ಬಿಜಾಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ಕಿರಾಣಿ ಅಂಗಡಿಗಳು ಹಾಗೂ ಪಾನ್ ಶಾಪ್ ಗಳಲ್ಲಿ ಸಹ ಮದ್ಯ ದೊರೆಯುತ್ತಿದೆ. ಬೇನಾಳ ಆರ್ ಸಿ ಗ್ರಾಮದ ಅಂಗಡಿಗಳಿಗೆ ಒಟಿ, ಬಿಪಿ, ವಿಸ್ಕಿ ಮುಂತಾದ ಬ್ರ್ಯಾಂಡ್ ಗಳನ್ನು ಆಲಮಟ್ಟಿ ಮಾರ್ಗದಿಂದ ಬಂದು ಬೇನಾಳ ಗ್ರಾಮ ಹಾಗೂ ಚಿಮ್ಮಲಗಿ ಗಣಿ ಮುಂತಾದ ಗ್ರಾಮಗಳಿಗೆ KA 29 A 7515 ನಂಬರ್ ನ ಆಟೋದಲ್ಲಿ ದಿನಾಲೂ ಗ್ರಾಮದ ಕಿರಾಣಿ ಅಂಗಡಿಗಳಿಗೆ ಹಾಗೂ ಪಾನ್ ಶಾಪ್ ಗಳಿಗೆ ಪುರೈಕೆ ಮಾಡುತ್ತಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಭ್ರಷ್ಟರ ಬೇಟೆ ಪತ್ರಿಕೆಯ ವರದಿಗಾರರು ಇಂದು ಮುಂಜಾನೆ ಅಕ್ರಮವಾಗಿ ಮದ್ಯಪೂರಕ್ಕೆ ಮಾಡುತ್ತಿರುವ ಆಟೋವನ್ನು ಹಿಡಿದು ಪ್ರಶ್ನಿಸಿರುತ್ತಾರೆ. ಆತ ನನಗೆ ಲೈಸೆನ್ಸ್ ಕೊಟ್ಟಿದ್ದಾರೆ ನಾನು ಎಲ್ಲಾ ಕಡೆ ಪೂರೈಕೆ ಮಾಡಬಹುದು ಎಂದು ಹೇಳಿಕೊಂಡಿರುತ್ತಾನೆ. ಈ ರೀತಿ ಕಿರಾಣಿ ಅಂಗಡಿಗಳಿಗೆ ಹಾಗೂ ಪಾನ್ ಶಾಪ್ ಗಳಿಗೆ ಪೂರೈಕೆ ಮಾಡಲು ಅನುಮತಿ ಕೊಟ್ಟವರು ಯಾರು?
ರಾಜಾರೋಷವಾಗಿ ನನಗೆ ಅನುಮತಿ ಕೊಟ್ಟಿದ್ದಾರೆ ನಾನು ಪೂರೈಕೆ ಮಾಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಾನೆ ಎಂದರೆ ಇವನಿಗೆ ಇಷ್ಟು ಧೈರ್ಯ ಬರಲು ಅಧಿಕಾರಿಗಳೇ ಕಾರಣಾನಾ? ರಾಜ ರೋಷವಾಗಿ ಈ ರೀತಿ ಬೆಳಗಿನ ಹೊತ್ತೆ ಅಕ್ರಮ ಮದ್ಯವನ್ನು ಅಂಗಡಿಗಳಿಗೆ ಪೂರೈಕೆ ಮಾಡುತ್ತಿದ್ದರು ಸಹ ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳಿಗೆ ಏನೆನ್ನಬೇಕು? ಅಕ್ರಮವಾಗಿ ಮದ್ಯ ಸಾಗಾಣಿಕೆಗೆ ಬಿಟ್ಟು ಅಧಿಕಾರಿಗಳೇನು ಕಮಿಷನ್ ಲೆಕ್ಕ ಹಾಕುತ್ತಿದ್ದಾರಾ? ಅಥವಾ ನಮಗೇಕೆ ಎಂದು ನಿದ್ದೆ ಮಾಡುತ್ತಿದ್ದಾರಾ?
ಪ್ರತಿಯೊಂದು ಹಳ್ಳಿಗಳಿಗೆ ಈ ರೀತಿ ಮದ್ಯವನ್ನು ಪೂರೈಕೆ ಮಾಡಿದರೆ ಅಲ್ಲಿನ ಜನರು ಕುಡಿದು ಹಾಳಾಗಿ ಅವರ ಕುಟುಂಬ ಬೀದಿಗೆ ಬಂದರೆ ನೋಡುವವರು ಯಾರು? ಬಾಗೇವಾಡಿ ತಾಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಸಾಗಾಣಿಕೆ ಹಾಗೂ ಮದ್ಯ ಮಾರಾಟಕ್ಕೆ ಕಡಿವಾಣ ಯಾವಾಗ?
ವರದಿ: ಸಂಗಪ್ಪ ಚಲವಾದಿ
ಬೆಂಗಳೂರು: ಕುಂಬಳಗೋಡು ಠಾಣೆ ವ್ಯಾಪ್ತಿಯ ಗೇರುಪಾಳ್ಯದಲ್ಲಿ ಜುಲೈ 25ರಂದು ನಡೆದ ರೀಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಧೀರಜ್…
ಉಡುಪಿ: ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ 27 ವರ್ಷದ ಯುವತಿ ಕೃತಿ ಬಂಗೇರಾ ಅವರು ಮೃತಪಟ್ಟಿರುವ ಘಟನೆ ಉಡುಪಿ ತಾಲೂಕಿನ ಕಲ್ಮಾಡಿಯಲ್ಲಿ…
ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹಾಗೂ ನಟಿಯರ ಸುರಕ್ಷತೆ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಖ್ಯಾತ ನಟಿ ಚಾಂದಿನಿ…
ನವವಿವಾಹಿತೆಯೊಬ್ಬಳ ದಾಂಪತ್ಯ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮದುವೆಗೂ…
ದೆಹಲಿಯ ಮುನಿರ್ಕಾ ಪ್ರದೇಶದಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದರಲ್ಲಿ, ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿಯೊಬ್ಬ ಆಕೆಯ ಶವವನ್ನು ವಿಲೇವಾರಿ ಮಾಡಲು ಸ್ನೇಹಿತನ…
ಸೆಪ್ಟೆಂಬರ್ 1ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ | ಹಂಪಿಯ ಕೋರ್, ಬಫರ್ ಹಾಗೂ ಬಾಹ್ಯ ವಲಯಗಳಲ್ಲಿ ನಿಯಮ ಉಲ್ಲಂಘನೆ…