Latest

ಲೋಕಾಯುಕ್ತ ಬಲೆಗೆ ಬಿದ್ದ ಕಾರವಾರದ ಜಿಲ್ಲಾ ಸರ್ಜನ್‌: ಭ್ರಷ್ಟಾಚಾರದ ಆರೋಪದ ಮೇಲೆ ಡಾ. ಶಿವಾನಂದ ಕುಡ್ತಳಕರ್ ಬಂಧನ

ಕಾರವಾರ, ಜುಲೈ 10: ಹೆಸರುತೊಂದಿದ ವೈದ್ಯಕೀಯ ಸೇವೆ, ಜನರ ಮನದಲ್ಲಿ ‘ಆಪತ್ಪಾಂಡವ’ ಎಂಬ ಪದದ ವ್ಯಾಖ್ಯಾನವೆನಿಸಿದ್ದವರು—ಅವರೇ ಈಗ ಭ್ರಷ್ಟಾಚಾರದ ಕಳ್ಳಬೇಟೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಕಾರವಾರದ ಜಿಲ್ಲಾ ಸರ್ಜನ್ ಹಾಗೂ ಪ್ರಸಿದ್ಧ ಸ್ತ್ರೀರೋಗ ತಜ್ಞ ಡಾ. ಶಿವಾನಂದ ಕುಡ್ತಳಕರ್ ಅವರನ್ನು ಲೋಕಾಯುಕ್ತ ಇಲಾಖೆ ಭ್ರಷ್ಟಾಚಾರದ ಪ್ರಕರಣದಲ್ಲಿ ಬಂಧಿಸಿದೆ.

ವರ್ಷಗಳ ಕಾಲ ಸರ್ಕಾರಿ ವೈದ್ಯರ ಹುದ್ದೆಯಲ್ಲಿದ್ದ ಡಾ. ಕುಡ್ತಳಕರ್ ಅವರ ಖಾಸಗಿ ಕ್ಲಿನಿಕ್‌ ಕೂಡ ಜನಪ್ರಿಯವಾಗಿತ್ತು. ಆದರೆ ಈ ಮಧ್ಯೆ, ಬಹುತೇಕ ಬಡರೋಗಿಗಳಿಗೂ ಅವರು ಸರ್ಕಾರಿ ಆಸ್ಪತ್ರೆಯಲ್ಲಿಯೇ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ಆರೋಪಗಳು ಇತ್ತಿಚೆಗೆ ಬಿಗಿಯಾಗುತ್ತ ಬಂದಿದ್ದವು.

2020ರಲ್ಲೇ ಗರ್ಭಿಣಿ ಗೀತಾ ಭಾನಾವಳಿ ಅವರ ಸಾವಿಗೆ ಸಂಬಂಧಿಸಿದಂತೆ ಕಾರವಾರದಲ್ಲಿ ಡಾ. ಕುಡ್ತಳಕರ್ ವಿರುದ್ಧ ಭಾರೀ ಪ್ರತಿಭಟನೆ ನಡೆದಿತ್ತು. ಸ್ಥಳೀಯರು ಅವರ ವರ್ಗಾವಣೆಗೂ ಒತ್ತಾಯಿಸಿ ಹೋರಾಟ ನಡೆಸಿದ್ದರು. ಅವರು ಕಾರವಾರದಿಂದ ಬೇರೊಂದು ಕಡೆಗೆ ವರ್ಗಾಯಿಸಲ್ಪಟ್ಟರೂ ಮತ್ತೆ ಇದೇ ಸ್ಥಳಕ್ಕೆ ಹಿಂತಿರುಗಿ, ಜಿಲ್ಲಾ ಸರ್ಜನ್ ಆಗಿ ಅಧಿಕಾರ ಮುಂದುವರಿಸಿದ್ದರು.

ಇತ್ತೀಚೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಹಾಸಿಗೆ ಹಾಗೂ ಇತರ ಸಾಮಗ್ರಿಗಳ ಪೂರೈಕೆಗೆ ಸಂಬಂಧಿಸಿದಂತೆ ಗುತ್ತಿಗೆದಾರ ಮೌಸೀನ್ ಶೇಖ್ ಎಂಬವರಿಂದ ಡಾ. ಕುಡ್ತಳಕರ್ 75 ಸಾವಿರ ರೂಪಾಯಿ ಲಂಚಕ್ಕೆ ಒತ್ತಡ ಹಾಕಿದ್ದಾರೆ ಎಂಬ ಮಾಹಿತಿ ಬಂದಿದೆ. ಮೊದಲ ಹಂತವಾಗಿ ಅವರು ಜುಲೈ 9ರ ರಾತ್ರಿ ₹20,000 ತೆಗೆದುಕೊಂಡಿದ್ದರೆ, ಜುಲೈ 10ರಂದು ಮತ್ತಷ್ಟು ಹಣಕ್ಕಾಗಿ ಒತ್ತಾಯಿಸುತ್ತಿದ್ದರು.

