Latest

ಆನ್‌ಲೈನ್ ಸಭೆಯಲ್ಲಿ ಅಸಭ್ಯ ವಿಡಿಯೋ ಪ್ರಸಾರ: ವಿಟಿಯು ಭದ್ರತಾ ಲೋಪದಿಂದ ಶೈಕ್ಷಣಿಕ ವಲಯದಲ್ಲಿ ಹಂಗಾಮ

ಬೆಳಗಾವಿ: ರಾಜ್ಯದ ಪ್ರಮುಖ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಆನ್‌ಲೈನ್ ಸಭೆಯೊಂದರಲ್ಲಿ ತಾಂತ್ರಿಕ ದೌರ್ಬಲ್ಯದಿಂದ ಉಂಟಾದ ಮುಜುಗರಕಾರಿ ಘಟನೆಗೆ ವೃತ್ತಿಯಾಗಿದ್ದು, ಶೈಕ್ಷಣಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ರಾಜ್ಯದ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರಿಗೆ ಗೂಗಲ್ ಮೀಟ್‌ ಮೂಲಕ ಸಭೆ ಏರ್ಪಡಿಸಲಾಗಿತ್ತು. ಈ ಸಭೆಯು ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ವಿಚಾರಗಳ ಕುರಿತಂತೆ ಚರ್ಚೆ ನಡೆಸುವ ಉದ್ದೇಶ ಹೊಂದಿದ್ದು, ಕುಲಪತಿ ತಮ್ಮ ಸೂಚನೆಗಳನ್ನು ನೀಡುತ್ತಿದ್ದ ಸಂದರ್ಭದಲ್ಲೇ ಅಸಭ್ಯ ವಿಡಿಯೋ ಒಂದು ಪ್ರಸಾರವಾದವು.

ಅಸಹಜ ದೃಶ್ಯಗಳು ಮಧ್ಯೆ ಹರಿದಾಡಿದಾಗ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಾಂಶುಪಾಲರು, ಅಧ್ಯಾಪಕರು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ಆತಂಕಕ್ಕೀಡಾದರು. ವಿದ್ಯುನ್ಮಾನ ವೇದಿಕೆಯಲ್ಲಿ ಇಂತಹ ಘಟನೆ ನಡೆಯುವುದು ತೀವ್ರ ಆತಂಕದ ವಿಷಯವಾಗಿದ್ದು, ವಿಶ್ವವಿದ್ಯಾಲಯದ ಭದ್ರತಾ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆಯಾಗಿದೆ.

ತಾಂತ್ರಿಕ ತೊಂದರೆ, ಹ್ಯಾಕಿಂಗ್ ಅಥವಾ ಲಿಂಕ್‌ಗೆ ಮುಕ್ತ ಪ್ರವೇಶವಿದ್ದ ಕಾರಣದಿಂದ ಈ ಘಟನೆ ಸಂಭವಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ವೃತ್ತಿಪರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಈ ರೀತಿಯ ಸಭೆ ನಡೆಸಿರುವ ವಿಟಿಯು ನಿರ್ಲಕ್ಷ್ಯಕ್ಕೆ ಟೀಕೆಗಳ ಮಹಾಪೂರವೇ ಹರಿದು ಬಂದಿದೆ.

ಘಟನೆಯ ಬಗ್ಗೆ ವಿಟಿಯು ವತಿಯಿಂದ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ, ಇಂತಹ ಘಟನೆಗಳು ಮರುಕಳಿಸದಂತೆ ಭದ್ರತಾ ವ್ಯವಸ್ಥೆ ಪುನರ್ ಪರಿಶೀಲನೆಗೆ ತಯಾರಾಗಬೇಕಾಗಿದೆ ಎಂಬ ಒತ್ತಾಯ ಶುರುವಾಗಿದೆ.

ತಾಂತ್ರಿಕ ಶಿಕ್ಷಣದಲ್ಲಿ ಮುಂಚೂಣಿಯಲ್ಲಿ ಇರುವ ಸಂಸ್ಥೆಯು ತನ್ನದೇ ಆದ ವೇದಿಕೆಯಲ್ಲಿ ಈ ರೀತಿಯ ಅವ್ಯವಹಾರ ಸಂಭವಿಸುವುದು ಕೇವಲ ಸಂಘಟನೆಗೆ ಮಾತ್ರವಲ್ಲ, ರಾಜ್ಯದ ಶೈಕ್ಷಣಿಕ ನಂಬಿಕೆಗೆಲೂ ಅಪಮಾನವಾಗಿರುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಗೆ ಸಂಬಂಧಿಸಿದ ಟೀಕೆಗಳು ಜೋರಾಗಿದೆ.

