Latest

ಸುಖಾಸುಮ್ಮನೆ ಹಣ ನೀಡಲು ನಿರಾಕರಿಸಿದ ಅಮಾಯಕ ಯುವಕನಿಗೆ ಹಾಡಹಗಲೇ ಚಾಕು ಇರಿತ

ಮನುಷ್ಯನ ಜೀವಕ್ಕೇ ಬೆಲೆ ಇಲ್ಲವೇನೋ ಎಂಬ ಪರಿಸ್ಥಿತಿ ಹುಬ್ಬಳ್ಳಿಯಲ್ಲಿ ವ್ಯೆಕ್ತವಾಗುತ್ತಿದೆ. ಕೇವಲ ಚಿಲ್ಲರೆ ಹಣಗಳಿಗೋಸ್ಕರ ಮಾರಣಾಂತಿಕ ಹಲ್ಲೆ ಮತ್ತು ದೌರ್ಜನ್ಯದಿಂದ ಚಾಕು ಇರಿತ ನಡೆಯುತ್ತಿವೆ. ಕಳೆದ 28/09/20022 ರಂದು ಹಾಡ ಹಗಲೇ ಇಂತಹ ಒಂದು ಘಟನೆ ಹುಬ್ಬಳ್ಳಿಯ ಕಸಬಾ ಪೇಟ್ ವ್ಯಾಪ್ತಿಯಲ್ಲಿನ ಕೊತ್ತಂಬರಿ ಆಟೋ ಸ್ಟ್ಯಾಂಡ್ ಬಳಿ ನಡೆದಿದೆ. ಹಾಡ ಹಗಲೇ ಕೇವಲ 2160/- ರೂ ಸಲುವಾಗಿ ಇಬ್ಬರೂ ಪರಸ್ಪರ ಹರಿತವಾದ ಚಾಕುವಿನಿಂದ ಹೊಡೆದಾಡಿಕೊಂಡ ಘಟನೆ ಹುಬ್ಬಳ್ಳಿಯ ಕೊತ್ತಂಬರಿ ಆಟೋ ಸ್ಟ್ಯಾಂಡ್ ದಲ್ಲಿ ನಡೆದಿದೆ ಚಾಕು ಇರಿತಕ್ಕೆ ಒಳಗಾದ ಮಹಮ್ಮದ್ ಶಫಿ, ಖಾದರ್ ಮಹಮ್ಮದ ಶಫಿ ಮಹಮ್ಮದ ಶಫಿ ಮತ್ತು ಖಾದರ್, ಮೈನುದ್ದಿನ್ ಎಂಬ ಈ ಯುವಕರು ಹಳೇ ಹುಬ್ಬಳ್ಳಿಯಲ್ಲಿ ಸೊಪ್ಪಿನ ವ್ಯಾಪಾರ ಮಾಡಿಕೊಂಡಿದ್ದರು. ಈ ವ್ಯಾಪಾರ ಸ್ಥಳಕ್ಕೆ ಇರ್ಫಾನ್ ಬೇಪಾರಿ ಎಂಬ ವ್ಯಕ್ತಿ ಆಗಾಗ ಬಂದು ಹಣ ಕೊಡು ಎಂದು ಪೀಡಿಸುತ್ತಿದ್ದ ಮತ್ತು ಹಣವನ್ನು ಪಡೆದುಕೊಂಡು ಹೋಗುತ್ತಿದ್ದ. ಅದರಂತೆ ಕಳೆದ ದಿ 28/09/2022 ರಂದು ಬೆಳಗಿನ ಸಮಯ 11 ರಿಂದ 12 ಘಂಟೆಯ ಅವಧಿಯಲ್ಲಿ ಇರ್ಫಾನ್ ಮತ್ತು ಅವನ ಆಪ್ತ ಬಿಲಾಲ್ ಎಂಬ ಯುವಕ ಇಬ್ಬರೂ ಬಂದು ಮಹಮ್ಮದ ಶಫಿ, ಖಾದರ್ ಗೆ ಹಣವನ್ನು ಕೇಳಿದ್ದಾರೆ. ಆಗ ಮಹಮ್ಮದ ಶಫಿ, ಖಾದರ್ ಇಬ್ಬರೂ ಇರ್ಫಾನ್ ಗೆ ಹಣವನ್ನು ಕೊಡಲು “ನಮ್ಮ ಬಳಿ ಹಣವಿಲ್ಲ ನಾವೇಕೆ ನಿಮಗೇ ಹಣ ಕೊಡಬೇಕು ಎಂದು ನಿರಾಕರಿಸಿದ್ದಾರೆ” ಇದನ್ನೆಲ್ಲಾ ಗಮನಿಸಿದ ಇರ್ಫಾನ್ ಮಹಮ್ಮದ್ ಗೆ ಅವಾಚ್ಯ ಶಬ್ದಗಳಿಂದ ಬೈದು ಜಗಳ ತಗೆದಿದ್ದಾನೆ. ಆಗ ಮಹಮ್ಮದ್ ಮತ್ತು ಖಾದರ್ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪ್ರಾರಂಭವಾದ ಜಗಳ ವಿಕೋಪಕ್ಕೆ ತಿರುಗಿ ಹೊಡಿಬಡಿ ಮಾಡಿಕೊಂಡಾಗ ಸಿಟ್ಟನ್ನು ನೆತ್ತಿಗೇರಿಸಿಕೊಂಡ ಇರ್ಫಾನ್ ಮಹಮ್ಮದ ಶಫಿಗೇ ಒಂದು ಗತಿ ಕಾಣಿಸಬೇಕೆಂಬ ದುರುದ್ದೇಶದಿಂದ ಘಟನೆಯಲ್ಲಿ ತನ್ನ ಬಳಿ ಇಟ್ಟುಕೊಂಡು ಬಂದಿದ್ದ ಹರಿತವಾದ ಚಾಕುವಿನಿಂದ ಮಹಮ್ಮದನ ಎಡಗಡೆ ಹೊಟ್ಟೆಯ ಮೇಲ್ಛಾಗಕ್ಕೆ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಘಟನೆಯಲ್ಲಿ ಸುಮಾರು 6 ರಿಂದ 8 ಜನರೆಲ್ಲರೂ ಸೇರಿ ಎಳೆದಾಡಿಕೊಳ್ಳುವಾಗ ಇರ್ಫಾನ್ ನ ಬೆನ್ನಿನ ಭಾಗಕ್ಕೂ ಚಾಕು ಇರಿದಿದ್ದಾರೆ. ಘಟನೆ ನಡೆದ ಸ್ವಲ್ಪ ಸಮಯದಲ್ಲೇ ಎಲ್ಲರೂ ಘಟನೆ ನಡೆದ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಇನ್ನೂ ವಿಷಯ ತಿಳಿದ ಕಸಬಾಪೇಟ್ ಪೊಲೀಸ್ ಠಾಣೆಯ ಸಿಪಿಐ ಶ್ರೀ ಎ ಎಂ ಬನ್ನಿ ರವರು ತಕ್ಷಣ ಗಂಭೀರವಾಗಿ ಗಾಯಗೊಂಡ ಮಹಮ್ಮದ ಶಫಿಯನ್ನು ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿ ಶಫಿರವರ ಸಹೋದರ ಮುಜಾಫರ್ ನಿಂದ ದೂರು ದಾಖಲಿಸಿಕೊಂಡು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿದರು. ಹಾಗೂ ಪುಡಿ ರೌಡಿಗಳ ಹೆಡೆಮುರಿ ಕಟ್ಟಲು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ವರದಿ : ಶಿವ ಹುಬ್ಬಳ್ಳಿ.

