ಇಂದೋರ್: ಇಂದೋರ್ನ ನಂದಲಾಲ್ಪುರ ಪ್ರದೇಶದಲ್ಲಿ ಮಂಗಳಮುಖಿ ಸಮುದಾಯದೊಳಗೆ ತೀವ್ರ ಸಂಘರ್ಷ ಮತ್ತು ಆಘಾತಕಾರಿ ಆರೋಪಗಳು ಬೆಳಕಿಗೆ ಬಂದಿವೆ. ಕೆಲವು ಮುಸ್ಲಿಂ ಮಂಗಳಮುಖಿ ಸದಸ್ಯರು, ಹಿಂದೂ ಮಂಗಳಮುಖಿ ವ್ಯಕ್ತಿಗಳನ್ನು ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರಗೊಳಿಸಲು ಒತ್ತಾಯಿಸಿದ್ದಾರೆಯೆಂಬ ಆರೋಪ ಕೇಳಿಬಂದಿದೆ. ಅದಕ್ಕೂ ಹೆಷಾರಾಗಿ, ಮತಾಂತರಕ್ಕೆ ಒಪ್ಪದವರ ಮೇಲೆ HIV ಸೋಂಕಿತ ಸಿರಿಂಜ್ಗಳ ಮೂಲಕ ಉದ್ದೇಶಪೂರ್ವಕವಾಗಿ ಸೋಂಕು ಹರಡಿಸಿರುವುದು ಗುಡುಗು ಹಾಕುವಂತಹ ವಿಷಯವಾಗಿದೆ.
ಈ ಆರೋಪಗಳು ಪ್ರಸಾರವಾದ ಬಳಿಕ ಮಂಗಳಮುಖಿ ಸಮುದಾಯದಲ್ಲಿ ಭಯ ಮತ್ತು ಉದ್ವಿಗ್ನತೆ ಹೆಚ್ಚಾಗಿದೆ. ಇಂದೋರ್ ಪೊಲೀಸ್ ಆಯುಕ್ತ ಸಂತೋಷ್ ಕುಮಾರ್ ಸಿಂಗ್ ಅವರು ಈ ಪ್ರಕರಣದ ಗಂಭೀರತೆ ಗಮನಿಸಿ, ವಿಶೇಷ ತನಿಖಾ ತಂಡ (SIT) ರಚಿಸಿದ್ದಾರೆ. ತನಿಖಾ ತಂಡದಲ್ಲಿ DCP ರಿಷಿಕೇಶ್ ಮೀನಾ, ಡಿಷೆಸ್ ಅಗರವಾಲ್, IPS ಅಧಿಕಾರಿ ಆದಿತ್ಯ ಪಟೇಲ್ ಮತ್ತು ACP ಹೇಮಂತ್ ಚೌಹಾನ್ ಸೇರಿದ್ದಾರೆ.
ಆರೋಪಗಳ ಪ್ರಕಾರ, ಮಲೆಗಾಂವಿನ ಪಾಯಲ್ ಎನಿಸಿಕೊಂಡ ನಯೀಮ್ ಅನ್ಸಾರಿ ಮತ್ತು ಸೀಮಾ ಹಾಜಿ ಎಂಬ ಹೆಸರಿನಲ್ಲಿ ಗುರುತಿಸಲಾದ ಫರ್ಜಾನಾ ಈ ಮತಾಂತರ ಚಟುವಟಿಕೆಗೆ ಮುಂದಾಳತ್ವ ನೀಡುತ್ತಿದ್ದಾರೆ. ಸಕೀನಾ ಗುರು ಎಂಬವರು ತಮ್ಮ ಹಾಗೂ ತಮ್ಮ ಗುಂಪಿನ ಸದಸ್ಯರ ಅನುಭವದ ವಿವರಗಳನ್ನು ಹಂಚಿಕೊಂಡು, ಮತಾಂತರದ ಒತ್ತಡವನ್ನು ತಳ್ಳಿಹಾಕಿದ ಬಳಿಕ ಅವರೇ HIV ಸೋಂಕಿತ ಸಿರಿಂಜ್ಗಳಿಂದ ಇಂಜೆಕ್ಷನ್ ಪಡೆದಿರುವುದಾಗಿ ಆರೋಪಿಸಿದ್ದಾರೆ.
ಈ ಘಟನೆಯಿಂದಾಗಿ ಸುಮಾರು 60ಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದ್ದು, ಅವರಲ್ಲಿ 12 ಮಂದಿ ಇಂದೋರ್ನ ಮಹಾರಾಜ ಯಶವಂತ್ ರಾವ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿ ART ಕೇಂದ್ರದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರಕರಣ ಸಂಬಂಧ ಇಂದಾಗಲೇ ವಿಜಯ್ ನಗರ ಮತ್ತು ಚಂದನ್ ನಗರ ಪೊಲೀಸ್ ಠಾಣೆಗಳಲ್ಲಿ ದೈಹಿಕ ದಾಳಿ, ಅಪಹರಣ ಮತ್ತು ಬೆದರಿಕೆ ಸಂಬಂಧಿತ ಹಲವಾರು ದೂರುಗಳು ದಾಖಲಾಗಿವೆ. ಸಕೀನಾ ಗುರು ಅವರು ಮಾಹಿತಿ ನೀಡಿದಂತೆ, ಅವರ ಗುಂಪಿನ ಹಲವರು ಈಗಾಗಲೇ ಭಯದಿಂದಾಗಿ ಇಂದೋರ್ ನಗರವನ್ನು ತೊರೆದು ಹೋಗಿದ್ದಾರೆ.
ಸಮುದಾಯದೊಳಗಿನ ಧಾರ್ಮಿಕ ನಿಲುವು ಮತ್ತು ಬಲವಂತದ ಧರ್ಮಾಂತರಕ್ಕೆ ಸಂಬಂಧಿಸಿದ ಈ ಬೆಳವಣಿಗೆಗಳು ಸಾಮಾಜಿಕವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ನ್ಯಾಯಪ್ರಕ್ರಿಯೆಯ ಮೂಲಕ ಸತ್ಯ ಹೊರತೆಗೆಯಲು ಸಿದ್ಧತೆ ನಡೆಸುತ್ತಿದ್ದಾರೆ.
ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಈ ಆರೋಪಗಳ ಸತ್ಯಾಸತ್ಯತೆ ಶೀಘ್ರದಲ್ಲೇ ಬೆಳಕಿಗೆ ಬರುವ ನಿರೀಕ್ಷೆಯಿದೆ.
ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…
ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…
ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…
ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…
ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…
ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…