ಈ ಸಂದರ್ಭವು ಆನ್‌ಲೈನ್ ಸಭೆಗಳಲ್ಲಿ ಭದ್ರತೆ ಮತ್ತು ಗೌಪ್ಯತೆಯ ಮಹತ್ವವನ್ನು ಮತ್ತೆ ಒತ್ತಿ ತಿಳಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ವಿಟಿಯು ತನ್ನ ತಾಂತ್ರಿಕ ವ್ಯವಸ್ಥೆಗಳನ್ನು ಗಟ್ಟಿಗೊಳಿಸಿ, ಇಂತಹ ನಾಚಿಕೆಗೇಡಿನ ಘಟನೆಗಳ ಪುನರಾವೃತ್ತಿ ತಪ್ಪಿಸಬೇಕಾದ ಅಗತ್ಯತೆಯು ಮೂಡಿಬಂದಿದೆ.

nazeer ahamad

Recent Posts

10 ದಿನಗಳಿಂದ ನೀರಿಲ್ಲದೆ ಪರದಾಟ: ಮುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ

ಭಟ್ಕಳ: ಕುಡಿಯುವ ನೀರಿನ ತೀವ್ರ ಸಮಸ್ಯೆಯಿಂದ ಬೇಸತ್ತ ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮದ ಕೋಟಿ ಖಜಾನೆ ಮನೆ ಪ್ರದೇಶದ ನಿವಾಸಿಗಳು…

7 hours ago

20 ದಿನಗಳಿಂದ ನೀರಿನ ಬವಣೆ: ಮುತ್ತಗಿ ಗ್ರಾಮಸ್ಥರ ಆಕ್ರೋಶ, ಹೋರಾಟದ ಎಚ್ಚರಿಕೆ

ಮುತ್ತಗಿ: ಬಸವನ ಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಳೆದ ಸುಮಾರು 20…

11 hours ago

2 ಕೋಟಿ ವಿಮೆಗಾಗಿ ಮಾಜಿ ಸೈನಿಕನ ಹತ್ಯೆ? ಪ್ರಿಯಕರನ ಸೆಲ್ಫಿ ವಿಡಿಯೋದಿಂದ ಬಯಲಾಯ್ತು ಭೀಕರ ರಹಸ್ಯ!

ಬೆಳಗಾವಿಯಲ್ಲಿ ಮಾಜಿ ಸೈನಿಕನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಸಿಕ್ಕಿದ್ದು, ಮೃತನ ಪತ್ನಿಯ ಪ್ರಿಯಕರನೊಬ್ಬ ಬಿಡುಗಡೆ ಮಾಡಿದ…

13 hours ago

₹11.82 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ: ‘ಮಿಸೆಸ್ ಕೇರಳ 2025’ ವಿಜೇತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧನ

ಮುಂಬೈ: ಹೈಡ್ರೋಪೋನಿಕ್ ಗಾಂಜಾವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ 28 ವರ್ಷದ ಮಾಡೆಲ್ ಹಾಗೂ ‘ಮಿಸೆಸ್ ಕೇರಳ 2025’…

16 hours ago

ಪ್ರತಿ ಅಂತ್ಯಸಂಸ್ಕಾರದಲ್ಲೂ ತಪ್ಪದೆ ಹಾಜರಿ! ಡಂಬಳ ಗ್ರಾಮದ ಬಿಳಿ ನಾಯಿ ಮೂಡಿಸಿದ ವಿಸ್ಮಯ

ಡಂಬಳ: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಅಪರೂಪದ ಹಾಗೂ ವಿಸ್ಮಯಕಾರಿ ಘಟನೆಯೊಂದು ಗ್ರಾಮಸ್ಥರ ಗಮನ ಸೆಳೆಯುತ್ತಿದೆ. ಗ್ರಾಮದ…

17 hours ago

ದಿನಕ್ಕೆ ₹2000 ಆದಾಯ ಕೇಳಿ ಶಾಕ್ ಆದ ಯುವತಿ; ಆಟೋ ಚಾಲಕನನ್ನೇ ಗಂಡನಾಗಿ ಆಯ್ಕೆ!

ಜೀವನದಲ್ಲಿ ನಮ್ಮ ಜೀವನ ಸಂಗಾತಿ ಯಾರು ಆಗುತ್ತಾರೆ ಎಂಬುದನ್ನು ಮುಂಚಿತವಾಗಿ ಊಹಿಸುವುದು ಅಸಾಧ್ಯ. ಕೆಲವೊಮ್ಮೆ ಒಂದು ಸಣ್ಣ ಘಟನೆ ಅಥವಾ…

17 hours ago