Latest

ಗಂಡ, ಅತ್ತೆಯನ್ನು ಕೊಂದು ಬ್ರಿಡ್ಜ್ ನಲ್ಲಿ ಶವವಿಟ್ಟ ಕಿಲಾಡಿ ಲೇಡಿ.

ದೆಹಲಿಯಲ್ಲಿ ಶ್ರದ್ಧಾ ವಾಕರ್‌ ಹತ್ಯೆಗೈದು ದೇಹವನ್ನು ಕತ್ತರಿಸಿ ರೆಫ್ರಿಜರೇಟರ್‌ನಲ್ಲಿಟ್ಟ ಘಟನೆ ಬೆಳಕಿಗೆ ಬಂದ ಬಳಿಕ ಶವವನ್ನು ಫ್ರೀಡ್ಜರ್‌ನಲ್ಲಿಟ್ಟ ಹಲವು ಹತ್ಯೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಗುವಾಹಟಿಯಿಂದ ಇಂತಹದ್ದೇ ಒಂದು ಘಟನೆ ವರದಿಯಾಗಿದ್ದು, ಮಹಿಳೆಯೊಬ್ಬಳು ತನ್ನ ಗಂಡ ಮತ್ತು ಅತ್ತೆಯನ್ನು ಹತ್ಯೆಗೈದು ಹೆಣ ಅಡಗಿಸಿಡುವ ಉದ್ದೇಶದಿಂದ ಇಬ್ಬರ ಶವವನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಬಳಿಕ ನದಿಗೆ ಎಸೆದಿದ್ದಾಳೆ. ಅಸ್ಸಾಂ ಪೊಲೀಸರು ಈಕೆಯನ್ನು ವಿಚಾರಣೆ ನಡೆಸಿದ್ದು, ಅತ್ತೆ ಮತ್ತು ಗಂಡನನ್ನು ಕೊಲೆ ಮಾಡಿ ದೇಹವನ್ನು ಕತ್ತರಿಸಿ ದೇಹದ ಭಾಗಗಳನ್ನು ಫ್ರೀಜರ್‌ನಲ್ಲಿಟ್ಟಿರುವುದಾಗಿ ತಿಳಿಸಿದ್ದಾಳೆ. ಬಳಿಕ ಆ ದೇಹದ ತುಂಡುಗಳನ್ನು ಪಾಲಿಥಾನ್‌ ಬ್ಯಾಗ್‌ಗಳಲ್ಲಿ ಪ್ಯಾಕ್‌ ಮಾಡಿ ಬಳಿಕ ಮೇಘಾಲಯಕ್ಕೆ ಸಾಗಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕೆಲಸಕ್ಕೆ ಈಕೆಗೆ ಪ್ರಿಯಕರ ಹಾಗೂ ಆತನ ಸ್ನೇಹಿತ ಕೂಡ ಸಹಾಯ ಮಾಡಿದ್ದಾರೆ. ಮೃತರನ್ನು ಅಮರೇಂದ್ರ ಡೇ ಮತ್ತು ಶಂಕರಿ ಡೇ ಎಂದು ಗುರುತಿಸಲಾಗಿದೆ. ಈ ಕೊಲೆ ಕಳೆದ ವರ್ಷ ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ ನಡೆದಿದೆ. ಹತ್ಯೆಗೀಡಾದ ತಾಯಿಯ ದೇಹದ ಕೆಲವು ಭಾಗಗಳನ್ನು ಮೇಘಾಲಯದಿಂದ ವಶಪಡಿಸಿಕೊಳ್ಳಲಾಗಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಕೇಕ್ ಹಚ್ಚಿದ ಗಲಾಟೆ ರಕ್ತಪಾತಕ್ಕೆ: ಹುಟ್ಟುಹಬ್ಬದ ಪಾರ್ಟಿ ಮೂರು ಯುವಕರ ಸಾವಿನಲ್ಲಿ ಅಂತ್ಯ

