ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರಗಳು ಇತ್ತೀಚಿಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ.
ಮತ್ತೊಂದು ಭ್ರಷ್ಟಾಚಾರ: ಜನವರಿ-01-2025 ರಂದು ಅಬಕಾರಿ ಆಯುಕ್ತರು, 35 ಅಧಿಕಾರಿಗಳನ್ನು ಅಬಕಾರಿ ನಿರೀಕ್ಷಕರ ವೃಂದಕ್ಕೆ ಸ್ಥಾನಪನ್ನ ಪದೋನ್ನತಿ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ವರೆಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿರುತ್ತಾರೆ. ಈ ಆದೇಶ ಹೊರಡಿಸಿದ ಮರುದಿನವೇ ಅಬಕಾರಿ ಆಯುಕ್ತರಾದ ರವಿಶಂಕರ್ ರವರ ವರ್ಗಾವಣೆಯಾಗಿದೆ. ದಿಡೀರನೆ ಈ ರೀತಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದಕ್ಕೆಲ್ಲಾ ಕಾರಣ ಅಬಕಾರಿ ಮಂತ್ರಿಗಳಾದ ಬಿ.ಆರ್ ತಿಮ್ಮಾಪುರ ರವರು ಎಂಬ ಮಾತು ಇಲಾಖೆಯಲ್ಲೆಲ್ಲಾ ಓಡಾಡುತ್ತಿದೆ.
ಈ ಮಾತಿಗೆ ಪುಷ್ಟಿ ಕೊಡುವಂತೆ ಅಬಕಾರಿ ಅಧಿಕಾರಿಗಳಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಿದ ದಿನವೇ ಅದನ್ನು ತಡೆ ಹಿಡಿಯುವಂತೆ ಮಂತ್ರಿಗಳು ಹೇಳಿರುವ ಮಾಹಿತಿ ಲಭ್ಯವಾಗಿದ್ದು ಇದು ಯಾವ ಉದ್ದೇಶಕ್ಕೆ ಎಂಬುದರ ಸ್ಪಷ್ಟ ಮಾಹಿತಿಯನ್ನು ಹೊರಹಾಕಿರುವುದಿಲ್ಲ. ಮೂಲಗಳ ಪ್ರಕಾರ ಪದೋನ್ನತಿ ನೀಡುವ ವಿಚಾರದಲ್ಲಿ ಹಣ ಪಡೆದು ಬಡ್ತಿ ನೀಡಬೇಕೆಂಬ ಉದ್ದೇಶದಲ್ಲಿ ಮಂತ್ರಿಗಳಿದ್ದು, ಅದೇ ಉದ್ದೇಶದಿಂದ ಅಬಕಾರಿ ಆಯುಕ್ತ ರವಿಶಂಕರ್ ರವರು ನೀಡಿರುವ ಆದೇಶವನ್ನು ತಡೆಹಿಡಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪದೋನ್ನತಿ ಪಡೆದಿರುವ ಅಧಿಕಾರಿಗಳು ಮತ್ತು ಮಂತ್ರಿಗಳ ಮಧ್ಯೆ ಶೆಟ್ಟಿ ಎಂಬಾತ ಮಧ್ಯಸ್ಥಿಕೆ ವಹಿಸಿದ್ದು ಹಣದ ವಿಚಾರದಲ್ಲಿ ಹಲವು ಅಧಿಕಾರಿಗಳ ಮಧ್ಯೆ ಮಾತುಕತೆ ನಡೆಯುತ್ತಿದೆ ಎಂಬ ಮಾಹಿತಿಯು ಸಹ ಲಭ್ಯವಾಗಿದೆ.
ಪದೋನ್ನತಿ ಪಡೆದಿರುವ ಅಧಿಕಾರಿಗಳ ಪಟ್ಟಿಯಲ್ಲಿರುವ ಕೆಲವರು ಅಬಕಾರಿ ಆಯುಕ್ತರು ತುಂಬಾ ಒಳ್ಳೆಯವರು ಅವರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರೆ! ಇನ್ನೂ ಕೆಲವರು ಅವರು ಮಾಡಿರುವ ಕೆಲಸದಲ್ಲಿ ಹಣ ಮಾಡುವ ನಿಟ್ಟಿನಲ್ಲಿ ಮಂತ್ರಿಗಳು ಈಗ ಮಧ್ಯದಲ್ಲಿ ಬಂದಿದ್ದಾರೆ ಎಂಬ ಮಾತುಗಳನ್ನು ಸಹ ಆಡುತ್ತಿದ್ದಾರೆ.
