Latest

ಕುಡಿಯಲು ಹಣ ನೀಡದ ತಾಯಿಯನ್ನು ಮಗನೇ ಕೊಂದ ಭೀಕರ ಘಟನೆ : ಶವ ಪಕ್ಕದಲ್ಲೇ ಮಲಗಿದ ಹಂತಕ

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲ್ಲೂಕಿನ ಹಕ್ಕಿಮಕ್ಕಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಕುಡಿಯಲು ಹಣ ಕೇಳಿದ ಮಗನಿಗೆ ತಾಯಿ ನಿಷೇಧಿಸಿದ್ದಕ್ಕೆ ಮಗನೇ ಆಕೆಯನ್ನು ಕೊಂದು, ಶವವನ್ನು ಅರ್ಧಸುಟ್ಟಿದ್ದಾನೆ. ಮತ್ತಷ್ಟು ಭೀಕರತೆ ಎಂಬರೆಂದರೆ, ತಾಯಿಯ ಶವ ಪಕ್ಕದಲ್ಲೇ ಆತ ಮಲಗಿದ್ದ.

ಮೃತನ್ನು ಭವಾನಿ (55) ಎಂದು ಗುರುತಿಸಲಾಗಿದೆ. ಆರೋಪಿ ಪುತ್ರ ಪವನ್ ಎಂಬಾತನು ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿನ ಬಾರ್‌ನ ಕೆಲಸ ಬಿಟ್ಟು ಗ್ರಾಮಕ್ಕೆ ಮರಳಿದ್ದ. ಗ್ರಾಮದಲ್ಲಿ ಆಕೆ ವಾಸದಲ್ಲಿ ಇದ್ದ ಮನೆಯೊಂದರಲ್ಲಿ ಈ ಕೊಲೆ ನಡೆದಿದೆ.

ಪವನ್ ಮದ್ಯದ ನಶೆಯಲ್ಲಿ ತಾಯಿಯಿಂದ ಹಣ ಕೇಳಿದ್ದ. ಹಣ ನೀಡಲು ತಾಯಿಯೊಬ್ಬಳು ನಿರಾಕರಿಸಿದ್ದಕ್ಕೆ ಇಬ್ಬರ ನಡುವೆ ಜಗಳ ಸಂಭವಿಸಿದೆ. ಈ ಹಿನ್ನಲೆಯಲ್ಲಿ ಪವನ್ ಕೊಡಲಿಯಿಂದ ಕೊಚ್ಚಿ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ನಂತರ ಶವವನ್ನು ಸುಡಲು ಯತ್ನಿಸಿದ್ದು, ಅರ್ಧ ಸುಟ್ಟುಹೋಗಿರುವ ಸ್ಥಿತಿಯಲ್ಲಿ ಪೊಲೀಸರು ಶವವನ್ನು ಪತ್ತೆ ಹಚ್ಚಿದ್ದಾರೆ.

ಆಲ್ದೂರು ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪವನ್‌ನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ತೀವ್ರ ನಿಂದನೆಗೆ ಕಾರಣವಾಗಿರುವ ಈ ಅಮಾನುಷ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದ್ದು, ಕಾಫಿನಾಡು ಶೋಕಸಾಗರದಲ್ಲಿ ಮುಳುಗಿದಂತಾಗಿದೆ.

ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

***

“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392

nazeer ahamad

Recent Posts

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ತಕ್ಷಣ ಶಾಸಕ ಸ್ಥಾನ ರದ್ದು, ಮುಂದೇನು?

ಧಾರವಾಡ ಜಿಪಂ ಮಾಜಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್…

9 hours ago

ಪೆಟ್ರೋಲ್ ಬಂಕ್ ನಕಾಶೆ ಅಪ್ಲೋಡ್‌ಗೆ ಹಣ ಬೇಡಿಕೆ – ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ವಿಜಯಪುರ ಜಿಲ್ಲೆಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಸಿಲುಕಿರುವ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಜಾಗದ…

9 hours ago

ಖಾತೆಗಾಗಿ ಲಂಚ ಬೇಡಿಕೆ: ನೆಲಮಂಗಲದ ಕಳಲುಘಟ್ಟ ಪಿಡಿಓ ಲೋಕಾಯುಕ್ತ ಬಲೆಗೆ

ನಿವೇಶನದ ಖಾತೆ ಮಾಡಿಕೊಡಲು ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯಿತಿ ಪಿಡಿಓ ಲೋಕಾಯುಕ್ತ…

12 hours ago

ವಿಷು ಪೋಸ್ಟರ್ ವಿವಾದ: ಶ್ರೀಕೃಷ್ಣನ ಪಕ್ಕದಲ್ಲಿ ಚಿಕನ್ ಚಿತ್ರ – ರೆಸ್ಟೋರೆಂಟ್ ಮಾಲೀಕ ಆರೆಸ್ಟ್.!!!

ಕೇರಳದ ಅಲೆಪ್ಪಿ ಜಿಲ್ಲೆಯ ಚೆರ್ತಲಾದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್ ಒಂದು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಪೋಸ್ಟರ್‌ನಲ್ಲಿ ಶ್ರೀಕೃಷ್ಣನ…

14 hours ago

ಹಾರ್ಮುಝ್ ಜಲಸಂಧಿ ಮತ್ತೆ ತೆರೆಯಿತು: ಯುದ್ಧ ವಿರಾಮದ ಬಳಿಕ ಜಾಗತಿಕ ತೈಲ ಮಾರುಕಟ್ಟೆಗೆ ನೆಮ್ಮದಿ

ಇರಾನ್ ಮತ್ತು ಲೆಬನಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಶಮನವಾಗುತ್ತಿರುವ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹಾರ್ಮುಝ್ ಜಲಸಂಧಿಯನ್ನು ಮತ್ತೆ ಎಲ್ಲಾ…

14 hours ago

ಇನ್‌ಸ್ಟಾಗ್ರಾಮ್ ಹನಿಟ್ರ್ಯಾಪ್: 14 ವರ್ಷದ ಬಾಲಕ ಅಪಹರಣ – 1 ಕೋಟಿ ಸುಲಿಗೆ ಯತ್ನ, ಸಂಬಂಧಿಯೇ ಮಾಸ್ಟರ್ ಮೈಂಡ್!

ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮೂಲಕ ನಡೆದ ಅಪಹರಣ ಪ್ರಕರಣ ಭಾರೀ ಸಂಚಲನ ಮೂಡಿಸಿದೆ. 14…

14 hours ago