ಭ್ರಷ್ಟರ ಬೇಟೆ

Recent Posts

ಕುಡಿತದ ದುರಂತ ಅಂತ್ಯ: ಆಸ್ತಿ ಹಣದ ಜಗಳಕ್ಕೆ ತಾಯಿಯನ್ನೇ ಕೊಂದ ಮಗಳು-ಮೊಮ್ಮಗ!

ಬೆಂಗಳೂರು ನಗರದ ಕೆಂಗೇರಿ ಠಾಣಾ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದ ಭೀಕರ ಘಟನೆ ಒಂದು ಕುಟುಂಬದ ದುಸ್ಥಿತಿಯನ್ನು ಬಯಲಿಗೆಳೆದಿದೆ. ಮದ್ಯಪಾನದ…

12 hours ago

ವಿದ್ಯಾರ್ಥಿಗಳೊಂದಿಗೆ ಅಕ್ರಮ ಸಂಬಂಧ: ಪ್ರೌಢಶಾಲಾ ಶಿಕ್ಷಕಿ ಬಂಧನ

ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಪ್ರೌಢಶಾಲಾ ಶಿಕ್ಷಕಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ…

12 hours ago

ಬಿಡದಿ ಟೌನ್‌ಶಿಪ್‌ ವಿರೋಧ ನಾಟಕ: ಅಲ್ಲಿ ಅನಿತಾ ಕುಮಾರಸ್ವಾಮಿ 100 ಎಕರೆ ಜಮೀನಿದೆ, ಕುಮಾರಸ್ವಾಮಿ ವಿರುದ್ಧ ಎಂ.ಬಿ. ಪಾಟೀಲ್ ವಾಗ್ದಾಳಿ

ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸುತ್ತಿರುವ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

16 hours ago

ಆದಾಯ ಮೀರಿ ಆಸ್ತಿ ಗಳಿಕೆ ಆರೋಪ: ಆರ್‌ಡಿಪಿಆರ್ ಎಇಇ ತಿಪ್ಪೇಸ್ವಾಮಿ ಮನೆ ಮೇಲೆ ಲೋಕಾಯುಕ್ತ ದಾಳಿ

ಬಳ್ಳಾರಿ: ಆದಾಯಕ್ಕಿಂತ ಅಧಿಕ ಪ್ರಮಾಣದಲ್ಲಿ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯ ಸಹಾಯಕ…

16 hours ago

ಸಚಿವ ಸತೀಶ್ ಜಾರಕಿಹೊಳಿ ಅಳಿಯ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ಇಡಿ ದಾಳಿ

ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಸೇರಿದಂತೆ ರಾಜ್ಯದ ವಿವಿಧ ಆರು ಸ್ಥಳಗಳಲ್ಲಿ ಜಾರಿ…

16 hours ago

ಮದುವೆಗೆ ಕೆಲವೇ ದಿನ ಬಾಕಿ… ಭಾವಿ ಪತ್ನಿಯಿಂದಲೇ 400 ಅಡಿ ಕಣಿವೆಗೆ ತಳ್ಳಿ ಹತ್ಯೆ!

ಪುಣೆಯಲ್ಲಿ ನಡೆದ ಭೀಕರ ಘಟನೆ ಒಂದು ದೇಶವನ್ನೇ ಬೆಚ್ಚಿಬೀಳಿಸಿದೆ. ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ತನ್ನನ್ನು ಮದುವೆಯಾಗಬೇಕಿದ್ದ ಯುವಕನನ್ನೇ…

16 hours ago