ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಅತೀವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಯುವತಿಯೊಬ್ಬಳ ಮೇಲೆ ಗಂಡ ದೌರ್ಜನ್ಯ ಎಸಗುತ್ತಿದ್ದಾಗ, ಪತ್ನಿಯೇ ಹೊರಗೆ ಕಾವಲು ಕಾಯುತ್ತಿದ್ದರೆಂಬ ಆರೋಪ ಕೇಳಿಬಂದಿದೆ. ಈ ಪ್ರಕರಣದಲ್ಲಿ ಮಹಿಳೆ, ಆಕೆಯ ಪತಿ ಹಾಗೂ ಮೈದುನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ವರದಿ ಪ್ರಕಾರ, ಗುಲಾಬಗಂಜ್ ನಿವಾಸಿಯಾದ ಯಾಸ್ಮೀನ್ ಖಾನ್ ಬ್ಯೂಟಿ ಪಾರ್ಲರ್ ತರಬೇತಿ ನೀಡುತ್ತಿದ್ದಳು. ಈ ವೇಳೆ ಆಕೆಯ ಪತಿ ಶರೀಫ್ ಖಾನ್ ಕೂಡ ಅಲ್ಲೇ ಇರುತ್ತಿದ್ದನು. ಸುಮಾರು ನಾಲ್ಕು ತಿಂಗಳ ಹಿಂದೆ ಸಂತ್ರಸ್ತೆಯನ್ನು ತನ್ನ ಮನೆಗೆ ಬರಲು ಯಾಸ್ಮೀನ್ ಹೇಳಿದ್ದಳು. ಆದರೆ ಯುವತಿ ಮನೆಗೆ ಹೋದಾಗ ಯಾಸ್ಮೀನ್ ಬದಲಾಗಿ ಶರೀಫ್ ಇದ್ದನು.
ಯಾಸ್ಮೀನ್ ಬರುವುದಕ್ಕಾಗಿ ಕಾಯುತ್ತಿದ್ದ ವೇಳೆ, ಶರೀಫ್ ಯುವತಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ನಂತರ ಈ ವಿಷಯವನ್ನು ಹೊರಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ, ಸಂತ್ರಸ್ತೆ ಭಯದಿಂದ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ.
ಆದರೆ ನಂತರ ಯಾಸ್ಮೀನ್ ಬಳಿ ಈ ವಿಚಾರ ತಿಳಿಸಿದರೂ, ಆಕೆ ಗಂಭೀರವಾಗಿ ಪರಿಗಣಿಸದೇ, ಬದಲಿಗೆ ಯುವತಿಯನ್ನು ಮತ್ತೆ ಮತ್ತೆ ಮನೆಗೆ ಕರೆಸಿ ಗಂಡನೊಂದಿಗೆ ಇರಲು ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಶರೀಫ್ ಒಳಗೆ ದೌರ್ಜನ್ಯ ನಡೆಸುತ್ತಿದ್ದಾಗ, ಯಾಸ್ಮೀನ್ ಹೊರಗೆ ಕಾವಲು ಕಾಯುತ್ತಿದ್ದಳು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಮತ್ತೆ ಮನೆಗೆ ಬರಲು ಒತ್ತಾಯಿಸಿ, ಬಾರದಿದ್ದರೆ ಘಟನೆ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಲಾಗಿದೆ. ಯುವತಿ ಮನೆಗೆ ಹೋದಾಗ, ಯಾಸ್ಮೀನ್, ಶರೀಫ್ ಮತ್ತು ಆಕೆಯ ಮೈದುನ ಮುವೀನ್ ಖಾನ್ ಇದ್ದರು. ಈ ವೇಳೆ ಯುವತಿಯನ್ನು ಕೋಣೆಗೆ ಎಳೆದೊಯ್ದು ಮತ್ತೆ ದೌರ್ಜನ್ಯ ಮಾಡಲು ಯತ್ನಿಸಿದಾಗ, ಆಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಜಗಳ ಉಂಟಾಗಿ, ಶರೀಫ್ ಗಾಯಗೊಂಡಿದ್ದಾನೆ.
ಆತಂಕಗೊಂಡ ಯುವತಿ ತಕ್ಷಣ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಕುಟುಂಬಸ್ಥರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮಹಾರಾಷ್ಟ್ರದ Nasik Police 67 ವರ್ಷದ ಸ್ವಯಂ ಘೋಷಿತ ಜ್ಯೋತಿಷಿ-ದೇವಮಾನವ ಅಶೋಕ್ ಖರತ್ ವಿರುದ್ಧ ಗಂಭೀರ ಆರೋಪಗಳ ಮೇಲೆ ಹಲವು…
ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ರಾಜ್ಯ ಸರ್ಕಾರ ಮಹತ್ವದ ಹಾಗೂ…
ಕಳೆದ ಡಿಸೆಂಬರ್ನಲ್ಲಿ ನಡೆದಿದ್ದ ಬ್ಯಾಂಕ್ ಉದ್ಯೋಗಿ ಭುವನೇಶ್ವರಿ (39) ಹತ್ಯೆ ಪ್ರಕರಣದಲ್ಲಿ ಮಾಗಡಿ ಠಾಣೆ ಪೊಲೀಸರು ತನಿಖೆ ಪೂರ್ಣಗೊಳಿಸಿ, ಏಳು…
ರಾಜಧಾನಿ ಬೆಂಗಳೂರಿನಲ್ಲಿ ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ಪ್ರಕರಣಕ್ಕೆ ಅಚ್ಚರಿಯ ತಿರುವು ಸಿಕ್ಕಿದ್ದು, ಇದರ ಹಿಂದೆ ಪತ್ನಿಯೇ…
ತುಮಕೂರು ನಗರದ ಬನಶಂಕರಿ ಪ್ರದೇಶದಲ್ಲಿ ಕೌಟುಂಬಿಕ ಕಲಹ ಭೀಕರ ರೂಪ ತಾಳಿದ್ದು, ಯುವಕನೊಬ್ಬ ಅಣ್ಣನ ಕೈಯಲ್ಲಿ ಕೊಲೆಯಾಗಿರುವ ಘಟನೆ ಬೆಳಕಿಗೆ…
ಜೈಲುಗಳಲ್ಲಿ ಕೈದಿಗಳು ಐಶಾರಾಮಿ ಜೀವನ ನಡೆಸುತ್ತಿರುವ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಧಾರವಾಡ ಕೇಂದ್ರ ಕಾರಾಗೃಹದಿಂದಲೇ ಪೋಕ್ಸೋ ಪ್ರಕರಣದ ಆರೋಪಿಯೊಬ್ಬ…