ಪದೇಪದೆ ಆಗುತ್ತಿರುವ ಲಂಚದ ಬೇಡಿಕೆಯಿಂದ ತೀಕ್ಷ್ಣಗೊಂಡ ಮೌಸೀನ್ ಶೇಖ್, ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದರು. ಅದಕ್ಕೆ ತಕ್ಷಣ ಸ್ಪಂದನೆ ನೀಡಿದ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಹಣ ಪಡೆಯುತ್ತಿದ್ದ ಕ್ಷಣದಲ್ಲಿ ಡಾ. ಕುಡ್ತಳಕರ್ ಅವರನ್ನು ಲೋಕುಾಯುಕ್ತ ಪೊಲೀಸರು ಬಲೆಗೆ ತೆಗೆದುಕೊಂಡರು.

ಪ್ರಭಾವಿ ವೈದ್ಯರಾದ ಡಾ. ಕುಡ್ತಳಕರ್ ಮೇಲೆ ನಡೆದ ಈ ದಾಳಿ ಭ್ರಷ್ಟ ವೈದ್ಯಕೀಯ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರಲ್ಲಿ ಹೊಸ ಭರವಸೆಯ ಕಿರಣ ಹರಡಿದ್ದು, ಅಧಿಕಾರ ದುರುಪಯೋಗಿಸುವವರಿಗೆ ಇದು ಸ್ಪಷ್ಟ ಎಚ್ಚರಿಕೆ ಸಂಚಿಕೆಯಾಗಿದೆ.

nazeer ahamad

Recent Posts

ಅತ್ತಿಗೆ ಜೊತೆಗಿನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಅಣ್ಣ ;ಕಾಡಿಗೆ ಕರೆದೊಯ್ದು ತಮ್ಮನಿಂದ ಭೀಕರ ಕೊಲೆ..!

ಉತ್ತರ ಕನ್ನಡ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಅಣ್ಣನನ್ನೇ ತಮ್ಮ ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ…

36 minutes ago

ಗದಗದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಖಾಸಗಿ ದೂರು; ಎಫ್‌ಐಆರ್ ವಿಳಂಬ ಆರೋಪ

ಗದಗ ಜಿಲ್ಲೆಯ ಡಿವೈಎಸ್ಪಿ ಮುರ್ತುಜಾ ಖಾದ್ರಿ ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸಿದ್ದರಾಮೇಶ್ವರ ಗಡದ ವಿರುದ್ಧ ಗದಗ ಜೆಎಂಎಫ್‌ಸಿ…

2 hours ago

ರಾಪಿಡೋ, ಓಲಾ, ಉಬರ್ ಬೈಕ್ ಟ್ಯಾಕ್ಸಿ ಸೇವೆ ನಿಷೇಧಕ್ಕೆ ಆಗ್ರಹ; ಜಿಲ್ಲಾಧಿಕಾರಿಗೆ ಶಿರಸಿ ಆಟೋ ಚಾಲಕರ ಸಂಘ ಮನವಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಓಲಾ, ಉಬರ್ ಹಾಗೂ ರಾಪಿಡೋ ಬೈಕ್ ಟ್ಯಾಕ್ಸಿ ಸೇವೆಗಳನ್ನು ತಕ್ಷಣವೇ ನಿಷೇಧಿಸಬೇಕು ಎಂದು ಆಗ್ರಹಿಸಿ…

2 hours ago

ಶಿರಸಿ ಬಸ್ ನಿಲ್ದಾಣದಲ್ಲಿ 1.59 ಲಕ್ಷ ರೂ. ಚಿನ್ನಾಭರಣ ಕಳವು ಪ್ರಕರಣ ಭೇದಿಸಿದ ಪೊಲೀಸರು; ಬೆಂಗಳೂರು ಮೂಲದ ಮಹಿಳೆ ಬಂಧನ

ಶಿರಸಿ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಶಿರಸಿ ನಗರ…

2 hours ago

ಲೋಕಾಯುಕ್ತ ಅಧಿಕಾರಿ ಎಂದು ಎಂಜಿನಿಯರ್‌ಗೆ ಹಣ ಬೇಡಿಕೆ ಇಟ್ಟ ಆರೋಪಿ ಬಂಧನ

ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಪರಿಚಯ ನೀಡಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ನಿಂದ ಹಣ ವಸೂಲಿ ಮಾಡಲು ಯತ್ನಿಸಿದ…

20 hours ago

ಉತಾರ ನೀಡಲು ₹1.5 ಲಕ್ಷ ಲಂಚ: ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಬಲೆಗೆ

ಜಮೀನಿನ ಖಾತಾ ಉತಾರ ನೀಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಬಿಜನಗೇರಾ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮೀ ಪ್ಯಾಟಿ ಲೋಕಾಯುಕ್ತ ಅಧಿಕಾರಿಗಳ…

1 day ago