Categories: CrimeLatest

ತುಮಕೂರಿನಲ್ಲಿ ಅಣ್ಣನಿಂದ ತಮ್ಮನ ಕೊಲೆ, ತಂದೆಯೂ ಸಾತ್; ಅತ್ತಿಗೆ ಜೊತೆ ಆಕ್ರಮ ಸಂಬಂಧವೇ ಕಾರಣ.

ತುಮಕೂರು ನಗರದ ಬನಶಂಕರಿ ಪ್ರದೇಶದಲ್ಲಿ ಕೌಟುಂಬಿಕ ಕಲಹ ಭೀಕರ ರೂಪ ತಾಳಿದ್ದು, ಯುವಕನೊಬ್ಬ ಅಣ್ಣನ ಕೈಯಲ್ಲಿ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ತಂದೆಯೂ ಸಾಥ್ ನೀಡಿದ್ದಾನೆ ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ಸ್ಟಾಲಿನ್ (29) ಮೃತನಾಗಿದ್ದು, ಆತನ ಅಣ್ಣ ನವೀನ್ ಹಾಗೂ ತಂದೆ ಜಾನ್ ಪಾಲ್ ಆರೋಪಿಗಳಾಗಿದ್ದಾರೆ. ಘಟನೆಯು ಮಾರ್ಚ್ 22ರಂದು ನಡೆದಿದ್ದರೂ, ತಡವಾಗಿ ಬಹಿರಂಗವಾಗಿದೆ.

ಮೂಲಗಳ ಪ್ರಕಾರ, ಸ್ಟಾಲಿನ್‌ಗೆ ಜನಿಫರ್ ಎಂಬ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಗೂ ಮುನ್ನ, ಸ್ಟಾಲಿನ್ ಹಾಗೂ ಆತನ ಅತ್ತಿಗೆ (ಅಣ್ಣನ ಪತ್ನಿ) ನಡುವೆ ಅಕ್ರಮ ಸಂಬಂಧವಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಷಯವಾಗಿ ಕುಟುಂಬದಲ್ಲಿ ಕಳೆದ ಒಂದು ವಾರದಿಂದ ತೀವ್ರ ಗಲಾಟೆ ನಡೆಯುತ್ತಿತ್ತು.

ಈ ಗಲಾಟೆ ವಿಕೋಪಕ್ಕೆ ತಲುಪಿದ ಪರಿಣಾಮ, ಮಾರ್ಚ್ 22ರಂದು ನವೀನ್ ತನ್ನ ತಮ್ಮ ಸ್ಟಾಲಿನ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಈ ಘಟನೆ ಮುಚ್ಚಿಹಾಕಲು ತಂದೆ-ಮಗ ಸೇರಿ ಯತ್ನಿಸಿದ್ದರು.

ಸ್ಟಾಲಿನ್ ಗಾಯಗೊಂಡಿರುವುದನ್ನು ಬೈಕ್ ನಿಲ್ಲಿಸುವಾಗ ಬಿದ್ದು ಕಂಬಿ ತಾಗಿ ಹೊಟ್ಟೆಗೆ ಗಾಯವಾಗಿದೆ ಎಂದು ಹೇಳಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಐದು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಮೊದಲು ಆಸ್ಪತ್ರೆ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಪರಿಶೀಲನೆ ನಡೆಸಿದಾಗ ಗಾಯದ ಸ್ವರೂಪದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ತನಿಖೆ ತೀವ್ರಗೊಳಿಸಿದ ವೇಳೆ ತಂದೆ ಜಾನ್ ಪಾಲ್ ಮೊದಲಿಗೆ ತಪ್ಪು ಮಾಹಿತಿ ನೀಡಿದರೂ, ಬಳಿಕ ಸತ್ಯ ಬಹಿರಂಗಪಡಿಸಿದ್ದು, ಕೊಲೆ ರಹಸ್ಯ ಬಯಲಾಗಿದೆ.

ಪ್ರಸ್ತುತ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ಕ್ರಿಕೆಟ್‌ನ ಕರಾಳ ಮುಖ ಬಯಲು? ಆಯ್ಕೆಗೆ ಲೈಂಗಿಕ ಆಮಿಷ, ದುಬಾರಿ ಗಿಫ್ಟ್ ಆರೋಪ!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ಪಾಡ್‌ಕಾಸ್ಟ್ ವಿಡಿಯೋ ಇದೀಗ ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಾಜಿ…

6 hours ago

ಸುಜಾತ ಭೂಮಿ ವಿವಾದಕ್ಕೆ ಹೊಸ ತಿರುವು: ರೈತರ ಪರ ನಿಂತ ಹರತಾಳು ಹಾಲಪ್ಪ, ಡಿಎಫ್‌ಒಗೆ ಮನವಿ

ಸಾಗರ ತಾಲೂಕಿನ ಅಡ್ಡೇರಿ ಗ್ರಾಮದ ರೈತ ಮಹಿಳೆ ಸುಜಾತ ಅವರ ಭೂಮಿ ವಿವಾದ ಇದೀಗ ಹೊಸ ಹಂತ ತಲುಪಿದ್ದು, ಮಾಜಿ…

1 day ago

ಕಚೇರಿಯನ್ನೇ ಮದ್ಯಪಾನದ ಅಡ್ಡೆಯನ್ನಾಗಿಸಿದ ಅಧಿಕಾರಿಗಳು; ಎಇಇ ಸೇರಿ ಮೂವರು ಸಸ್ಪೆಂಡ್

ರಾಯಚೂರಿನಲ್ಲಿ ಸರ್ಕಾರಿ ಕಚೇರಿಯಲ್ಲೇ ಗುಂಡು-ತುಂಡಿನ ಪಾರ್ಟಿ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಮೂವರು ಸಿಬ್ಬಂದಿಯನ್ನು…

1 day ago

ಕಳ್ಳತನ ನಡೆದ 8 ಗಂಟೆಯೊಳಗೆ ಇಬ್ಬರು ಆರೋಪಿಗಳ ಬಂಧನ, ಲಕ್ಷಾಂತರ ಮೌಲ್ಯದ ಚಿನ್ನ-ನಗದು ವಶ

ಭಟ್ಕಳ: ಮನೆ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಹಾಗೂ ನಗದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೇವಲ…

2 days ago

ಕಾರವಾರದಲ್ಲಿ 100 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಂಪುಟ ಅಸ್ತು!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜನತೆಯ ಬಹುದಿನಗಳ ಕನಸಿಗೆ ಕೊನೆಗೂ ಜಯ ಸಿಕ್ಕಿದೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ…

2 days ago

3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಅರೆಸ್ಟ್!

ಹಳಿಯಾಳ: ಸುಲಿಗೆ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ಮೂರು ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್‌ನ್ನು…

2 days ago