ಇಲಾಖೆಯಲ್ಲಿ ಕೇಳಿಬರುತ್ತಿರುವ ಮಾತುಗಳಂತೆ ಅಬಕಾರಿ ಮಂತ್ರಿಗಳಾದ ತಿಮ್ಮಾಪುರ ರವರು ಪದೋನ್ನತಿ ವಿಚಾರದಲ್ಲಿ ಹಣ ಮಾಡಲು ಮುಂದಾಗಿದ್ದಾರಾ? ಇತ್ತೀಚಿಗೆ ವರ್ಗಾವಣೆಯ ವಿಚಾರಗಳಲ್ಲಿ ಲಕ್ಷಾಂತರ ರೂ ಹಣ ಪಡೆಯುತ್ತಿರುವ ಮಾಹಿತಿಗಳು ಹೊರಬಿದ್ದಿದ್ದು ಈಗ ಅಧಿಕಾರಿಗಳ ಪದೋನ್ನತಿ ವಿಚಾರದಲ್ಲೂ ಲಕ್ಷಾಂತರ ರೂ ಭ್ರಷ್ಟಾಚಾರ ನಡೆಯುತ್ತಿರುವ ಮಾಹಿತಿಗಳು ಲಭ್ಯವಾಗುತ್ತಿವೆ. ನಿಜಕ್ಕೂ ಇದು ಕಾಂಗ್ರೆಸ್ ಸರ್ಕಾರದ ಹಗಲು ದರೋಡೆಯೇ? ಪದೋನ್ನತಿ ಪಡೆದಿರುವ ಪಟ್ಟಿಯಲ್ಲಿರುವ ಬಹುತೇಕ ಅಧಿಕಾರಿಗಳು ಅಲ್ಪಸಂಖ್ಯಾತರು, ಎಸ್.ಸಿ/ಎಸ್.ಟಿ ಹಾಗೂ ಹಿಂದುಳಿದ ವರ್ಗದವರಾಗಿರುತ್ತಾರೆ. ಅಹಿಂದ ನಾಯಕರಾದ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಅಹಿಂದ ದವರಿಂದಲೇ ಲೂಟಿ ಹೊಡೆಯುತ್ತಿರುವುದು ನೈತಿಕ ಅಧಃಪತನಕ್ಕಿಳಿದಿರುವುದಕ್ಕೆ ಸಾಕ್ಷಿಯಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಪದೋನ್ನತಿ, ವರ್ಗಾವಣೆ ವಿಚಾರಗಳಲ್ಲಿ ಅಧಿಕಾರಿಗಳ ಬಳಿ ಹಣ ಪಡೆದರೆ ಅಧಿಕಾರಿಗಳು ಪುನಃ ಆ ಹಣವನ್ನು ಎಲ್ಲಿಂದ ಪಡೆಯುತ್ತಾರೇ? ಅಧಿಕಾರಿಗಳ ಬಳಿ ಹಣ ಪಡೆದು ಮಂತ್ರಿಗಳು ಭ್ರಷ್ಟಾಚಾರ ನಡೆಸಿದರೆ ಕೊಟ್ಟಿರುವ ಹಣವನ್ನು ಹಿಂಪಡೆಯಲು ಅಧಿಕಾರಿಗಳು ಮತ್ತೆ ಭ್ರಷ್ಟಾಚಾರ ಮಾಡಲು ಮುಂದಾಗುತ್ತಾರೆ. ಭ್ರಷ್ಟಾಚಾರ ತಡೆಯಬೇಕಾದ ಜಾಗದಲ್ಲಿ ಸರ್ಕಾರವೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟಂತಾಗಿದೆ. ಆದ್ದರಿಂದ ಭ್ರಷ್ಟ ಮಂತ್ರಿಯಾದ ಬಿ ಆರ್ ತಿಮ್ಮಾಪುರ ರವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ, ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಸಮಗ್ರ ತನಿಖೆ ನಡೆಸಿ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸರ್ಕಾರದ ಘನತೆಯನ್ನು ಎತ್ತಿ ಹಿಡಿಯಬೇಕೆಂದು ಭ್ರಷ್ಟರ ಬೇಟೆ ಪತ್ರಿಕೆ ಆಗ್ರಹಿಸುತ್ತದೆ.
ಶಿರಸಿ: ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಹಳ್ಳಿಯಲ್ಲಿ ಹಾವು ಕಚ್ಚಿದ ಪರಿಣಾಮ ಬಾಲಕ ಮೃತಪಟ್ಟ ಘಟನೆ ದುಃಖಕ್ಕೆ ಕಾರಣವಾಗಿದ್ದು, ಸರ್ಕಾರಿ ಆಸ್ಪತ್ರೆಯ…
ಭಟ್ಕಳ: ಅತಿವೇಗದಲ್ಲಿ ಚಲಿಸುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ…
ತುಮಕೂರು: ಪ್ರೇಮಿಗಳ ನಡುವಿನ ಮನಸ್ತಾಪ ಭೀಕರ ತಿರುವು ಪಡೆದುಕೊಂಡ ಪರಿಣಾಮ, ಯುವಕನೊಬ್ಬ ಯುವತಿಗೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ಕಾರಿನಲ್ಲೇ…
ಧಾರವಾಡ: ಪತ್ನಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದ ಪತಿಗೆ ಧಾರವಾಡದ ನಾಲ್ಕನೇ…
ಮುಂಬೈ: ಮುಹರಂ ಮೆರವಣಿಗೆಯ ವೇಳೆ ಸಾರ್ವಜನಿಕರಿಗೆ ವಿಷಪ್ರಾಶನ ಮಾಡಿಸಲು ಸಂಚು ರೂಪಿಸಲಾಗಿದೆ ಎಂಬ ಶಂಕೆಯ ಮೇರೆಗೆ ಮುಂಬೈ ಪೊಲೀಸರು ಭಾರೀ…
ಬೆಂಗಳೂರು: ನಗರದ ಜೆ.ಪಿ. ನಗರದಲ್ಲಿ ಭಾನುವಾರ ಸಂಜೆ ರೌಡಿಶೀಟರ್ ರಾಜುಬಾಯ್ ಎಂಬಾತನನ್ನು ದುಷ್ಕರ್ಮಿಗಳ ಗುಂಪೊಂದು ಸಾರ್ವಜನಿಕರ ಕಣ್ಣೆದುರೇ ಅಟ್ಟಾಡಿಸಿ ಭೀಕರವಾಗಿ…