ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಭೂಗತಲೋಕ ಪಾತಕಿಗಳಿಂದ ಜೀವ ಬೆದರಿಕೆ ಕರೆಗಳು ಬಂದಿರುವ ವಿಷಯ ಭಾನುವಾರದಂದು ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಯಿತು. ಈ ಕುರಿತು ಮಾತನಾಡಿದ ಖಾದರ್, ಇಂತಹ ಬೆದರಿಕೆ ಕರೆಗಳು ಮೊದಲು ಕೂಡ ಹಲವಾರು ಬಾರಿ ಬಂದಿದ್ದನ್ನು ನೆನೆದರು.
“ನಮ್ಮ ಜನ್ಮ ಮತ್ತು ಮರಣದ ಬಗ್ಗೆ ತೀರ್ಮಾನ ಮಾಡುವ ಶಕ್ತಿ ದೇವರಿಗಿದೆ. ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ — ನನಗೆ ಶಾಂತಿಯುತ ಮರಣ ಸಿಕ್ಕಲಿ. ಎಲ್ಲವೂ ದೇವರ ಲೀಲೆಯೇ, ನಮ್ಮ ಕೈಯಲ್ಲಿ ಏನೂ ಇಲ್ಲ,” ಎಂದು ಭಾವೋದ್ರಿಕ್ತವಾಗಿ ಪ್ರತಿಕ್ರಿಯಿಸಿದ ಖಾದರ್, ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನೂ ವ್ಯಕ್ತಪಡಿಸಿದರು.
“ಈಗ ನಿಮ್ಮ ಮುಂದೆ ನಿಂತು ಮಾತಾಡುತ್ತಿದ್ದೇನೆ. ಆದರೆ ಇದೇಕ್ಷಣದಿಂದ ನಾನು ಮತ್ತೆ ಮನೆಗೆ ಜೀವಂತವಾಗಿ ವಾಪಸ್ ಹೋಗುತ್ತೀನೆ ಎಂಬ ಭರವಸೆ ನನಗೆ ಇಲ್ಲ,” ಎಂದರು. ಈ ಮಾತುಗಳು ಅವರ ಭೀತಿಯ ತೀವ್ರತೆಯನ್ನು ತೋರಿಸುತ್ತವೆ.
ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ತಮ್ಮ ಗೃಹ ಜಿಲ್ಲೆಯಲ್ಲಿ ಎನ್ಐಎ ಯನ್ನು ಸ್ಥಾಪಿಸುವ ಕುರಿತು ಮಾತನಾಡಿದ ಅವರು, “ನನ್ನ ರಕ್ಷಣೆಗೆಂದು ಅದರ ಅಗತ್ಯವಿಲ್ಲ. ಆದರೆ ಇದು ಜಿಲ್ಲೆಯ ಜನರ ಹಿತದೃಷ್ಟಿಯಿಂದ ಅಗತ್ಯವಿದ್ದರೆ, ಸರ್ಕಾರ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬಹುದು,” ಎಂದು ಹೇಳಿದರು.
ಸ್ಪೀಕರ್ ಖಾದರ್ ಅವರ ಈ ಬಯಾನದಿಂದ, ಭೂಗತಲೋಕದ ಬೆದರಿಕೆಗಳು ರಾಜಕೀಯ ನಾಯಕರ ಭದ್ರತೆಗೆ ಎಂತಹ ಆತಂಕ ಸೃಷ್ಟಿಸುತ್ತವೆ ಎಂಬ ವಿಚಾರ ಮತ್ತೊಮ್ಮೆ ಚರ್ಚೆಗೆ ಎಳೆದಿದೆ.
ಬೆಂಗಳೂರು: ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ರಸ್ತೆ ಮೇಲೆ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ…
ಮಂಡ್ಯ: ಜಿಲ್ಲೆಯ ಮದ್ದೂರು ಪಟ್ಟಣದ ಹಳೆಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಇತ್ತೀಚೆಗೆ ಕಳ್ಳತನದ ಘಟನೆ ನಡೆದಿದೆ. ತಡರಾತ್ರಿ ವೇಳೆ ಖದೀಮರು ರಸ್ತೆ…
ಬೆಂಗಳೂರು ನಗರದ ವಿಶ್ವೇಶ್ವರಯ್ಯ ಲೇಔಟ್ನಲ್ಲಿ ಶನಿವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಆರು ವರ್ಷದ ಮಗು ಪ್ರಕರಣವನ್ನು 24 ಗಂಟೆಗಳಲ್ಲಿ ಬಗೆಹರಿಸಿದ ಮಹತ್ತರ…
ಶಿವಾಪೂರ (ವಿಜಯಪುರ ಜಿಲ್ಲೆ): ಅಡವಿಸಿದ್ದೇಶ್ವರ ಮಠದ ಪೀಠಾಧಿಪತಿ ಅಡವಿಸಿದ್ದರಾಮ ಸ್ವಾಮೀಜಿಗೆ ಅಕ್ರಮ ಸಂಬಂಧದ ಆರೋಪ ಎದುರಾಗಿ, ಇಡೀ ಗ್ರಾಮಸ್ಥರ ಆಕ್ರೋಶಕ್ಕೆ…
ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ನಿಕಟದಲ್ಲೇ ಸಂಭವಿಸಿದ ಹೃದಯವಿದ್ರಾವಕ ಘಟನೆ – ಮೂರು ವರ್ಷದ ಅವಳಿ ಜವಳಿ…
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಭೇಟಿ ವೇಳೆ…