Politics

“ನನ್ನ ಸೋಲಿಗೆ ಸ್ಥಳೀಯ ಕಾಂಗ್ರೆಸ್ ನಾಯಕರೇ ಕಾರಣ” : ಅವರನ್ನು ಸೋಲಿಸುವುದು ಎರಡು ಸೆಕೆಂಡ್‌ಗಳ ಕೆಲಸ- ಇಕ್ಬಾಲ್ ಅನ್ಸಾರಿ

ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಅನುಭವಿಸಿದ ಎರಡು ಚುನಾವಣಾ ಸೋಲುಗಳಿಗೆ ಕೊಪ್ಪಳ, ಕನಕಗಿರಿ ಹಾಗೂ ಯಲಬುರ್ಗಾ ಕ್ಷೇತ್ರಗಳ ಸ್ಥಳೀಯ ಕಾಂಗ್ರೆಸ್ ನಾಯಕರೇ ನೇರ ಹೊಣೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ವಿಶ್ವಾಸದಿಂದಲೇ ತಾವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ ಎಂದು ಹೇಳಿದ ಅನ್ಸಾರಿ, ಪಕ್ಷವು ಎರಡು ಬಾರಿ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡಿದ್ದರೂ, ಸ್ಥಳೀಯ ನಾಯಕರು ತಮ್ಮ ಗೆಲುವಿಗೆ ಸಹಕರಿಸುವ ಬದಲು ಸೋಲಿಸಲು ಒಳಗಿನಿಂದಲೇ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮನ್ನು ಸೋಲಿಸಿದವರನ್ನು ರಾಜಕೀಯವಾಗಿ ಸೋಲಿಸುವುದು ಕೇವಲ ಎರಡು ಸೆಕೆಂಡ್‌ಗಳ ಕೆಲಸ ಎಂದು ಹೇಳಿದ ಅನ್ಸಾರಿ, ಶುಕ್ರವಾರ ಮಸೀದಿಯಲ್ಲಿ ಒಂದು ಮನವಿ ಪತ್ರ ಓದಿಸಿದರೆ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಬಹುದು ಎಂದು ಹೇಳಿದರು. ಆದರೆ ತಾವು ದೇವರ ಭಕ್ತರಾಗಿದ್ದು, ಅಂತಹ ದಾರಿಯನ್ನು ಅನುಸರಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ತಾವು ಜೆಡಿಎಸ್ ಅಥವಾ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, ತಾವು ಈಗಲೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಸುಳ್ಳು ಸುದ್ದಿಗಳಿಗೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಭ್ರಷ್ಟರ ಬೇಟೆ

Recent Posts

5 ವರ್ಷದ ಪ್ರೀತಿ ಮದುವೆಯಾಗಿ ಒಂದಾದ ಜೋಡಿ; ಈಗ ಹೆತ್ತವರಿಂದಲೇ ಜೀವಭಯ! ಬೆಳಗಾವಿ ಎಸ್‌ಪಿ ಮೊರೆ ಹೋದ ನವದಂಪತಿ

ಗೋವಾ ಮತ್ತು ಬೆಳಗಾವಿಯನ್ನು ಸಂಪರ್ಕಿಸಿದ ಐದು ವರ್ಷದ ಪ್ರೇಮಕಥೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕಾಲೇಜು ದಿನಗಳಲ್ಲಿ ಆರಂಭವಾದ ಪ್ರೀತಿ…

10 hours ago

ದೆಹಲಿ ಪ್ರತಿಭಟನೆಯಲ್ಲಿ ದುರಂತ: ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿಯ ಗರ್ಭದಲ್ಲಿದ್ದ ಮಗು ಸಾವು, ಅಭಿಜೀತ್ ದೀಪ್ಕೆ ವಿರುದ್ಧ ಆಕ್ರೋಶ ತೀವ್ರ

ದೆಹಲಿ ನಗರದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ, ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹಾಗೂ ಅವರ…

10 hours ago

ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಚಿತ್ರಸಿದ ವೈದ್ಯ! 6 ತಿಂಗಳ ಜೈಲು ಶಿಕ್ಷೆ

ಅಮೆರಿಕದ ಓಹಿಯೋ ರಾಜ್ಯದಲ್ಲಿ ಮಹಿಳೆಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ವಿಡಿಯೋ ಚಿತ್ರೀಕರಿಸಿದ ಪ್ರಕರಣದಲ್ಲಿ ಭಾರತೀಯ ಮೂಲದ ಅಮೆರಿಕನ್ ವೈದ್ಯನಿಗೆ…

11 hours ago

ಬೆತ್ತಲಾಗಿ ನಟಿಸಲ್ಲ, ಅನುರಾಗ್ ಕಶ್ಯಪ್ ಚಿತ್ರದ ಆಫರ್ ತಿರಸ್ಕರಿಸಿದ್ದೇಕೆ? ದಶಕಗಳ ಬಳಿಕ ಮೌನ ಮುರಿದ ನಟಿ ತೇಜಸ್ವಿನಿ ಕೊಲ್ಹಾಪುರೆ

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಬಹುಚರ್ಚಿತ 'ಗುಲಾಲ್' ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ತಾವು ಏಕೆ ಕೈಬಿಟ್ಟೆ ಎಂಬುದನ್ನು ನಟಿ…

11 hours ago

ಆನ್‌ಲೈನ್ ಬೆಟ್ಟಿಂಗ್ ಸಾಲ ತೀರಿಸಲು ನೆರೆಮನೆಯ ವೃದ್ಧೆಯ ಹತ್ಯೆ: ಸೂಟ್‌ಕೇಸ್‌ನಲ್ಲಿ ಶವ ಎಸೆದು ಹುಡುಕಾಟದಲ್ಲೂ ನಟಿಸಿದ ಆರೋಪಿ!

ಬೆಂಗಳೂರು: ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ರಾಮೋಹಳ್ಳಿ ಕೆರೆಯಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದ್ದ 65 ವರ್ಷದ ಜಯಮ್ಮ ಅವರ ಕೊಲೆ ಪ್ರಕರಣವನ್ನು…

11 hours ago

ಜಂತರ್ ಮಂತರ್ ಪ್ರತಿಭಟನೆಯಲ್ಲಿ ಸಮವಸ್ತ್ರಧಾರಿಗಳ ನಡೆ ವಿವಾದ: ಹೆಸರಿನ ಫಲಕವಿಲ್ಲದ ಸಿಬ್ಬಂದಿ ಯಾರು ಎಂಬ ಪ್ರಶ್ನೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಇತ್ತೀಚಿನ ಪ್ರತಿಭಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕೆಲವು ವೀಡಿಯೊಗಳು ಭದ್ರತಾ…

11 hours ago