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಹುಟ್ಟುಹಬ್ಬದ ಸಂಭ್ರಮವೇ ಭೀಕರ ದುರಂತಕ್ಕೆ ಕಾರಣವಾದ ಘಟನೆ ಬೆಳಕಿಗೆ ಬಂದಿದೆ. ಸ್ನೇಹಿತರ ನಡುವೆ ನಡೆದ ಸಣ್ಣ…

9 hours ago

ಮಧ್ಯಪ್ರದೇಶದಲ್ಲಿ ಅಧಿಕಾರ ದರ್ಪ: ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ – ಸಚಿವನ ಸಹೋದರ ವಿರುದ್ಧ ಗಂಭೀರ ಆರೋಪ

ಮಧ್ಯಪ್ರದೇಶದಲ್ಲಿ ಜನಪ್ರತಿನಿಧಿಗಳ ವರ್ತನೆ ಕುರಿತ ವಿವಾದಗಳು ತಣಿಯುವ ಮುನ್ನವೇ ಮತ್ತೊಂದು ಅಧಿಕಾರದ ದರ್ಪದ ಘಟನೆ ಬೆಳಕಿಗೆ ಬಂದಿದೆ. ರಾಜ್ಯ ವಿಧಾನಸಭೆಯ…

9 hours ago

ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಬೆಚ್ಚಿ ಬೀಳಿಸುವ ಕಥೆ ಹೇಳಿದ ಯುವತಿ..!

ಕೆನಡಾದಲ್ಲಿ ಶಿಕ್ಷಣ ಪಡೆಯುವ ಕನಸು ಕಂಡು ಹೋಗುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳ ಜೀವನ ಅಷ್ಟು ಸುಲಭವಿಲ್ಲ ಎಂಬುದು ಮತ್ತೊಮ್ಮೆ ಬೆಳಕಿಗೆ…

9 hours ago

ಚಲಿಸುತ್ತಿದ್ದ ರೈಲಿನಿಂದ ಮಗು ಬಿದ್ದು ದುರಂತ: ಚೈನ್ ಎಳೆದರೂ ನಿಲ್ಲದ ರೈಲು, ತಾಯಿಯ ಕಣ್ಣೀರಿನ ಅಳಲು

ಜಲ್ಪೈಗುರಿ ಮತ್ತು ರಾಮನಗರ ನಡುವಿನ ರೈಲು ಪ್ರಯಾಣದ ವೇಳೆ ಮನಕಲಕುವ ಘಟನೆ ನಡೆದಿದೆ. ಚಲಿಸುತ್ತಿದ್ದ ರೈಲಿನಿಂದ ಮಗು ಕೆಳಗೆ ಬಿದ್ದಿದ್ದು,…

10 hours ago

SSC 2026 ಭರ್ಜರಿ ನೇಮಕಾತಿ: 3,734 ಹುದ್ದೆಗಳು – ಮೇ 4ರೊಳಗೆ ಅರ್ಜಿ ಸಲ್ಲಿಸಲು ಅವಕಾಶ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಕಚೇರಿಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗಾಗಿ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2026ನೇ ಸಾಲಿಗೆ…

15 hours ago

ನಿಶ್ಚಿತಾರ್ಥದ ದಿನವೇ ಯುವತಿ ನಾಪತ್ತೆ: ಮುಸ್ಲಿಂ ಯುವಕನೊಂದಿಗೆ ಪರಾರಿ? ಕುಟುಂಬಸ್ಥರ ಆಕ್ರೋಶ.

ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ನಿಶ್ಚಿತಾರ್ಥ ನಡೆಯಬೇಕಿದ್ದ ದಿನವೇ ಯುವತಿ ನಾಪತ್ತೆಯಾಗಿರುವ ಘಟನೆ ಆತಂಕ ಹುಟ್ಟಿಸಿದೆ. 24…

15 hours ago