ಬೆಂಗಳೂರು: ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿತನದ ಶೈಲಿಯಲ್ಲಿ ನಡೆದ ದಾಂಧಲೆ ಮತ್ತು ಅಪಹರಣದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮೇ 29ರಂದು ನಡೆದ ಈ ಪ್ರಕರಣದಲ್ಲಿ ಕಾವ್ಯಾ ಎಂಬ ಮಹಿಳೆ ತನ್ನ ಸಹಚರರ ಜೊತೆ ಸೇರಿ, ಯುವಕನಿಗೆ ಹಲ್ಲೆ ನಡೆಸಿದ ನಂತರ ಅಪಹರಣ ಮಾಡಿದ್ದಾರೆ.
ಸಲೂನ್ಗೆ ನುಗ್ಗಿದ ಕಾವ್ಯಾ ತನ್ನ ಇಬ್ಬರು ಸ್ನೇಹಿತರಾದ ಮಹ್ಮದ್ ಮತ್ತು ಸ್ಮಿತಾ ಜೊತೆ ಸೇರಿ, ‘ಸಂಜು’ ಎಂಬ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕಾವ್ಯಾ ಸಿಗರೇಟು ಸೇದುತ್ತಾ, ಸಂಜು ಹಾಗೂ ಅಲ್ಲಿ ಇದ್ದ ಯುವತಿಗೆ ದೌರ್ಜನ್ಯ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿವೆ.
ತೀವ್ರವಾಗಿ ಕೋಪಗೊಂಡ ಕಾವ್ಯಾ, ಸಂಜು ಅವರ ವಿರುದ್ಧ ಅಮಾನುಷವಾಗಿ ವರ್ತಿಸಿದ್ದು, ಕಾಲಿನಿಂದ ತಳ್ಳಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೂಲಗಳ ಪ್ರಕಾರ, ಸಂಜು ಹಿಂದೆ ಕಾವ್ಯಾಳ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದರೂ, ಬಳಿಕ ಮತ್ತೊಂದು ಸ್ಪಾದಲ್ಲಿ ಕೆಲಸಕ್ಕೆ ಸೇರಿದ್ದನ್ನು ಖಂಡಿಸಿ ಈ ದಾಂಧಲೆ ನಡೆಸಲಾಗಿದೆ.
ಘಟನೆಯ ನಂತರ, ಕಾವ್ಯಾ ಮತ್ತು ತಂಡ ಸಂಜುವನ್ನು ಕಾರಿನಲ್ಲಿ ಕೊಂಡೊಯ್ದು ಅಪಹರಿಸಿ, ಬಳಿಕ ಪೊಲೀಸರು ಸಂಪರ್ಕಿಸಿದಾಗ ಅವರನ್ನು ಠಾಣೆಯ ಬಳಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಅಪಹರಣ ಮತ್ತು ಹಲ್ಲೆ ಆರೋಪದ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾವ್ಯಾ, ಮಹ್ಮದ್ ಮತ್ತು ಸ್ಮಿತಾ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಈಗ ಈ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ. ತದ್ಗತಿವಿಚಾರಣೆಯಲ್ಲಿ ಇನ್ನು ಹೆಚ್ಚಿನ ಮಾಹಿತಿಗಳು ಹೊರಬೀಳುವ ನಿರೀಕ್ಷೆಯಿದ
ಗುಜರಾತಿನ ರಾಜ್ಕೋಟ್ನಲ್ಲಿ ಯುವತಿ ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಂದಿನಿ,…
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಪತ್ನಿಯ ಶೀಲವನ್ನು ಅನುಮಾನಿಸುತ್ತಿದ್ದ ಪತಿಯೊಬ್ಬ ಕೊನೆಗೆ ಆಕೆಯನ್ನು…
ದೇಶದ ಗಡಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರೊಬ್ಬರು, ಸ್ವಂತ ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದು ತಮ್ಮ ಸುಮಾರು ₹4…
ಹಸಿದ ಕಂದಮ್ಮನ ಅಳುವನ್ನು ಸಮಾಧಾನಪಡಿಸಲಾಗದೆ ಅಸಹಾಯಕನಾಗಿ ನಿಂತ ತಂದೆಯೊಬ್ಬನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರ ಮನಕಲಕಿದೆ. ಪತ್ನಿ ಮನೆಯನ್ನು ತೊರೆದು…
ತಂದೆ, ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಪ್ರಕರಣದಲ್ಲಿ ದಿನದಿಂದ…
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಒಂದೂವರೆ…