Latest

ಅನಧಿಕೃತ ಕ್ಲಿನಿಕ್ ಗಳಿಗೆ ಬೀಗ ಜಡಿದ ಕೆ.ಪಿ.ಎಮ್.ಇ ಮುಂಡಗೋಡ ಪ್ರಾಧಿಕಾರ

ಮುಂಡಗೋಡ :- ತಾಲೂಕಿನಲ್ಲಿ ಕೆ.ಪಿ.ಎಮ್.ಇ ಖಾಯಿದೆ ಅಡಿಯಲ್ಲಿ ಕೆ.ಪಿ.ಎಮ್.ಇ ಮುಂಡಗೋಡ ಪ್ರಾಧಿಕಾರದ ತಂಡವು ದಾಳಿ ನಡೆಸಿ ಅನಧೀಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದ ಕ್ಲಿನಿಕ್ ಗಳನ್ನು ಬಂದು ಮಾಡಿಸಿ ನೋಟಿಸ್ ನೀಡಿದ್ದಾರೆ.. ಮುಂಡಗೋಡ ಪಟ್ಟಣದ ಪ್ರದೇಶದಲ್ಲಿ 3 ಕ್ಲಿನಿಕ್ ಮತ್ತು ಗ್ರಾಮೀಣ ಪ್ರದೇಶದಲ್ಲಿ 1 ಕ್ಲಿನಿಕ್ ಮೇಲೆ ದಾಳಿ ಮಾಡಿ ಕ್ಲಿನಿಕ್ ಗೆ ಬೀಗ ಜಡಿದಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಾಲಗಾಂವ ಗ್ರಾಮದಲ್ಲಿ ವಿನೋದ್ ಕಾಮಗಾರಿ ಎಂಬ ನಕಲಿ ವೈದ್ಯ ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಹೊಂದದೇ ಮನೆಯೊಂದರಲ್ಲಿ ಕ್ಲಿನಿಕ್ ನಡೆಸುತ್ತಿದ್ದನು ಈ ಕ್ಲಿನಿಕ್ ಗೆ ಭೇಟಿ ನೀಡಿ ನೋಟಿಸ್ ಜಾರಿ ಮಾಡಿ ಬಂದ್ ಮಾಡಲಾಗಿದೆ.

ಡಾ| ಕಿರಣ ಮಕ್ಕಳ ಆಸ್ಪತ್ರೆ, ಹುಬ್ಬಳ್ಳಿ – ಸಿರ್ಸಿ ರೋಡ ಮುಂಡಗೋಡ ಕ್ಲಿನಿಕ್, ಶ್ರೀ ಪಾಂಡುರಂಗ ಕ್ಲಿನಿಕ್ ಹುಬ್ಬಳ್ಳಿ – ಸಿರ್ಸಿ ರೋಡ ಮುಂಡಗೋಡ ಕ್ಲಿನಿಕ್ , ಡಾ॥ ಭಾಸ್ಕರ್ ರಾವ್ (ರೋಣ ಮೆಡಿಕಲ್ಸ್,) ಟಿ.ಡಿ.ಬಿ ರೋಡ್ ಮುಂಡಗೋಡ ಕ್ಲಿನಿಕ್ ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಕ್ಲಿನಿಕ್ ಅನ್ನು ಬಂದ ಮಾಡಿಸಲಾಯಿತು. ಹಾಗೂ PCPNDT ACT ಅಡಿಯಲ್ಲಿ ಮುಂಡಗೋಡ ತಾಲೂಕಿನ ಸ್ಕ್ಯಾನಿಂಗ್ ಕೇಂದ್ರಗಳಾದ ತಾಲೂಕಾ ಆಸ್ಪತ್ರೆ, ಮುಂಡಗೋಡ, ಖುಷಿ ಆಸ್ಪತ್ರೆ ಮುಂಡಗೋಡ, ಹೆಗಡೆ ಆಸ್ಪತ್ರೆ ಮುಂಡಗೋಡ ಹಾಗೂ ಜ್ಯೋತಿ ಆಸ್ಪತ್ರೆ, ಮುಂಡಗೋಡ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸದರಿ ಕಾರ್ಯಾಚರಣೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಾದ ಡಾ॥ ಅಶ್ವಿನಿ ಬೋರಕರ್ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ| ನರೇಂದ್ರ ಪವಾರ, ಡಾ॥ ಸಂಜೀವ ಗಲಗಲಿ ಆಯುಷ್ ವೈದ್ಯಾಧಿಕಾರಿಗಳು, ಹಾಗೂ ಡಾ॥ ಭರತ ಡಿ.ಟಿ, ಡಾ॥ ಸ್ವರೂಪರಾಣಿ ಪಾಟೀಲ್ ಆಡಳಿತ ವೈದ್ಯಾಧಿಕಾರಿಗಳು, ತಾಲೂಕಾ ಆಸ್ಪತ್ರೆ, ಮುಂಡಗೊಡ ಶ್ರೀ ಜಿ.ವಾಯ್ ಹೊಂಗಲ್ ಎ.ಎಸ್.ಆಯ್. ಪೋಲಿಸ್ ಠಾಣೆ ಮುಂಡಗೋಡ ಶ್ರೀ ಸಿ.ಬಿ ರಾಠೋಡ್ ಹೆಡ್ ಕಾನ್ಸೆಬಲ್ ಪೋಲಿಸ್ ಠಾಣೆ ಮುಂಡಗೋಡ ಮುಂತಾದವರು ದಾಳಿಯಲ್ಲಿ ಭಾಗವಹಿಸಿದ್ದರು.

ಹಾಗೂ ಈ ಮೂಲಕ ಮುಂಡಗೋಡ ತಾಲೂಕಿನಲ್ಲಿ ಕೆ.ಪಿ.ಎಮ್.ಇ ಖಾಯಿದೆ ಅಡಿಯಲ್ಲಿ ನೊಂದಣಿ ಮಾಡಿಸದೇ ಕ್ಲಿನಿಕ್ ನಡೆಸುತ್ತಿರುವ ನಕಲಿ ವೈದ್ಯರಿಗೆ ತಕ್ಷಣ ಕ್ಲಿನಿಕ್ ಅನ್ನು ಬಂದು ಮಾಡಲು ಹಾಗೂ ಕೆ.ಪಿ.ಎಮ್.ಇ ಖಾಯಿದೆ ಅಡಿಯಲ್ಲಿ ಪರವಾನಿಗೆ ಪಡೆದು ಕ್ಲಿನಿಕ್ ನಡೆಸಲು ಈ ಮೂಲಕ ತಾಲೂಕಾ ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿರುತ್ತಾರೆ.

ಭ್ರಷ್ಟರ ಬೇಟೆ

Recent Posts

ಲಿವ್-ಇನ್ ಸಂಬಂಧದ ದುರಂತ ಅಂತ್ಯ: ಲವ್ ಜಿಹಾದ್ ಗೆ ಮತ್ತೊಂದು ಬಲಿ, ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣ ಚರ್ಚೆಗೆ ಗ್ರಾಸ

ಗುಜರಾತಿನ ರಾಜ್‌ಕೋಟ್‌ನಲ್ಲಿ ಯುವತಿ ನಂದಿನಿ ಬೋಸ್ಮಿಯಾ ಸಾವಿನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ನಂದಿನಿ,…

3 hours ago

ಸದಾ ಶೀಲ ಶಂಕಿಸುತ್ತಿದ್ದವನು ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದ..!

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಪತ್ನಿಯ ಶೀಲವನ್ನು ಅನುಮಾನಿಸುತ್ತಿದ್ದ ಪತಿಯೊಬ್ಬ ಕೊನೆಗೆ ಆಕೆಯನ್ನು…

3 hours ago

ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದ ನಿವೃತ್ತ ಸೈನಿಕ; ₹4 ಕೋಟಿ ಆಸ್ತಿಯನ್ನು ತಿರುಪತಿ ದೇವರಿಗೆ ದಾನ ಮಾಡಿದ ಹೃದಯವಿದ್ರಾವಕ ನಿರ್ಧಾರ

ದೇಶದ ಗಡಿಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರೊಬ್ಬರು, ಸ್ವಂತ ಮಕ್ಕಳ ನಿರ್ಲಕ್ಷ್ಯದಿಂದ ಮನನೊಂದು ತಮ್ಮ ಸುಮಾರು ₹4…

3 hours ago

ಬೇರೊಬ್ಬನೊಂದಿಗೆ ಓಡಿ ಹೋದ ತಾಯಿ: ಹಸಿದ ಕಂದಮ್ಮನನ್ನು ಮಡಿಲಲ್ಲಿ ಹಿಡಿದು ಮೆಡಿಕಲ್ಗೆ ಬಂದು ಕಣ್ಣೀರಿಟ್ಟ ತಂದೆ.

ಹಸಿದ ಕಂದಮ್ಮನ ಅಳುವನ್ನು ಸಮಾಧಾನಪಡಿಸಲಾಗದೆ ಅಸಹಾಯಕನಾಗಿ ನಿಂತ ತಂದೆಯೊಬ್ಬನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರ ಮನಕಲಕಿದೆ. ಪತ್ನಿ ಮನೆಯನ್ನು ತೊರೆದು…

3 hours ago

ಕುಟುಂಬದ ಮೂವರ ಹತ್ಯೆ ಪ್ರಕರಣ: ಹೆತ್ತವರನ್ನು ಕೊಂದ ಬಳಿಕ ಪ್ರಿಯಕರನೊಂದಿಗೆ ಹೋಗಿ ಸಿಗರೇಟ್ ಸೇದಿದ್ದ ಸೈಕೋ ಮಗಳು..!

ತಂದೆ, ತಾಯಿ ಮತ್ತು ತಂಗಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತಳಾಗಿರುವ ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಪ್ರಕರಣದಲ್ಲಿ ದಿನದಿಂದ…

3 hours ago

ನಾಲ್ಕು ತಿಂಗಳ ಗರ್ಭಿಣಿ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ: ಕಲಬುರಗಿಯಲ್ಲಿ ಮನಕಲುಕುವ ಘಟನೆ

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ್ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯೊಬ್ಬರು ತಮ್ಮ ಒಂದೂವರೆ…

3 hours ago