Latest

ಸುಖಾಸುಮ್ಮನೆ ಹಣ ನೀಡಲು ನಿರಾಕರಿಸಿದ ಅಮಾಯಕ ಯುವಕನಿಗೆ ಹಾಡಹಗಲೇ ಚಾಕು ಇರಿತ

ಮನುಷ್ಯನ ಜೀವಕ್ಕೇ ಬೆಲೆ ಇಲ್ಲವೇನೋ ಎಂಬ ಪರಿಸ್ಥಿತಿ ಹುಬ್ಬಳ್ಳಿಯಲ್ಲಿ ವ್ಯೆಕ್ತವಾಗುತ್ತಿದೆ. ಕೇವಲ ಚಿಲ್ಲರೆ ಹಣಗಳಿಗೋಸ್ಕರ ಮಾರಣಾಂತಿಕ ಹಲ್ಲೆ ಮತ್ತು ದೌರ್ಜನ್ಯದಿಂದ ಚಾಕು ಇರಿತ ನಡೆಯುತ್ತಿವೆ. ಕಳೆದ 28/09/20022 ರಂದು ಹಾಡ ಹಗಲೇ ಇಂತಹ ಒಂದು ಘಟನೆ ಹುಬ್ಬಳ್ಳಿಯ ಕಸಬಾ ಪೇಟ್ ವ್ಯಾಪ್ತಿಯಲ್ಲಿನ ಕೊತ್ತಂಬರಿ ಆಟೋ ಸ್ಟ್ಯಾಂಡ್ ಬಳಿ ನಡೆದಿದೆ. ಹಾಡ ಹಗಲೇ ಕೇವಲ 2160/- ರೂ ಸಲುವಾಗಿ ಇಬ್ಬರೂ ಪರಸ್ಪರ ಹರಿತವಾದ ಚಾಕುವಿನಿಂದ ಹೊಡೆದಾಡಿಕೊಂಡ ಘಟನೆ ಹುಬ್ಬಳ್ಳಿಯ ಕೊತ್ತಂಬರಿ ಆಟೋ ಸ್ಟ್ಯಾಂಡ್ ದಲ್ಲಿ ನಡೆದಿದೆ ಚಾಕು ಇರಿತಕ್ಕೆ ಒಳಗಾದ ಮಹಮ್ಮದ್ ಶಫಿ, ಖಾದರ್ ಮಹಮ್ಮದ ಶಫಿ ಮಹಮ್ಮದ ಶಫಿ ಮತ್ತು ಖಾದರ್, ಮೈನುದ್ದಿನ್ ಎಂಬ ಈ ಯುವಕರು ಹಳೇ ಹುಬ್ಬಳ್ಳಿಯಲ್ಲಿ ಸೊಪ್ಪಿನ ವ್ಯಾಪಾರ ಮಾಡಿಕೊಂಡಿದ್ದರು. ಈ ವ್ಯಾಪಾರ ಸ್ಥಳಕ್ಕೆ ಇರ್ಫಾನ್ ಬೇಪಾರಿ ಎಂಬ ವ್ಯಕ್ತಿ ಆಗಾಗ ಬಂದು ಹಣ ಕೊಡು ಎಂದು ಪೀಡಿಸುತ್ತಿದ್ದ ಮತ್ತು ಹಣವನ್ನು ಪಡೆದುಕೊಂಡು ಹೋಗುತ್ತಿದ್ದ. ಅದರಂತೆ ಕಳೆದ ದಿ 28/09/2022 ರಂದು ಬೆಳಗಿನ ಸಮಯ 11 ರಿಂದ 12 ಘಂಟೆಯ ಅವಧಿಯಲ್ಲಿ ಇರ್ಫಾನ್ ಮತ್ತು ಅವನ ಆಪ್ತ ಬಿಲಾಲ್ ಎಂಬ ಯುವಕ ಇಬ್ಬರೂ ಬಂದು ಮಹಮ್ಮದ ಶಫಿ, ಖಾದರ್ ಗೆ ಹಣವನ್ನು ಕೇಳಿದ್ದಾರೆ. ಆಗ ಮಹಮ್ಮದ ಶಫಿ, ಖಾದರ್ ಇಬ್ಬರೂ ಇರ್ಫಾನ್ ಗೆ ಹಣವನ್ನು ಕೊಡಲು “ನಮ್ಮ ಬಳಿ ಹಣವಿಲ್ಲ ನಾವೇಕೆ ನಿಮಗೇ ಹಣ ಕೊಡಬೇಕು ಎಂದು ನಿರಾಕರಿಸಿದ್ದಾರೆ” ಇದನ್ನೆಲ್ಲಾ ಗಮನಿಸಿದ ಇರ್ಫಾನ್ ಮಹಮ್ಮದ್ ಗೆ ಅವಾಚ್ಯ ಶಬ್ದಗಳಿಂದ ಬೈದು ಜಗಳ ತಗೆದಿದ್ದಾನೆ. ಆಗ ಮಹಮ್ಮದ್ ಮತ್ತು ಖಾದರ್ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪ್ರಾರಂಭವಾದ ಜಗಳ ವಿಕೋಪಕ್ಕೆ ತಿರುಗಿ ಹೊಡಿಬಡಿ ಮಾಡಿಕೊಂಡಾಗ ಸಿಟ್ಟನ್ನು ನೆತ್ತಿಗೇರಿಸಿಕೊಂಡ ಇರ್ಫಾನ್ ಮಹಮ್ಮದ ಶಫಿಗೇ ಒಂದು ಗತಿ ಕಾಣಿಸಬೇಕೆಂಬ ದುರುದ್ದೇಶದಿಂದ ಘಟನೆಯಲ್ಲಿ ತನ್ನ ಬಳಿ ಇಟ್ಟುಕೊಂಡು ಬಂದಿದ್ದ ಹರಿತವಾದ ಚಾಕುವಿನಿಂದ ಮಹಮ್ಮದನ ಎಡಗಡೆ ಹೊಟ್ಟೆಯ ಮೇಲ್ಛಾಗಕ್ಕೆ ಇರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಘಟನೆಯಲ್ಲಿ ಸುಮಾರು 6 ರಿಂದ 8 ಜನರೆಲ್ಲರೂ ಸೇರಿ ಎಳೆದಾಡಿಕೊಳ್ಳುವಾಗ ಇರ್ಫಾನ್ ನ ಬೆನ್ನಿನ ಭಾಗಕ್ಕೂ ಚಾಕು ಇರಿದಿದ್ದಾರೆ. ಘಟನೆ ನಡೆದ ಸ್ವಲ್ಪ ಸಮಯದಲ್ಲೇ ಎಲ್ಲರೂ ಘಟನೆ ನಡೆದ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಇನ್ನೂ ವಿಷಯ ತಿಳಿದ ಕಸಬಾಪೇಟ್ ಪೊಲೀಸ್ ಠಾಣೆಯ ಸಿಪಿಐ ಶ್ರೀ ಎ ಎಂ ಬನ್ನಿ ರವರು ತಕ್ಷಣ ಗಂಭೀರವಾಗಿ ಗಾಯಗೊಂಡ ಮಹಮ್ಮದ ಶಫಿಯನ್ನು ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿ ಶಫಿರವರ ಸಹೋದರ ಮುಜಾಫರ್ ನಿಂದ ದೂರು ದಾಖಲಿಸಿಕೊಂಡು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿದರು. ಹಾಗೂ ಪುಡಿ ರೌಡಿಗಳ ಹೆಡೆಮುರಿ ಕಟ್ಟಲು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ವರದಿ : ಶಿವ ಹುಬ್ಬಳ್ಳಿ.

