ಕಾರವಾರ, ಜುಲೈ 10: ಹೆಸರುತೊಂದಿದ ವೈದ್ಯಕೀಯ ಸೇವೆ, ಜನರ ಮನದಲ್ಲಿ ‘ಆಪತ್ಪಾಂಡವ’ ಎಂಬ ಪದದ ವ್ಯಾಖ್ಯಾನವೆನಿಸಿದ್ದವರು—ಅವರೇ ಈಗ ಭ್ರಷ್ಟಾಚಾರದ ಕಳ್ಳಬೇಟೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಕಾರವಾರದ ಜಿಲ್ಲಾ ಸರ್ಜನ್ ಹಾಗೂ ಪ್ರಸಿದ್ಧ ಸ್ತ್ರೀರೋಗ ತಜ್ಞ ಡಾ. ಶಿವಾನಂದ ಕುಡ್ತಳಕರ್ ಅವರನ್ನು ಲೋಕಾಯುಕ್ತ ಇಲಾಖೆ ಭ್ರಷ್ಟಾಚಾರದ ಪ್ರಕರಣದಲ್ಲಿ ಬಂಧಿಸಿದೆ.
ವರ್ಷಗಳ ಕಾಲ ಸರ್ಕಾರಿ ವೈದ್ಯರ ಹುದ್ದೆಯಲ್ಲಿದ್ದ ಡಾ. ಕುಡ್ತಳಕರ್ ಅವರ ಖಾಸಗಿ ಕ್ಲಿನಿಕ್ ಕೂಡ ಜನಪ್ರಿಯವಾಗಿತ್ತು. ಆದರೆ ಈ ಮಧ್ಯೆ, ಬಹುತೇಕ ಬಡರೋಗಿಗಳಿಗೂ ಅವರು ಸರ್ಕಾರಿ ಆಸ್ಪತ್ರೆಯಲ್ಲಿಯೇ ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂಬ ಆರೋಪಗಳು ಇತ್ತಿಚೆಗೆ ಬಿಗಿಯಾಗುತ್ತ ಬಂದಿದ್ದವು.
2020ರಲ್ಲೇ ಗರ್ಭಿಣಿ ಗೀತಾ ಭಾನಾವಳಿ ಅವರ ಸಾವಿಗೆ ಸಂಬಂಧಿಸಿದಂತೆ ಕಾರವಾರದಲ್ಲಿ ಡಾ. ಕುಡ್ತಳಕರ್ ವಿರುದ್ಧ ಭಾರೀ ಪ್ರತಿಭಟನೆ ನಡೆದಿತ್ತು. ಸ್ಥಳೀಯರು ಅವರ ವರ್ಗಾವಣೆಗೂ ಒತ್ತಾಯಿಸಿ ಹೋರಾಟ ನಡೆಸಿದ್ದರು. ಅವರು ಕಾರವಾರದಿಂದ ಬೇರೊಂದು ಕಡೆಗೆ ವರ್ಗಾಯಿಸಲ್ಪಟ್ಟರೂ ಮತ್ತೆ ಇದೇ ಸ್ಥಳಕ್ಕೆ ಹಿಂತಿರುಗಿ, ಜಿಲ್ಲಾ ಸರ್ಜನ್ ಆಗಿ ಅಧಿಕಾರ ಮುಂದುವರಿಸಿದ್ದರು.
ಇತ್ತೀಚೆಗೆ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಹಾಸಿಗೆ ಹಾಗೂ ಇತರ ಸಾಮಗ್ರಿಗಳ ಪೂರೈಕೆಗೆ ಸಂಬಂಧಿಸಿದಂತೆ ಗುತ್ತಿಗೆದಾರ ಮೌಸೀನ್ ಶೇಖ್ ಎಂಬವರಿಂದ ಡಾ. ಕುಡ್ತಳಕರ್ 75 ಸಾವಿರ ರೂಪಾಯಿ ಲಂಚಕ್ಕೆ ಒತ್ತಡ ಹಾಕಿದ್ದಾರೆ ಎಂಬ ಮಾಹಿತಿ ಬಂದಿದೆ. ಮೊದಲ ಹಂತವಾಗಿ ಅವರು ಜುಲೈ 9ರ ರಾತ್ರಿ ₹20,000 ತೆಗೆದುಕೊಂಡಿದ್ದರೆ, ಜುಲೈ 10ರಂದು ಮತ್ತಷ್ಟು ಹಣಕ್ಕಾಗಿ ಒತ್ತಾಯಿಸುತ್ತಿದ್ದರು.
ಪದೇಪದೆ ಆಗುತ್ತಿರುವ ಲಂಚದ ಬೇಡಿಕೆಯಿಂದ ತೀಕ್ಷ್ಣಗೊಂಡ ಮೌಸೀನ್ ಶೇಖ್, ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದರು. ಅದಕ್ಕೆ ತಕ್ಷಣ ಸ್ಪಂದನೆ ನೀಡಿದ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಹಣ ಪಡೆಯುತ್ತಿದ್ದ ಕ್ಷಣದಲ್ಲಿ ಡಾ. ಕುಡ್ತಳಕರ್ ಅವರನ್ನು ಲೋಕುಾಯುಕ್ತ ಪೊಲೀಸರು ಬಲೆಗೆ ತೆಗೆದುಕೊಂಡರು.
ಪ್ರಭಾವಿ ವೈದ್ಯರಾದ ಡಾ. ಕುಡ್ತಳಕರ್ ಮೇಲೆ ನಡೆದ ಈ ದಾಳಿ ಭ್ರಷ್ಟ ವೈದ್ಯಕೀಯ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರಲ್ಲಿ ಹೊಸ ಭರವಸೆಯ ಕಿರಣ ಹರಡಿದ್ದು, ಅಧಿಕಾರ ದುರುಪಯೋಗಿಸುವವರಿಗೆ ಇದು ಸ್ಪಷ್ಟ ಎಚ್ಚರಿಕೆ ಸಂಚಿಕೆಯಾಗಿದೆ.
ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…
ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…
ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…
ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…
ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…
ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…