ಅಫಜಲಪೂರ: ಮಳೆ ಇಲ್ಲದೆ ಭೀಮಾ ನದಿಯಲ್ಲಿ ನೀರಿಲ್ಲದೆ ರೈತರು ಪರದಾಡುತ್ತಿದ್ದು 13 ದಿನಗಳಕಾಲ ಆಮರಣಾಂತ ಉಪವಾಸ ಸತ್ಯಾಗ್ರಹ ಕುಳಿತು ಶಿವಕುಮಾರ್ ನಾಟಿಕರವರು ಸೊನ್ನ ಬ್ಯಾರೇಜ್ಗೆ 1 ಟಿಎಂಸಿ ನೀರು ಬಿಡುಗಡೆ ಮಾಡಿಸಿದರು ಇಂತಹ ಪರಿಸ್ಥಿತಿಯಲ್ಲಿ ಭೀಮಾ ನದಿಯನ್ನು ಅವಲಂಬಿಸಿ ಬದುಕುತ್ತಿರುವ ಸಾಕಷ್ಟು ರೈತರು ನೀರಿಲ್ಲದೆ ಪರದಾಡುತ್ತಿದ್ದಾರೆ ಆದರೆ ಇಲ್ಲಿನ ಮರುಳ ದಂದೆಕೋರರು ಮಾತ್ರ ಯಾವುದೇ ಅಧಿಕಾರಿಗಳ ಭಯವಿಲ್ಲದೆ ರಾಜಾರೋಷವಾಗಿ ಮರಳದಂದೆ ಮಾಡುತ್ತಿದ್ದಾರೆ. ದೇವಲ ಗಾಣಗಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೆಲವು ಹಳ್ಳಿಗಳ ನದಿಯ ದಡದಲ್ಲಿ ಅಕ್ರಮ ಮರುಳು ಸಂಗ್ರಹಣೆ ಮಾಡಿ ರಾತ್ರೋರಾತ್ರಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್ಗಳ ಮುಖಾಂತರ ಮರಳನ್ನು ಸಾಗಿಸುವ ದಂದೆ ಎಗ್ಗಿಲ್ಲದೆ ನಡೆಯುತ್ತಿದೆ. ಅದಲ್ಲದೆ ಮರಳದಂದೆ ಕೋರರು ಹೇಳುವ ಪ್ರಕಾರ ನಾವು ಪೊಲೀಸರಿಗೆ ಹಫ್ತಾ ನೀಡಿ ಮರಳು ದಂಧೆಯನ್ನು ಮಾಡುತ್ತಿದ್ದೇವೆಂದು ಹೇಳುತ್ತಿದ್ದಾರೆ ಹಾಗಾದರೆ ಕೆಲವು ಪೊಲೀಸ್ ಪೇದೆಗಳು ಶಾಮಿಲಾಗಿದ್ದಾರೆಯೇ?? ಅನುಮಾನ ಕಾಡುತ್ತಿದೆ.ಗುಳೂರ,ಬಟಗೇರಿ, ದೇವಲ ಗಣಗಾಪುರ್ ಸಂಗಮದ್ ನದಿಯ ದಡದಲ್ಲಿ ಯಾವುದೇ ಪರವಾನಿಗೆಲ್ಲದೆ ಅಕ್ರಮ ಮರಳು ಸಂಗ್ರಹಣೆ ಮಾಡಿದ್ದಾರೆ. ಕ್ರಮ ಕೈಗೊಳ್ಳಬೇಕಾದ ಗಣಿ ಅಧಿಕಾರಿಗಳು ಮೌನವಾಗಿದ್ದಾರೆ? ಸರ್ಕಾರದ ನಿಯಮಗಳಿಗೆ ಬೆಲೆ ಇಲ್ಲದಂತಾಗಿದೆ. ಈಗಲಾದರೂ ದೇವಲ ಗಾಣಗಾಪುರ್ ಠಾಣೆಯ ಪಿಎಸ್ಐ ಸಾಹೇಬರೇ ಅಕ್ರಮ ಮರಳು ದಂದೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಯಾವುದೇ ಅಕ್ರಮದಂದೆ ನಡೆಯದಂತೆ ಕ್ರಮ ಜರುಗಿಸಿ.
ವರದಿ : ಸಂಗಮೇಶ್ ಸರಡಗಿ
ಬಾಗಲಕೋಟೆ: ಹೊಸ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ಎಎಸ್ಐ ಒಬ್ಬರು ಮಾರ್ಗಮಧ್ಯೆಯೇ ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ…
ಧಾರವಾಡ: ಪತ್ನಿ ದೈಹಿಕವಾಗಿ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಅಮಾನುಷ ಘಟನೆ ಧಾರವಾಡ ಜಿಲ್ಲೆಯ…
ರಾಮನಗರ: ತಾಲೂಕಿನ ಸಂಗಬಸವನದೊಡ್ಡಿ ಗ್ರಾಮದಲ್ಲಿ ಹಣ ಕೇಳಲು ಬಂದಿದ್ದ ವೃದ್ಧೆಯನ್ನು ಕೊಲೆ ಮಾಡಿ, ಶವವನ್ನು ರೈಲ್ವೆ ಹಳಿ ಬಳಿ ಎಸೆದಿದ್ದ…
ನವದೆಹಲಿ: ಸೌತೆಕಾಯಿ ಕೃಷಿ ಯೋಜನೆಗಾಗಿ ಸುಮಾರು 99 ಲಕ್ಷ ರೂ. ಸರ್ಕಾರಿ ಸಬ್ಸಿಡಿ ಪಡೆದಿರುವ ಕೇಂದ್ರ ಕೃಷಿ ಮತ್ತು ರೈತರ…
ಮುಂಬೈ: ನಟಿ ಆಕಾಂಕ್ಷಾ ಚಮೋಲಾ ಅವರು ಲಾಕ್ ಅಪ್ ಸೀಸನ್ 2 ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತು ಆಘಾತಕಾರಿ…
ಬೆಂಗಳೂರು: ರಾಜ್ಯ ಸರ್ಕಾರ ಆಡಳಿತಾತ್ಮಕ ಪುನರ್ವ್ಯವಸ್ಥೆಯ ಭಾಗವಾಗಿ ಸ್ಥಳ ನಿಯುಕ್ತಿ ನಿರೀಕ್ಷೆಯಲ್ಲಿದ್ದ ನಾಲ್ವರು ಐಎಎಸ್ ಅಧಿಕಾರಿಗಳನ್ನು ವಿವಿಧ ಪ್ರಮುಖ ಹುದ್ದೆಗಳಿಗೆ…