ಭ್ರಷ್ಟರ ಬೇಟೆ

Recent Posts

‍ರೀಲ್ಸ್ ಮಾಡುವ ಹುಚ್ಚು, ಕರೆದಾಗ ಬಂದು ಜೊತೆಗೆ ಮಲಗುತ್ತಿರಲಿಲ್ಲ ಎಂದು ಪತ್ನಿಯನ್ನು ಕೊಂದ ಪತಿ

ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…

2 days ago

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27ರ ಯುವತಿ ಸಾವು; ಉಡುಪಿಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ, ತನಿಖೆ ಚುರುಕು

ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…

2 days ago

‘ಅಂದು ನನ್ನೊಂದಿಗೆ ಮಲಗಲು ಕೇಳಿದ್ದು ನೀವೇ ತಾನೇ?’ ನಿರ್ಮಾಪಕನಿಗೆ ನಟಿ ಚಾಂದಿನಿ ಚೌಧರಿ ಶಾಕ್!

ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…

2 days ago

ಮದುವೆಯಾಗಿ 4 ದಿನಕ್ಕೆ ಮಾಜಿ ಪ್ರೇಮಿಯೊಂದಿಗೆ ಹೋಟೆಲ್ ನಲ್ಲಿ ಪತ್ನಿ; ಪತಿಯ ಕೈಗೆ ವಿಡಿಯೋ…!

ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…

2 days ago

ಪತ್ನಿಯನ್ನು ಕೊಂದು ಶವ ವಿಲೇವಾರಿಗೆ ಸ್ನೇಹಿತನ ನೆರವು ಕೇಳಿದ ಪತಿ; ಜಾಣತನದಿಂದ ಪೊಲೀಸರಿಗೆ ಒಪ್ಪಿಸಿದ ಗೆಳೆಯ!

ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…

2 days ago

ಹಂಪಿಯಲ್ಲಿ ಅಕ್ರಮ ಹೋಂಸ್ಟೇ, ವಾಣಿಜ್ಯ ಚಟುವಟಿಕೆ ಆರೋಪ: 54 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು

ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…

2 days ago