ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಆತಂಕ ಮತ್ತು ಅಶಾಂತಿಯ ನಡುವೆಯೇ, ಕಾಶ್ಮೀರದ ಒಬ್ಬ ಯುವಕ ತನ್ನ ಮಾನವೀಯತೆ ಮತ್ತು ಸಾಹಸದಿಂದ ಪ್ರಾಣಾಪಾಯದಲ್ಲಿ ಇದ್ದ ಬಾಲಕನಿಗೆ ಹೊಸ ಜೀವ ನೀಡಿದ ಘಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಭಯೋತ್ಪಾದಕರ ದಾಳಿಯ ಸಮಯದಲ್ಲಿ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನು ವೇದನೆಯಿಂದ ಅಳುತ್ತಾ, ತಾನು ಎಲ್ಲಿ ಇರುವೆನು ಎಂಬುದನ್ನು ಅರಿಯದ ಸ್ಥಿತಿಯಲ್ಲಿ ಅಸಹಾಯಕರಾಗಿ ಬಿದ್ದಿದ್ದ. ಈ ಸಂದರ್ಭದಲ್ಲಿ, ಅಲ್ಲಿಯೇ ಹಾದುಹೋಗುತ್ತಿದ್ದ ಕಾಶ್ಮೀರಿ ಯುವಕನೊಬ್ಬ ಆತಂಕಗೊಂಡ ಬಾಲಕನನ್ನು ನೋಡುತ್ತಿದ್ದಂತೆಯೇ ತಕ್ಷಣ ನೆರವಿಗೆ ಧಾವಿಸಿದ. ಯಾವುದೇ ಪ್ರಾಣಾಪಾಯದ ಭಯವಿಲ್ಲದೆ, ಬಾಲಕನನ್ನು ತನ್ನ ಹೆಗಲ ಮೇಲೆ ಎತ್ತಿಕೊಂಡು ಕಿಲೋಮೀಟರ್ಗಳಷ್ಟು ದೂರ ಓಡಿ ಆಸ್ಪತ್ರೆಗೆ ಸೇರಿಸಿದ.
ಈ ಸಮಯೋಚಿತ ನೆರವಿನಿಂದ, ಬಾಲಕನ ಪ್ರಾಣ ಉಳಿಯಿತು. ಈ ಘಟನೆ ಕೇವಲ ಮಾನವೀಯತೆಯ ಉದಾಹರಣೆ ಮಾತ್ರವಲ್ಲ, ಕಾಶ್ಮೀರದ ನೆಲದಲ್ಲಿ ಸಹಾನುಭೂತಿ ಮತ್ತು ಸಹೋದರತ್ವ ಇನ್ನೂ ಜೀವಂತವಾಗಿರುವುದನ್ನು ಸಾಬೀತುಪಡಿಸಿದೆ. ಯುವಕನ ಸಾಹಸ ಮತ್ತು ದಯಾಳುತೆಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ.
ಉತ್ತರ ಕನ್ನಡ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಅಣ್ಣನನ್ನೇ ತಮ್ಮ ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ…
ಗದಗ ಜಿಲ್ಲೆಯ ಡಿವೈಎಸ್ಪಿ ಮುರ್ತುಜಾ ಖಾದ್ರಿ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸಿದ್ದರಾಮೇಶ್ವರ ಗಡದ ವಿರುದ್ಧ ಗದಗ ಜೆಎಂಎಫ್ಸಿ…
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಓಲಾ, ಉಬರ್ ಹಾಗೂ ರಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳನ್ನು ತಕ್ಷಣವೇ ನಿಷೇಧಿಸಬೇಕು ಎಂದು ಆಗ್ರಹಿಸಿ…
ಶಿರಸಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಬ್ಯಾಗ್ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಶಿರಸಿ ನಗರ…
ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…
ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…