತಿಂಗಳ ಮನೆ ಬಾಡಿಗೆ ಪಾವತಿಸಲು…

3 days ago

300 ಪುಟಗಳ ಭೀಕರ ವರದಿ! ಮೃತದೇಹಗಳ ಮೇಲೂ ಲೈಂಗಿಕ ದೌರ್ಜನ್ಯ?

2023ರ ಅಕ್ಟೋಬರ್ 7ರಂದು ನಡೆದ ದಾಳಿಯ ಬಳಿಕ ಹಮಾಸ್ ಸಂಘಟನೆಯ ವಶದಲ್ಲಿದ್ದ ಸೆರೆಯಾಳುಗಳ ಮೇಲೆ ಅಮಾನವೀಯ ಲೈಂಗಿಕ ದೌರ್ಜನ್ಯ ಹಾಗೂ…

5 days ago

ಮೋದಿ ಭೇಟಿ ಮುನ್ನ ಜಿಲೆಟಿನ್-ಟೈಮರ್ ಪತ್ತೆ! ಉಗ್ರ ಸಂಚೋ? ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಗೆ ಮುನ್ನವೇ ಮಾರ್ಗದ ಸಮೀಪ ಜಿಲೆಟಿನ್ ಕಡ್ಡಿ ಪತ್ತೆಯಾಗಿದ್ದ ಘಟನೆ ಹೊಸ ಆತಂಕಕ್ಕೆ…

7 days ago