ಹುಬ್ಬಳ್ಳಿ (ಆ.4): ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಹುಬ್ಬಳ್ಳಿನ ನೇಹಾ ಹತ್ಯೆ ಪ್ರಕರಣದಲ್ಲಿ ಮತ್ತೊಂದು ವಿವಾದಾತ್ಮಕ ಬೆಳವಣಿಗೆ ನಡೆದಿದೆ. ಈ ಕೃತ್ಯದಲ್ಲಿ ಅರೆಸ್ಟ್ ಆಗಿರುವ ಆರೋಪಿ ಫಯಾಜ್ ಇದೀಗ ಜಾಮೀನಿಗಾಗಿ ಕೋರ್ಟ್ ಮೆಟ್ಟಿಲೇರಿದ್ದು, ತನ್ನ ಅರ್ಜಿಯಲ್ಲಿ ನಟ ದರ್ಶನ್ ಉದಾಹರಣೆ ನೀಡಿರುವುದು ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಫಯಾಜ್ ಜಾಮೀನು ಅರ್ಜಿ ಸಲ್ಲಿಸುತ್ತಾ, “ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ಗೆ ಜಾಮೀನು ಸಿಕ್ಕಿದೆ. ಅತೀವ ಪಾಪ ಮಾಡಿಕೊಂಡ ಅವನಿಗೆ ಜಾಮೀನು ಸಿಗಬಹುದಾದರೆ ನನಗೂ ಸಹ ಜಾಮೀನು ನೀಡಬೇಕು” ಎಂಬ ವ್ಯಾಖ್ಯಾನವನ್ನು ಅರ್ಜಿಯಲ್ಲಿ ಮುಂದಿಟ್ಟಿದ್ದಾನೆ. ಈ ಅರ್ಜಿ ಈಗ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿದ್ದು, ಆಗಸ್ಟ್ 4ರಂದು ಅಂತಿಮ ಆದೇಶ ಹೊರಬೀಳಲಿದೆ.
ಆರೋಪಿಯ ಈ ಬೇಡಿಕೆ ಕೇಳಿದ ನೇಹಾ ತಂದೆ ನಿರಂಜನ್ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಟರು ಸಮಾಜಕ್ಕೆ ಮಾದರಿಯಾಗಬೇಕಾದವರು. ಆದರೆ ದರ್ಶನ್ ತನ್ನ ನಟನೆಯಿಂದ ಇಲ್ಲ, ಹತ್ಯೆ ಪ್ರಕರಣದಲ್ಲಿ ಹೆಸರು ಬರುತ್ತಿರುವ ರೀತಿಯಿಂದ ಮಾತ್ರ ಮಾದರಿಯಾಗಿದ್ದಾರೆ. ಇಂಥ ದುಷ್ಟರಿಗೆ ಜಾಮೀನು ಸಿಗೋದು ನೋವು ತಂದಿದೆ. ನನ್ನ ಮಗಳಂತೆ ಯಾರಿಗೂ ಅನ್ಯಾಯ ಆಗಬಾರದು. ಮಗಳಿಗೆ ನ್ಯಾಯ ಸಿಗಬೇಕು” ಎಂದು ಅವರು ಕಣ್ಣೀರಿನಿಂದ ಪ್ರತಿಕ್ರಿಯಿಸಿದ್ದಾರೆ.
ಘಟನೆ ಹಿನ್ನಲೆ:
ಹುಬ್ಬಳ್ಳಿಯ ಈ ಹೃದಯವಿದ್ರಾವಕ ಘಟನೆ 2024ರ ಏಪ್ರಿಲ್ 18ರಂದು ಸಂಜೆ 4:45ರ ಹೊತ್ತಿಗೆ ನಡೆದಿತ್ತು. ನೇಹಾ ಹಿರೇಮಠ ಕಾಲೇಜಿನಿಂದ ಹೊರಬರುತ್ತಿದ್ದಾಗ, ಆರೋಪಿ ಫಯಾಜ್ ಆಕೆಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ. ಆಕೆಯ ಕುತ್ತಿಗೆ, ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ನಿರ್ದಯವಾಗಿ ಇರಿದು ಹತ್ಯೆಗೈದಿದ್ದನು. ನಂತರ, ಆಸ್ಪತ್ರೆಯ ಹಿಂಭಾಗದಲ್ಲಿ ತಾವೆಯಾಗಿ ಕುಳಿತಿದ್ದ ಆರೋಪಿ, ಪೊಲೀಸರ ಕೈಯಲ್ಲಿ ಬಿದ್ದನು.
ಈ ಪ್ರಕರಣ ರಾಜ್ಯದಾದ್ಯಂತ ಆಕ್ರೋಶದ ಅಲೆ ಎಬ್ಬಿಸಿದ್ದರೂ, ಈಗ ಆರೋಪಿಯ ಜಾಮೀನು ಅರ್ಜಿಯಲ್ಲಿ ನಟ ದರ್ಶನ್ ಉಲ್ಲೇಖವಾಗಿರುವುದು ಇನ್ನಷ್ಟು ಭಿನ್ನಮತ ಹುಟ್ಟುಹಾಕಿದೆ. ನ್ಯಾಯಾಲಯ ಈ ಪ್ರಕರಣಕ್ಕೆ ಏನೆಂದು ತೀರ್ಪು ನೀಡುತ್ತದೆ ಎಂಬುದು ಇದೀಗ ಎಲ್ಲರ ಗಮನ ಸೆಳೆದಿದೆ.
ತುಮಕೂರು ಜಿಲ್ಲೆಯ ಮದರಸಾವೊಂದರಲ್ಲಿ ಅಪ್ರಾಪ್ತ ಮಕ್ಕಳ ಮೇಲೆ ಅಮಾನವೀಯ ದೌರ್ಜನ್ಯ ಮತ್ತು ಬಾಲಕಾರ್ಮಿಕ ಶೋಷಣೆ ನಡೆಸಲಾಗುತ್ತಿದ್ದ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ…
ಅಟ್ರಾಸಿಟಿ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದಡಿ ಗುರುಮಠಕಲ್ ಪೊಲೀಸ್ ಠಾಣೆಯ ಸಿಪಿಐ ವೀರಣ್ಣ…
ಚಿಕ್ಕಬಳ್ಳಾಪುರ ನಗರ ಹೊರವಲಯದ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಕಾಲೇಜು ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಕಾಲೇಜು…
ಬೆಳ್ತಂಗಡಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕ್ಯಾಂಟಿನ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ…
ಭಟ್ಕಳ: ಸುಮಾರು ಒಂದು ವರ್ಷದಿನಿಂದ ಖಾಲಿಯಾಗಿದ್ದ ಭಟ್ಕಳ ಉಪ ವಿಭಾಗಾಧಿಕಾರಿ (ಎಸಿ) ಹುದ್ದೆಗೆ ಕೊನೆಗೂ ಸರ್ಕಾರ ಅಧಿಕಾರಿಯನ್ನು ನೇಮಕ ಮಾಡಿದ್ದು,…
ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾಗಿದ್ದ ಡಿ. ಸುಧಾಕರ್ (65) ಅವರು ಅನಾರೋಗ್ಯದಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಕಳೆದ…