ಬೆಂಗಳೂರು, ಆಗಸ್ಟ್ 7: 2022ರ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ಸಂಚಲನಕಾರಿ ಮಾಹಿತಿ ಹೊರಬಿದ್ದಿದೆ. ಈ ಸ್ಫೋಟದ ಮೂಲ ಉದ್ದೇಶ ಮಂಗಳೂರು ಅಲ್ಲ, ಧರ್ಮಸ್ಥಳದ ಪ್ರಸಿದ್ಧ ಮಂಜುನಾಥಸ್ವಾಮಿ ದೇವಾಲಯವಾಗಿತ್ತೆಂಬ ಸ್ಫೋಟಕ ಮಾಹಿತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ತನಿಖೆ ವೇಳೆ ಬಹಿರಂಗಪಡಿಸಿದೆ.
ಇ.ಡಿ. ವರದಿ ಪ್ರಕಾರ, ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಈ ಸ್ಫೋಟಕ ಸಾಧನವನ್ನು ಧರ್ಮಸ್ಥಳದ ದೇಗುಲದಲ್ಲಿ ಇಟ್ಟು ಬಾಂಬ್ ಸ್ಫೋಟ ನಡೆಸುವ ಪ್ಲಾನ್ ರೂಪಿಸಿಕೊಂಡಿದ್ದ. ಆದರೆ, ಬಾಂಬ್ಗೆ ಬಳಸಲಾಗಿದ್ದ ಟೈಮರ್ ಅನ್ನು ತಪ್ಪಾಗಿ ಹೊಂದಿಸಿದ್ದ ಕಾರಣ, ಸಂಚು ವಿಫಲವಾಯಿತು. ಮೂಲತಃ 90 ನಿಮಿಷಗಳ ನಂತರ ಸ್ಫೋಟವಾಗಬೇಕಾಗಿದ್ದ ಬಾಂಬ್, ಕೇವಲ 9 ಸೆಕೆಂಡುಗಳಲ್ಲಿ ಸ್ಫೋಟಗೊಂಡು ಆಟೋ ರಿಕ್ಷಾದೊಳಗೆ ಭಯಾನಕ ದುರಂತ ಸೃಷ್ಟಿಸಿತ್ತು.
ಈ ಘಟನೆಯ ನಂತರ ಶಾರಿಕ್ನ್ನು ಗಂಭೀರ ಗಾಯದ ಸ್ಥಿತಿಯಲ್ಲಿ ಬಂಧಿಸಲಾಗಿತ್ತು ಮತ್ತು ತನಿಖೆ ಮುಂದುವರೆದಿತ್ತು. ಇದೀಗ ಇ.ಡಿ. ನಡೆಸಿದ ವಿಚಾರಣೆಯು ಶಾರಿಕ್ ಮತ್ತು ಇತರ ಶಂಕಿತರು ಹಿಂದಿನಿಂದಲೂ ಧರ್ಮಸ್ಥಳದ ದೇವಾಲಯವನ್ನು ಉಗ್ರ ಕ್ರಮಗಳ ಲಕ್ಸ್ಯವನ್ನಾಗಿ ಮಾಡಿಕೊಂಡಿದ್ದನ್ನು ದೃಢಪಡಿಸಿದೆ.
ಪ್ರಸಿದ್ಧ ಧಾರ್ಮಿಕ ತಾಣವನ್ನೇ ನಾಶಮಾಡಲು ಸಂಚು ರೂಪಿಸಲಾಗಿದ್ದ ಈ ಬೆಳವಣಿಗೆ ಧರ್ಮಸ್ಥಳದ ಭದ್ರತೆ ಕುರಿತಾಗಿ ಗಂಭೀರ ಚರ್ಚೆಗೆ ಕಾರಣವಾಗಿದ್ದು, ತನಿಖಾ ಸಂಸ್ಥೆಗಳು ಮತ್ತಷ್ಟು ಎಚ್ಚರದಿಂದ ಕಾರ್ಯನಿರ್ವಹಿಸುತ್ತಿವೆ.
ಇದೀಗ ಈ ಹೊಸ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಹಿಂದಿನ ಸ್ಫೋಟದ ಹಿಂದೆ ಉಳ್ಳ ನಿಖರ ಉದ್ದೇಶ ಮತ್ತು ಶಾರಿಕ್ನ ಸಂಪರ್ಕಗಳು ಮತ್ತಷ್ಟು ತೆರೆದ ಮೇಲೆ ಬರಲಿವೆ ಎಂದು ನಿರೀಕ್ಷಿಸಲಾಗಿದೆ.
ತುಮಕೂರು ಜಿಲ್ಲೆಯ ಮದರಸಾವೊಂದರಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಅಮಾನವೀಯ ದೌರ್ಜನ್ಯ ಮತ್ತು ಬಾಲಕಾರ್ಮಿಕ ಶೋಷಣೆ ನಡೆಸಲಾಗುತ್ತಿದ್ದ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ…
ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…
ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…
ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…
ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…